ಅಥವಾ

ಒಟ್ಟು 18 ಕಡೆಗಳಲ್ಲಿ , 10 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವಸರ, ಆರೋಗಣೆ, ಆಪ್ಯಾಯನ-ತ್ರಿವಿಧವೂ, ಲಿಂಗ ಮುಖದಲ್ಲಿ ಅರ್ಪಿತವಾಗೆ, ಆತನ ಪ್ರಸಾದಿಯೆಂಬೆನು. ಅವಸರ ಅನವಸರ ಆತ್ಮ(ಅಂಗ?)ದಿಚ್ಛೆ ಲಿಂಗಮುಖದಲ್ಲಿ ಅರ್ಪಿತವಿಲ್ಲಾಗಿ ಆತನನೆಂತು ಪ್ರಸಾದಿಯೆಂಬೆನು? ಅವಸರ ಅನವಸರವರಿದು ವೇಧಿಸಬಲ್ಲರೆ ಆತನ ಪ್ರಸಾದಿಯೆಂಬೆನು- ``ಲಿಂಗಸ್ಯಾವಸರೇ ಯಸ್ತು ಅಚ್ರ್ಯಂ ದದ್ಯಾತ್ ಸುಖಂ ಭವೇತ್ ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಅವಸರವರಿದು ಅರ್ಪಿಸುವ ಅರ್ಪಣೆ ಸದ್ಭಾವಿಗಲ್ಲದಿಲ್ಲ.
--------------
ಚನ್ನಬಸವಣ್ಣ
ಬ್ರಾಹ್ಮಣದೇಹಿಕನಲ್ಲ, ಕ್ಷತ್ರಿಯದೇಹಿಕನಲ್ಲ, ವೈಶ್ಯದೇಹಿಕನಲ್ಲ, ಶೂದ್ರದೇಹಿಕನಲ್ಲ, ಭಕ್ತದೇಹಿಕ ದೇವನೆಂದು ಕೇಳಿಯೂ ಅರಿಯರು. ಶ್ವಪಚನಾದಡೆಯೂ ಲಿಂಗಭಕ್ತನೇ ಕುಲಜನೆಂದುದು. ಲೈಂಗ್ಯಪುರಾಣೇಃ `ನ ಲಿಂಗೀ ಸರ್ವವೇದಜ್ಞೋ ಯಸ್ತು ಚಾಂಡಾಲವದ್ಭವೀ ಲಿಂಗಾರ್ಚಕಶ್ಚ ಶ್ವಪಚೋ ದ್ವಿಜಕೋಟಿವಿಶೇಷಿತಃ _ಎಂದುದಾಗಿ, ಅಂಗದ ಮೇಲೆ ಲಿಂಗವಿದ್ದ ಶ್ವಪಚನಾದಡೆಯೂ ಆತನೆ ಸದ್ಬ್ರಾಹ್ಮಣ. ಅಂಗದ ಮೇಲೆ ಶಿವಲಿಂಗವಿಲ್ಲದ ಬ್ರಾಹ್ಮಣರೊಂದುಕೋಟಿಯಾದಡೆಯೂ ಶ್ವಪಚರಿಂದ ಕರಕಷ್ಟ ನೋಡಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಹಸಿಯ ಕಪಾಲದಲ್ಲಿ ಉಂಬನೆಂಬರು, ಅದು ಹುಸಿ, ಭಕ್ತನ ಮುಖದಲ್ಲಿ ಉಂಬನಾಗಿ. ಅಸ್ಥಿಗಳ ತೊಟ್ಟನೆಂಬರು, ಅದು ಹುಸಿ, ಭಕ್ತದೇಹಿಕದೇವನಾಗಿ, ಚರ್ಮವ ಹೊದ್ದನೆಂಬರು, ಅದು ಹುಸಿ, ಆ ಭಕ್ತನಲ್ಲಿ ಸದಾಸನ್ನಹಿತನಾಗಿಪ್ಪನಾಗಿ. ಅದೆಂತೆಂದಡೆ-ಬ್ರಹ್ಮಾಂಡ ಪುರಾಣೇ : ನೈವೇದ್ಯಂ ಪುರತೋ ನ್ಯಸ್ತಂ ದರ್ಶನಾತ್ಸ್ವೀಕೃತಂ ಮಯಾ | ರಸಾನ್ಭಕ್ತಸ್ಯ ಜಿಹ್ವಾಗ್ರಾದಶ್ನಾಮಿ ಕಮಲೋದ್ಭವ || ಎಂದುದಾಗಿ, ವಾತುಲೇ : ಯಾವನ್ನಿರ್ವಹತೇ ಯಸ್ತು ಯಾವಜ್ಜೀವಂ ಪ್ರತಿಜ್ಞಯಾ | ಮನುಷ್ಯಚರ್ಮಣಾ ಬದ್ಧಃ ಸ ರುದ್ರೋ ನಾತ್ರ ಸಂಶಯಃ || ಎಂದುದಾಗಿ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಸುಳುಹು ಪರಕಾಯಪ್ರವೇಶವಾಗಿಹುದು.
