ಮಹಾಮಲೆಯ ವ್ಯಾಘ್ರನ ನೀರ ನಕ್ರ ಕಚ್ಚಿ,
ನಕ್ರನ ಹಂದಿ ಕಚ್ಚಿ, ಹಂದಿಯ ನಾಯಿ ಕಚ್ಚಿ,
ನಾಯಿಯ ಕಾಳೋರಗ ಕಚ್ಚಿ ಹೆಡೆಯೆತ್ತಿ ಆಡಲಾಗಿ,
ಆಕಾಶದ ಹದ್ದು ಕಂಡು ಎರಗಲಾಗಿ,
ಹೆಡೆಯುಡಿಗಿ ಸುನಿಗಳು ಬಿಟ್ಟು,
ಹಂದಿ ಸತ್ತು, ನಕ್ರ ಬಿದ್ದು, ವ್ಯಾಘ್ರ ಪಲಾಯನವಾಗಿ,
ಹಾವ ಹದ್ದು ಕಚ್ಚಿ, ಹದ್ದು ಹಾವ ಕಚ್ಚಿ,
ಹದ್ದಳಿದು ಹಾವು ಉಳಿದ ಭೇದವ
ತಾನೆ ಬಲ್ಲನಲ್ಲದೆ ಈ ಲೋಕದ ಜಡಜೀವಿಗಳೆತ್ತ ಬಲ್ಲರಯ್ಯ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.