ಅಥವಾ
(14) (2) (7) (0) (1) (1) (0) (0) (2) (0) (1) (1) (0) (0) ಅಂ (5) ಅಃ (5) (20) (0) (2) (0) (0) (1) (0) (0) (0) (0) (0) (1) (0) (0) (0) (5) (0) (1) (1) (4) (7) (1) (5) (3) (11) (0) (1) (0) (2) (5) (3) (0) (6) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅತೀಂದ್ರಿಯರೆಲ್ಲರೂ ಮದನನ ಮನೆಯ ಬೆಸಕುಡಿಕೆಯ ನೀರೆರೆವುದಕ್ಕೊಳಗಾದರು. ವ್ರತಿಗಳೆಲ್ಲರೂ ಹೊರಗೆ ಆಚಾರವನಿರಿಸಿ, ಒಳಗೆ ಭವಿಸಂಗದಲ್ಲಿ ಬಳಲುತ್ತೈದಾರೆ. ನಿರಾಶೆವಂತರು ಕೊಡುವರ ಬಾಗಿಲಲ್ಲಿ, ಇಕ್ಕುವರ ಮಂದಿರದಲ್ಲಿ ಸಿಕ್ಕಿ ಅಯಿದಾರೆ. ಇವಕ್ಕೆ ಹೊರಗಾಗು, ಐಘಟದೂರ ರಾಮೇಶ್ವರಲಿಂಗಕ್ಕೆ.
--------------
ಮೆರೆಮಿಂಡಯ್ಯ
ಅಂಬುಜಾತ ದ್ವಾರವಳಿವೆಳವಾದಡೆ, ನಾದಕ್ಕೆ ಸಿಕ್ಕುಂಟೆ ಅಯ್ಯಾ? ಶರೀರ ಸಂಪದದಲ್ಲಿದ್ದಡೆ, ಅರಿವು ಮಹದಲ್ಲಿ ನಿಂದು, ನೆರೆ ವಸ್ತು ತಾನಾದಲ್ಲಿ, ಬೇರೊಂದೆಡೆಯುಂಟೆ? ಕರಣಂಗಳ ಹಿಂಡಿಗೆ ಉರಿಯೆದ್ದ ನೆಲೆ, ನಷ್ಟವಾಗಿಯಲ್ಲದೆ ಬೇರೊಂದ ಹಿಡಿಯಲಿಲ್ಲ. ಅದು ಘಟಿಸಿ ನಿಂದಲ್ಲಿ, ಐಘಟದೂರ ರಾಮೇಶ್ವರಲಿಂಗ ತಾನೆ.
--------------
ಮೆರೆಮಿಂಡಯ್ಯ
ಅಂಗಲಿಂಗಸಂಬಂಧದಿರವು, ಬೀಜವೊಡೆದು, ಮೊಳೆದೋರುವಂತೆ, ಕುಸುಮ ಬಲಿದು, ದೆಸೆಗೆ ವಾಸನೆ ಪಸರಿಸುವಂತೆ, ಘನಲಿಂಗ ಘಟ, ಕುರುಹಿನಲ್ಲಿ ನಿಜದೋರುತ್ತದೆ. ಐಘಟದೂರ ರಾಮೇಶ್ವರಲಿಂಗ ಮೂರ್ತಿ, ಅಮೂರ್ತಿ ಆಗುತ್ತದೆ.
--------------
ಮೆರೆಮಿಂಡಯ್ಯ
ಅಸಿಯಾಗಲಿ ಕೃಷಿಯಾಗಲಿ, ವಾಚಕ ವಾಣಿಜ್ಯ ಮಸಿಯಾಗಲಿ, ಮಾಡುವಲ್ಲಿ ಹುಸಿಯಿಲ್ಲದಿರಬೇಕು. ಅದು ಅಸಮಾಕ್ಷನ ಬರವು, ಪಶುಪತಿಯ ಇರವು, ಐಘಟದೂರ ರಾಮೇಶ್ವರಲಿಂಗ ತಾನೆ.
