ನರದೇಹವ ತೊಟ್ಟು, ತಾ ಗುರುವೆಂದು ಇದಿರಿಗೆ ಇಷ್ಟವ ಕೊಟ್ಟು,
ಅವರ ಮನೆಯಲ್ಲಿ ಒಲ್ಲದೆ, ಅಕ್ಕಿ ತುಪ್ಪವ ನೀಡಿಸಿಕೊಂಡು,
ಅಟ್ಟುಕೊಂಡುಂಬ ಮಿಟ್ಟೆಯಭಂಡರ ಕೈಯಲ್ಲಿ
ಕಟ್ಟಿಸಿಕೊಂಡ ಲಿಂಗ, ದೃಷ್ಟದಿ ಶ್ರವಕಾಯ.
ಇದನರಿತು, ಅಲ್ಲಿ ಹೊಕ್ಕು ಉಂಡವಂಗೆ
ಕರಟನ ಕೈಯ ಕೀಟಕ, ಆ ಕಾಕೂಳು,
ಘಟಿತಮಯ ಐಘಟದೂರ ರಾಮೇಶ್ವರಲಿಂಗ ಅವರ ಒಲ್ಲನಾಗಿ.