--------------
ಹಾವಿನಹಾಳ ಕಲ್ಲಯ್ಯ
ಆ ಅಖಂಡಮಹಾಜ್ಯೋತಿಪ್ರಣವದ ಅರ್ಧಚಂದ್ರಕಸ್ವರೂಪವಾಗಿಹ ಬ್ರಹ್ಮಾನಂದಬ್ರಹ್ಮದಲ್ಲಿ ಈಶ್ವರ, ವಾಯು, ಸ್ಪರ್ಶ, ಮನ, ತ್ವಕ್ಕು, ಪಾಣೇಂದ್ರಿಯವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ : ``ಈಶ್ವರೋ ವಾಯು ಸಂಸ್ಪರ್ಶೇ ಮನಸ್ತತ್ವಾನಿ ಉಚ್ಯತೇ | ಷಟ್‍ಸಮ್ಮಿಶ್ರಿತಂ ಯಸ್ತು ಬ್ರಹ್ಮಾನಂದಶ್ಚ ಕಥ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶಿವಶರಣಂಗೆ ನಿಜೈಕ್ಯಪದಂಗಳು ದೊರೆಕೊಂಬುವ ತೆರನ ಶ್ರುತಿ ಗುರು ಸ್ವಾನುಭಾವದಿಂದ ನುಡಿವುತಿಪ್ಪೆ ಕೇಳಿರಯ್ಯ. ಜನನ ಮರಣಕಂಜಿ ತಾನಾರೆಂಬುದಂ ಸ್ವಾನುಭಾವದಿಂ ನೋಡಿ ಎಲ್ಲಿಂದೊಗೆದೆನೆಂಬುದಂ ಬಗೆಗೊಂಡು ಅರಿವು ತಲೆದೋರಿ ಪುಣ್ಯಪಾಪಕ್ಕೆ ಬೀಜಾಂಕುರಮಪ್ಪ ಮಲತ್ರಯಂಗಳಿಗೆ ತಲೆಗೊಡಹಿ ಭೋಗಮಂ ನೀಗಿ ಭುಕ್ತಿಯಿಂ ತೊತ್ತಳದುಳಿದು ಬಂಧುವರ್ಗಮಂ ಭಂಗಿಸಿ ಉಪಾದ್ಥಿಕೆಯನುರುಹಿ ಒಡಲಾಸೆಯಂ ತಲೆವೊಡೆಯನಿಕ್ಕಿ ಅಹಂಕಾರಂಗಳನಳಿದು ಮಮಕಾರಂಗಳಂ ಮುಂದುಗೆಡಿಸಿ ಲೋಕದ ನಚ್ಚುಮೆಚ್ಚಿಗೆ ಕಿಚ್ಚುಗುತ್ತಿ ಜ್ಞಾನ ಕ್ರೀಗಳಲ್ಲಿ ದೃಢವ್ರತವಾಗಿ ಕರಿಗೊಂಡು ಆಸನದಲ್ಲಿ ಮರಹ ಮಗ್ಗಿಸಿ ಮನ ತನುವನಪ್ಪಿ ಸರ್ವ ಕರಣಂಗಳಂ ಚರಲಿಂಗಮುಖವ ಮಾಡಿ ಆತ್ಮವಿದ್ಯಾಲಿಂಗದಲ್ಲಿ ಮನಸಂದು ಪಂಚಪ್ರಸಾದಾತ್ಮಕನಾದ ಘನಲಿಂಗದ ಬೆಳಗ ಪಿಂಡಾಂಡದಲ್ಲಿ ಜ್ಞಾನದಿಕ್ಕಿನಿಂದ ಪರಿಪೂರ್ಣವಾಗಿ ಕಂಡು ಪೆಣ್ದುಂಬಿಯನಾದವೆ ಮೊದಲಾದ ಸಿಂಹನಾದವೆ ಕಡೆಯಾದ ಆರೆರಡು ಪ್ರಕಾರದ ನಾದಂಗಳಂ ಕೇಳಿ ಹರುಷಂ ಹರವರಿಗೊಂಡು ಎನಗೆ ಶಿವತತ್ವ ಸಾಧ್ಯವಾಯಿತು. ಪರಶಿವನಲ್ಲಿ ಒಡಗೂಡಿ ಪರಬ್ರಹ್ಮವಾದೆನೆಂದು, ಅಹಂಕರಿಸಿ ಕ್ರೀಯಂ ಬಿಟ್ಟು ಗಂಬ್ಥೀರಜ್ಞಾನದೊಳಿರುವ ಶರಣಂಗೆ ಮೂರೊಂದು ವಿಧದ ಪದಂಗಳು ಬಪ್ಪವಲ್ಲದೆ ಶಿವನಲ್ಲಿ ನಿಜೈಕ್ಯವಿಲ್ಲ. ಅದೇನು ಕಾರಣವೆಂದೊಡೆ- ಷಟ್ಸ ್ಥಲಬ್ರಹ್ಮಿಯೆನಿಸಿಕೊಂಡು ಆರುಸ್ಥಲವಿಡಿದು ಆಚರಿಸಿ ಮೂರುಸ್ಥಲದಲ್ಲಿ ಅವಧಾನಿಯಾಗಿ ಎರಡೊಂದು ಸ್ಥಲ ಒಂದಾದ ಸ್ಥಲದಲ್ಲಿ ಶರಣಲಿಂಗವೆಂಬುಭಯವಳಿದು ನೂರೊಂದುಸ್ಥಲದೊಳಗೆ ಪ್ರಭಾವಿಸಿ ಪರಿಪೂರ್ಣವಾಗಿ ಸಿದ್ಧಪ್ರಸಾದವೆಂಬ ನಿಷ್ಕಲಬ್ರಹ್ಮದಲ್ಲಿ ಉರಿ ಕರ್ಪೂರದಂತೆ ಬೆಳಗುದೋರಿ ಶುದ್ಧಪ್ರಸಾದವನಂಗಂಗೊಂಡು ನಿರಂಜನ ಪ್ರಸಾದವನೊಡಗೂಡಿದ ಬಸವರಾಜದೇವರು ಉತ್ತುಂಗಲಿಂಗದಲ್ಲಿ ಐಕ್ಯವಾಗುವನ್ನಬರ ಶಿವಲಿಂಗಪೂಜೆಯಂ ಬಿಟ್ಟ[ರೆ]? ಜಪ ತಪ ನಿತ್ಯ ನೇಮಂಗಳ ಬಿಟ್ಟ[ರೆ]? ಲಿಂಗಕ್ಕೆ ಕೊಟ್ಟು ಕೊಂಬ ಅರ್ಪಿತವಧಾನಂಗಳಂ ಬಿಟ್ಟ[ರೆ]? ತೀರ್ಥಪ್ರಸಾದದಲ್ಲಿ ಒಯ್ಯಾರಮಂ ಬಿಟ್ಟ[ರೆ]? ಮಾಡಿ ನೀಡುವ ದಾಸೋಹಮಂ ಬಿಟ್ಟ[ರೆ]? ಗುರುಲಿಂಗ ಜಂಗಮವ ಕಂಡು ಪೊಡಮಡುವುದಂ ಬಿಟ್ಟ[ರೆ]? ಬಿಜ್ಜಳನ ಓಲಗದ ಸಭಾಮಧ್ಯಕ್ಕೆ ಹೋಗಿ ತನ್ನ ದಿವ್ಯ ಶ್ರೀ ಪಾದಪದ್ಮಂಗಳಂ ಬಿಜ್ಜಳಂಗೆ ತೋರಿ ಅವನ ಕರ್ಮಾದಿಕರ್ಮಂಗಳಂ ಸುಟ್ಟು ಅವನ ರಕ್ಷಿಪುದಂ ಬಿಟ್ಟ[ರೆ]? ಇಂತಿವೆಲ್ಲವು ಕ್ರೀಯೋಗಗಳು. `ಕ್ರಿಯಾದ್ವೆ ೈತಂ ನ ಕರ್ತವ್ಯಂ ಜ್ಞಾನಾದ್ವೆ ೈತಂ ಸಮಾಚರೇತ್| ಕ್ರಿಯಾಂ ನಿರ್ವಹತೇ ಯಸ್ತು ಭಾವ ಶುದ್ಧಾಂತು ಶಾಂಕರಿ||' ಇಂತೆಂದುದಾಗಿ ಇದುಕಾರಣ ಐಕ್ಯವಾಗುವನ್ನಬರ ಕ್ರೀಯೊಳಗೊಂಡ ಶರಣಂಗೆ ನಿಜಮುಕ್ತಿಯಲ್ಲದೆ ಐಕ್ಯವಾಗುವುದಕ್ಕೆ ಮುನ್ನವೇ ಕ್ರೀಯಳಿದ ಶರಣನು ಸಾಯುಜ್ಯಪದಸ್ಥಲನಪ್ಪನಲ್ಲದೆ ಹರನಲ್ಲಿ ಸಮರಸವಿಲ್ಲವೆಂದೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ದೇವಾ, ನಿಮ್ಮ ಪೂಜಿಸಿ ಚೆನ್ನನ ಕುಲ ಚೆನ್ನಾಯಿತ್ತು, ದೇವಾ, ನಿಮ್ಮ ಪೂಜಿಸಿ ದಾಸನ ಕುಲ ದೇಸೆವಡೆಯಿತ್ತು, ದೇವಾ, ನಿಮ್ಮಡಿಗೆರಗಿದ ಮಡಿವಾಳ ಮಾಚಯ್ಯನಿಮ್ಮಡಿಯಾದ. ನೀನೊಲಿದ ಕುಲಕೆ, ನೀನೊಲ್ಲದ ಹೊಲೆಗೆ ಮೇರೆಯುಂಟೆ ದೇವಾ ಶ್ವಪಚೋಪಿ ಮುನಿಶ್ರೇಷೊ*ೀ ಯಸ್ತು ಲಿಂಗಾರ್ಚನೇ ರತಃ ±ಲಿಂಗಾರ್ಚನವಿಹೀನೋ[s]ಪಿ ಬ್ರಾಹ್ಮಣಃ ಶ್ವಪಚಾಧಮಃ± ಎಂದುದಾಗಿ, ಜಾತಿ-ವಿಜಾತಿಯಾದಡೇನು ಅಜಾತಂಗೆ ಶರಣೆಂದನ್ನದವನು ಆತನೇ ಹೊಲೆಯ, ಕೂಡಲಸಂಗಮದೇವಾ.