--------------
ಮೆರೆಮಿಂಡಯ್ಯ
ಅಪ್ಪುವಿಲ್ಲದ ಏರಿ, ಚಿತ್ತವಿಲ್ಲದ ಘಟ, ನಿಜತತ್ವವನರಿಯದ ಪೂಜೆ, ವ್ಯರ್ಥವಾಯಿತ್ತು. ಅವನಿರವು, ಐಘಟದೂರ ರಾಮೇಶ್ವರಲಿಂಗವನರಿವುದೆ ?
--------------
ಮೆರೆಮಿಂಡಯ್ಯ
ಅರಿದವನಿರವು ಕಮಠನ ಅಂಗದಂತೆ, ಲಂಪಟನುಲುಹಿನ ಬೆಂಬಳಿಯ ಅಂಗವಾಸಿಯಂತಿರಬೇಕು. ಅದು ಲಿಂಗಾಂಗಿಯ ಬೆಡಗು. ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ಅದೇ ಸದ್ಭಾವದ ಗೊತ್ತು.
--------------
ಮೆರೆಮಿಂಡಯ್ಯ
ಅಂಗವ ಕಳೆದು ನಿಂದ ವಿಹಂಗವೈರಿಯಂತೆ, ಅಂಗಕ್ಕೆ ಅಸು ಹೊರತೆಯಾಗಿ ನಿಂದುದು. ಅದರಂಗ ಶುದ್ಧ, ಅದರಂದವಿರಬೇಕು. ತ್ರಿವಿಧವ ಹಿಡಿದ ಚಂದ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಅಶನದಾಸೆಗಾಗಿ ಆಚಾರವ ತಪ್ಪಿ, ವಿಷಯದಾಸೆಗಾಗಿ ವಿರಕ್ತಿಯ ಬಿಟ್ಟು, ಸಕಲರ ಕೂಟದಲ್ಲಿ ವಿಕಳತೆಗೊಂಬ ಪ್ರಕೃತಿಭಾವಿಗುಂಟೆ ನಿಜಭಕ್ತಿ, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ ?
--------------
ಮೆರೆಮಿಂಡಯ್ಯ
ಅಂಗದಲ್ಲಿ ಕಟ್ಟಿದ ವಸ್ತ್ರವ ಬಿಟ್ಟು ನೋಡಲಾಗಿ, ಲಿಂಗದ ಕುರುಹು ಇಲ್ಲದಿರೆ, ಇದೇನು ಅಂಗ ನಾಸ್ತಿಯಾದೆ, ಐಘಟವ ಬಿಟ್ಟು ಘಟ ನಾಸ್ತಿಯಾದೆ ಎಂಬುದಕ್ಕೆ ಮೊದಲೇ ಅಂಗ ಬಯಲಾಯಿತ್ತು, [ಐಘಟದೂರ] ರಾಮೇಶ್ವರಲಿಂಗದಲ್ಲಿ.
--------------
ಮೆರೆಮಿಂಡಯ್ಯ
ಅದ್ರಿಯಲ್ಲಿ ಕರೆಯೆ, ಆ ಶಬ್ದ ತನ್ನ ಒಡಗೂಡಿ ಕರೆದಂತೆ, ಚಿತ್ತ ನೆನೆದು ತಾ ಹೊತ್ತಿದ್ದ ಘಟವ ಎತ್ತಿಕೊಂಡು ಹೋಹಂತೆ, ವಿಹಂಗನ ರಟ್ಟೆಯಲ್ಲಿ ಮರಳುವ ಸಂಚಾರದ ಒಳುಪಿನಂತೆ, ಮಿಂಚಿನ ಸಂಚ ತೋರಿ, ಹಿಂಚುಮುಂಚಿಲ್ಲದಂತಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಅಂಗದಲ್ಲಿದ್ದು ಕೈಗೆ ಬಂದೆ. ಕೈಯಿಂದ ಮನಕ್ಕೇಕೆ ಬಾರೆಯಯ್ಯಾ ? ನಾ ಹಾಡಿ ನೀ ಕೇಳಿ, ಬಾಯಿ ಕಿವಿ ನೋವಿಲ್ಲವೆ ಅಯ್ಯಾ? ನೀ ಸಾವ ದಿನವಿಲ್ಲ, ನಾನುಳಿವ ದಿನವಿಲ್ಲ. ನಿನ್ನಂಗವಡಗದು, ಎನ್ನ ಮನವುಡುಗದು. ಕ್ರೀಯೆಂಬ ಹಾವಸೆಯಲ್ಲಿ ಸಿಕ್ಕಿ, ಮೇಲನರಿಯದೆ ತೊಳಲುತ್ತೈದೇನೆ. ಐಘಟಕ್ಕೆ ಠಾವ ಹೇಳಾ, ಐಘಟದೂರ ರಾಮೇಶ್ವರಲಿಂಗವೆ.
--------------
ಮೆರೆಮಿಂಡಯ್ಯ
ಅಪ್ಪುಮಯ ಬಲಿದು, ಜಗ ಸಾಕಾರವಾಗಿ ನಿಂದಲ್ಲಿ, ಧರೆ ಸಲಿಲ ಅನಲ ಕುರುಹಾಗಿ ನಿಂತಿತ್ತು. ಅವು ನಿಳಯಾಂತವಾಗಿ ವಾಯು ಘಟಿಸಿತ್ತು. ಇಂತಿವು ಪಂಚಬ್ರಹ್ಮಮೂರ್ತಿ ಐಘಟವಾಯಿತ್ತು, ಇಂತಿವು ಪ್ರಳಯಕ್ಕೊಳಗೆಂದು ಹೊರಗಾಗಿ ನಿಂದ, ಐಘಟದೂರ ರಾಮೇಶ್ವರಲಿಂಗ.
--------------
ಮೆರೆಮಿಂಡಯ್ಯ
ಅಪ್ಪುವಾಸವ ತುಂಬುವ ಲೆಪ್ಪಣದಂತೆ, ತುಂಬುವಲ್ಲಿ ಕಟ್ಟಿಲ್ಲ. ಸೂಸುವಲ್ಲಿ ಪರಿಮಳವಾದಂತೆ ಅರಿವಿನ ಭೇದ. ಇಷ್ಟದ ಮುಟ್ಟು, ಕಳೆಯ ಗೊತ್ತನರಿಯಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಅರಿವೆಂಬುದೆ ಕ್ರೀ, ಕ್ರೀಯೆಂಬುದೆ ನಿರವಯ. ಅದೆಂತೆಂದಡೆ : ಧರೆಯ ವಾರಿಯ ವಾಯು, ಆಕಾಶಕ್ಕೆ ತಂದು ಸುರಿವಂತೆ, ಬಾವಿಯ ನೀರ, ಭಾಜನ ತಂದು ಕೊಡುವಂತೆ, ಇಷ್ಟಲಿಂಗದ ನಿಷೆ* ದೃಷ್ಟವಾದಲ್ಲಿ, ವಸ್ತುವ ಕಟ್ಟಿ ತಂದು ಕೊಡುವುದು. ಕೊಡುವುದಕ್ಕೆ ಸಂದೇಹವಿಲ್ಲ. ಅದಕ್ಕೆ ದೃಷ್ಟವ ಕೇಳುವುದಕ್ಕೆ, ಅನ್ಯಭಿನ್ನಕ್ಕೆ ತೆರಪಿಲ್ಲ. ಐಘಟದೂರ ರಾಮೇಶ್ವರಲಿಂಗಕ್ಕೆ ಸಾವಯ ನಿರವಯವೆಂಬುದಿಲ್ಲ.
--------------
ಮೆರೆಮಿಂಡಯ್ಯ