ಹೊಕ್ಕಲ್ಲಿ ಹೊಕ್ಕು, ಒಕ್ಕುದ ಮಿಕ್ಕುದನುಂಡು
ಸುಖಿಯಾಗಿ ಸುಳಿವ ಜಂಗಮಕ್ಕೆ
ಕುಲವೆಲ್ಲಿಯದೊ ಛಲವೆಲ್ಲಿಯದೊ?
ಶೀಲ ವ್ರತ ನೇಮಂಗಳಿಲ್ಲ, ಜಾತ್ಯಾದಿ ಸೂತಕ ಮುನ್ನಿಲ್ಲ.
ಆವಾವಾಚಾರ ವಿಚಾರ ಭಕ್ತಂಗಲ್ಲದೆ ಜುಗಮಕ್ಕುಂಟೆ?
ಒಡೆಯರಲ್ಲಿ ಆಚಾರವಿಲ್ಲೆಂದು ಪಾದೋದಕ
ಪ್ರಸಾದವನೊಲ್ಲದಿಪ್ಪ
ಬಹುಭ್ರಮಿತ ಪಾತಕರ ಅಚ್ಚಲಿಂಗೈಕ್ಯರು ಮೆಚ್ಚರು ಕಾಣಾಚಂದೇಶ್ವರಾ.