ಇದ್ದು ಜೀವನಲ್ಲ, ಸತ್ತು ಹೆಣನಲ್ಲ.
ಕತ್ತಲೆ ಮುಟ್ಟಿದ ಬೆಳಗಿನಲ್ಲಿ ಸುಳಿಯದು.
ಹಿಂದಾದಡೆ ಏರುವುದು, ಮುಂದಾದಡೆ ತೋರುವುದು.
ಹಿಡಿಯಲ್ಲ ಕರಿಯಲ್ಲ.
ಇಕ್ಕಿದ ಹೆಜ್ಜೆಯ ತೆಗೆಯದು.
ಮೊನೆಗೆ ನಿಲ್ಲದು, ತೆಕ್ಕೆಗೆ ಬಾರದು.
ಕಾದಬಂದ ಕಲಿಗಳನೆಲ್ಲರ ಆಗಿದಗಿದು ನುಂಗಿತ್ತು ನೋಡಾ.
ಅರಿದೆಹೆನೆಂದಡೆ ಅರಿಯಬಾರದು. ಇದ ಬಲ್ಲವರಾರಯ್ಯಾ ?
ಇಹಪರ ನಷ್ಟವಾದ ಮಹಾವೀರದ್ಥೀರರಿಗಲ್ಲದೆ
ಮುಕ್ತಿಗೆ ದೂರವಾದ ಲಿಂಗಾಂಗಿಗಳ
ನೆನಹೆಂಬ ಜೋಡಂ ತೊಟ್ಟು,
ಅವರ ಕರಣಪ್ರಸಾದವೆಂಬ ವಜ್ರ ಘಟಿಕೆಯ ಧರಿಸಿ,
ಗುರುಕರುಣವೆಂಬ ಅಲಗಂ ಪಿಡಿದು,
ಮುಂಡ ಬಿದ್ದಡೂ ತಲೆಯಲ್ಲಿರಿವೆ.
ನಿಜಗುರು ಭೋಗೇಶ್ವರಾ ನಾ ನಿಮ್ಮ ಬೇಡುವನಲ್ಲಾ.