ಭಕ್ತನ ಮೆಲಬಾರದು, ಭವಿಯ ತಿನಬಾರದು.
ಭಕ್ತನ ಕೊಂದಡೆ ಪಂಚಮಹಾಪಾತಕ.
ಅಂತು ವಿಚಾರಿಪಡೆ ಶೀಲವಂತರಿಲ್ಲಾಗಿ ಉಪಚಾರವೆಂತೂ ಇಲ್ಲ.
ಅಂತು ಶೀಲವಂತರಲ್ಲಿ ಅಹಿಂಸಾ ಪರಮೋಧರ್ಮವೆಂದು
ಕೊಲ್ಲದೆ ಮೆಲ್ಲದೆ ತಿಂಬ ಜೈನರಿನ್ನಾರೊ ?
ಶಿವೋ ದಾತಾ ಶಿವೋ ಭೋಕ್ತಾ ಶಿವೋ ಜಗತ್ಸರ್ವಂ
ಎಂದುದಾಗಿ, ಈ ಅನುವನರಿದಾತ ಭಕ್ತ.
ಇಂತಪ್ಪ ಯುಕ್ತ, ಆತನೇ ಯುಕ್ತ.
ಇಂತಪ್ಪ ಸುಯಿಧಾನಿಗಳ ತೋರಿ ಬದುಕಿಸಯ್ಯಾ,
ನಿಜಗುರು ಭೋಗೇಶ್ವರಾ, ನಿಮ್ಮ ಧರ್ಮ, ಬೇಡಿಕೊಂಬೆನು.