ತಾನಿರಿಸಿದ ಕಡವರವೆಂದಡೆ ಸಾಕ್ಷಿಯಿಲ್ಲದೆ
ಕುರುಹನರಿಯದೆ ಅಗೆಯಬಹುದೆ?
ಸಕಲ ವೇದ ಶಾಸ್ತ್ರ ಪುರಾಣ ಅಗಮಂಗಳ ತಾ ಬಲ್ಲೆನೆಂದಡೆ
ಕ್ರೀಯಿಲ್ಲದೆ ಜ್ಞಾನಹೀನವಾಗಿ ಭಾವಶುದ್ಧವಿಲ್ಲದೆ
ಮತ್ತೇನುವನರಿಬಲ್ಲನೆ?
ಇದು ಕಾರಣದಲ್ಲಿ ಕ್ರೀಗೆ ಪೂಜೆ, ಅರಿವಿಂಗೆ ತ್ರಿವಿಧದ ಬಿಡುಗಡೆ,
ಆ ಬಿಡುಗಡೆಯ ಅಡಿಯಮೆಟ್ಟಿದ ಶರಣ
ಉಂಡುಪವಾಸಿ ಬಳಸಿ ಬ್ರಹ್ಮಚಾರಿ.
ಪಳುಕಿನ ವರ್ತಿಯಂತೆ, ತಿಲರಸ ಅಪ್ಪುವಿನಂತೆ,
ಹೊದ್ದಿಯೂ ಹೊದ್ದದ ನಿಜಲಿಂಗಾಗಿಯ ಯೋಗ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ.
ಮಾತುಳಂಗ ಮದುಕೇಶ್ವರನು.
|| 43 ||