ಅರಿವೆಂಬುದೆ ಕ್ರೀ, ಕ್ರೀಯೆಂಬುದೆ ನಿರವಯ.
ಅದೆಂತೆಂದಡೆ :
ಧರೆಯ ವಾರಿಯ ವಾಯು, ಆಕಾಶಕ್ಕೆ ತಂದು ಸುರಿವಂತೆ,
ಬಾವಿಯ ನೀರ, ಭಾಜನ ತಂದು ಕೊಡುವಂತೆ,
ಇಷ್ಟಲಿಂಗದ ನಿಷೆ* ದೃಷ್ಟವಾದಲ್ಲಿ,
ವಸ್ತುವ ಕಟ್ಟಿ ತಂದು ಕೊಡುವುದು.
ಕೊಡುವುದಕ್ಕೆ ಸಂದೇಹವಿಲ್ಲ.
ಅದಕ್ಕೆ ದೃಷ್ಟವ ಕೇಳುವುದಕ್ಕೆ, ಅನ್ಯಭಿನ್ನಕ್ಕೆ ತೆರಪಿಲ್ಲ.
ಐಘಟದೂರ ರಾಮೇಶ್ವರಲಿಂಗಕ್ಕೆ
ಸಾವಯ ನಿರವಯವೆಂಬುದಿಲ್ಲ.