--------------
ಬಸವಣ್ಣ
ಕೇಳಾ ಹೇಳುವೆನು: ಮಹಾಘನಲಿಂಗಭಕ್ತನು ಆಚರಿಸುವ ಸದ್ವರ್ತನನಿರ್ಣಯವ, ಅದು ಪರಶಿವಲಿಂಗದ ನಿತ್ಯಪದದ ಮಾರ್ಗ: ಗೌರವಂ ಲೈಂಗಿಕಂ ಚಾರಂ ಪ್ರಸಾದಂ ಚರಣಾಂಬುಕಂ ಭೌಕ್ತಿಕಂ ಚ ಮಯಾ ಪ್ರೋಕ್ತಂ ಷಡ್ವಿಧಂ ವ್ರತಮಾಚರೇತ್ ಗುರುದೇವಃ ಶಿವಃ ಸಾಕ್ಷಾತ್ ತಚ್ಚಿಷ್ಯೋ ಜ್ಞಾನಸಾರವಿತ್ ತ್ರಿವಿಧಂ ಹೃದಿ ಸಂಭಾವ್ಯ, ಕೀರ್ತಿತಂ ಗೌರವಂ ವ್ರತಂ ಗುರುಣಾ ಚಾರ್ಪಿತಂ ಲಿಂಗಂ ಪ್ರಾಣಲಿಂಗಂ ಪ್ರಕಥ್ಯತೇ ತಥೈವ ಭಾವನಾದ್ವೈತಂ ತದ್ವ್ರತಂ ಲೈಂಗಿಕಂ ಸ್ಮøತಂ ಗುರುಲಿಂಗಚರಾಧೀನಂ ನಿರ್ಮಾಲ್ಯಂ ಭೋಜನಾದಿಕಂ ತಸ್ಯಾನುಭಾವನಂ ದೇವಿ ತತ್ಪರಂ ವ್ರತಮುತ್ತಮಂ ಗುರುಪಾದಾಬ್ಜಸಂಭೂತಂ ಉಜ್ಜಲಂ ಲೋಕಪಾವನಂ ತಜ್ಜಲಸ್ನಾನಪಾನಾದಿ ತದ್ವ್ರತಂ Z್ಪರಣಾಂಬುಕಂ|| ಗುರುಲಿಂಗಚರಾಣಾಂ ಚ ಪ್ರಸಾದಂ ಪಾದವಾರುಣಂ| ಪರ್ಯಾಯಭಜನಂ ಭಕ್ತ್ಯಾ ತದ್ವ್ರತಂ ಸ್ಮøತಂ|| ಕ್ರಿಯಾದ್ವೈತಂ ನ ಕರ್ತವ್ಯಂ ಭಾವಾದ್ವೈತಂ ಸಮಾಚರೇತ್| ಕ್ರಿಯಾಂ ನಿರ್ವಹತೇ ಯಸ್ತು ಭಾವಶುದ್ದಂ ತು ಶಾಂಕರಿ|| ಎಚಿದುದಾಗಿ, ಪೂಜಿತೈಃ ಶಿವಭಕ್ತೈಶ್ಚ ಪರಕರ್ಮ ಪ್ರಪಚಿಚಿತಂ| ಪುಣ್ಯಸ್ಸಶಿವಧರ್ಮಃ ಸ್ಯಾತ್ ವಜ್ರಸ್ರಚಿಸ್ಸಮಬ್ರವೀತ್|| ಪಾತ್ರಶಾಸನಯೋರ್ಮಧ್ಯೇ ಶಾಸನಂ ತು ವಿಶಿಷ್ಯತೇ| ತಸ್ಮಾತ್ ಶಾಸನಮೇವಾದೌ ಪೂಜ್ಯತೇ ಚ ಶವೋ ಯಥಾ|| ಗುಣವತ್ಪಾತ್ರಪ್ರಜಾಯಾಂ ವರಂ ಶಾಸನಪೂಜನಂ| ಶಾಸನಂ ಪೂಜಾಯೇತ್ತಸ್ಮಾಸವಿZ್ಫರಂ ಶಿವಾಜÐಯಾ|| ಸ ನರೋ ಭೃತ್ಯಸದ್ಭಕ್ತಃ ಪತಿಕರ್ಮಾ ಚ ಜಂಗಮಃ| ರೂಪಂ ಚ ಗುಣಶೀಲಂ ಚ ಅವಿZ್ಫರಂ ಶುಭಂ ಭವೇತ್|| ಗುಣೋಗುಣಶ್ಚ ರೂಪಂ ಚ ಅರೂಪಂ ಚ ನ ವಿದ್ಯತೇ ಪಶ್ಶತ್ಯಮೋಹಭಾವೇನ ಸ ನರಃ ಸುಖಮೇಧತೇ ದುಶ್ಶೀಲಃ ಶೀಲಸರ್ವಜ್ಞಂ ಮೂರ್ಖಭಾವೇನ ಪಶ್ಯತಿ ಪಶ್ಯಂತಿ ಲಿಂಗಭಾವೇನ ಸದ್ಭಕ್ತಾ ಮೋಕ್ಷಭಾವನಾಃ ಯಥಾ ಲಿಂಗಂ ತಥಾ ಭಾವಃ ಸತ್ಯಂ ಸತ್ಯಂ ನ ಸಂಶಯಃ ಯಥಾ ಭಕ್ತಿಸ್ತಥಾ ಸಿದ್ಧಿಃ ಸತ್ಯಂ ಸತ್ಯಂ ನ ಸಂಶಯಃ ಸತ್ಯಭಾವಿ ಮಹಾಸತ್ಯಂ ಸತ್ಯಂ ಸ್ಯಾಚ್ಚಿವಲಕ್ಷಣಂ ಮಿಥ್ಯಭಾವೀತ್ವಹಂ ಮಿಥ್ಯಾ ಸತ್ಯಂ ಸ್ಯಾಚ್ಚಿವಲಕ್ಷಣಂ ದಕ್ಷಿಣೇ ತು ಮಹಾದೇವೇ ಪದಾರ್ಥೇ ಕಿಂ ಪ್ರಯೋಜನಂ ಅದಕ್ಷೇ ತು ಮಹಾದೇವೇ ಪದಾರ್ಥೇ ಕಿಂ ಪ್ರಯೋಜನಂ ಅರಿರ್ಮಿತ್ರಂ ವಿಷಂ ಪಥ್ಯಂ ಅಧರ್ಮೋ ಧರ್ಮವದ್ಭವೇತ್ ಪ್ರಸನ್ನ ಏವ ದೇವೇ ತು ವಿಪರೀತಂ ಭವೇದ್ಧೃವಂ ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಚ್ಯತೆ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಪಲಂ ಭವೇತ್ ನ ಮೇ ಪ್ರಿಯಶ್ಚತುರ್ವೇದೀ ಮದ್ಭಕ್ತಃ ಶ್ವಪಚೋ[s]ಪಿ ವಾ ತಸ್ಮೈ ದೇಯಂ ತತೋ ಗ್ರಾಹ್ಯಂ ಸಃ ಪೂಜ್ಯಶ್ಚ ಯಥಾ ಹ್ಯಹಂ ಸದ್ಗುರುರ್ಭಾವಲಿಂಗಂ ಚ ತಲ್ಲಿಂಗಂ ಚಿತ್ಸ್ವರೂಪಕಂ ತದ್ಭಾವಶುದ್ಧಿಸಿದ್ಧಸ್ಯ ಸದ್ಯೋನ್ಮುಕ್ತಿಃ ಸುಖಂ ಭವೇತ್ ಗುರುಃ ಪರಶಿವಶ್ಚೈವ ಜಂಗಮೋ ಲಿಂಗಮೇವ ಚ ತದ್ಭಾವಶುದ್ಧಿಸಿದ್ಧಸ್ಯ ಸದ್ಯೋನ್ಮುಕ್ತಿಃ ಸುಖಂ ಭವೇತ್ ಲಿಂಗಾಂಗೀ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ .................................................................. ತತ್ತ್ವದೀಪಿಕಾಯಾಂ ಪ್ರಸಾದೋ ಮುಕ್ತಿಮೂಲಂ ಚ ತತ್ಪ್ರಸಾದಸ್ತ್ರಿಧಾ ಮತಃ ಶಿವಃ ಸರ್ವಾಧಿದೇವಃ ಸ್ಯಾತ್ ಸರ್ವಕರ್ಮ ಶಿವಾಜ್ಞಯಾ ತತ್ತ್ವದೀಪಿಕಾಯಾಂ ಮಾಹೇಶ್ವರಸ್ಯ ಸಂಗಾದ್ಧಿ ಶಿವಯೋಗಂ ಲಭೇನ್ನರಃ ಪ್ರಸಾದಂ ತ್ರಿವಿಧಂ ಗ್ರಾಹ್ಯಂ ಮಹಾಪಾಪವಿನಾಶಕಂ ತತ್ತ್ವದೀಪಿಕಾಯಾಂ ಧನಪುತ್ರಕಲತ್ರಾದಿಮೋಹಂ ಸಂತ್ಯಜ್ಯ ಯೋ ನರಃ ಶಿವಭಾವೇನ ವರ್ತೇತ ಸದ್ಯೋನ್ಮುಕ್ತಸ್ಸುಖೀ ಭವೇತ್ ಪ್ರಾಣಲಿಂಗೇತ್ವವಿಶ್ವಾಸಾತ್ ಭಕ್ತಿಮುಕ್ತಿದ್ವಯಂ ನ ಚ ಪ್ರಾಣಲಿಂಗಸ್ಯ ವಿಶ್ವಾಸಾತ್ ಸಿದ್ದಿಃ ಸ್ಯಾತ್ ಭಕ್ತಿಮುಕ್ತಿದಾ ಪ್ರಾಣಲಿಂಗಮವಿಶ್ವಸ್ಯ ತೀರ್ಥಲಿಂಗಮುಪಾಸತೇ ಸ ನರಃ ಸ್ವರ್ಗಮಾಪ್ನೋತಿ ಗಣತ್ವಂ ನ ಪ್ರಯುಜ್ಯತೇ ಪ್ರಾಣಲಿಂಗಸಮಾಯುಕ್ತಃ ಪರಹಸ್ತಸಮರ್ಚನಾತ್ ತತ್ಪೂಜಾ ನಿಷ್ಫಲಾ ದೇವಿ ರೌರವಂ ನರಕಂ ವ್ರಜೇತ್ ಪ್ರಾಣಲಿಂಗಸಮಾಯುಕ್ತಃ ಪರಹಸ್ತೇ ದದಾತಿ ಚೇತ್ ನಿಮಿಷಾರ್ಧವಿಯೋಗೇನ ವಿಶೇಷಂ ಪಾತಕಂ ಭವೇತ್ ಪ್ರಾಣಲಿಂಗಸಮಾಯುಕ್ತ ಏಕಭುಕ್ತೋಪವಾಸತಃ ಗುರುಲಂಘನಮಾತ್ರೇಣ ಪೂಜಾ ಯಾ ನಿಷ್ಪಲಾ ಭವೇತ್ ಇಷ್ಟಲಿಂಗಂ ಸಮುತ್ಸೃಜ್ಯ ಅನ್ಯಲಿಂಗಸ್ಯ ಪೂಜನಾತ್ ಸ್ವೇಷ್ಟಂ ನ ಲಭತೇ ಮತ್ರ್ಯಃ ಪರಂ ತತ್ತ್ವಂ ನಿಹತ್ಯಸೌ ಅತ್ಯಂತಮಹಿಮಾರೂಢಂ ಶಿವಮಾಹಾತ್ಮ್ಯವಿಸ್ತರಂ ಯೋ[s]ಪಿ ದೃಷ್ಟ್ವಾಪ್ಯವಿಶ್ವಾಸೀ ಸ ಭಕ್ತೋ ನರಕಂ ವ್ರಜೇತ್ ಅಥ ಯೋ ಯಾದವ ಶ್ಚೈವ ರಾಜಾನಶ್ಯವೋ ಗ್ರಹಾ ನೈವ ಪೀಡ್ಯಸ್ತು ಯತ್ಕೃತ್ವಾ ನರಂ ಹಾರಪರಾಯಣಂ ಹಿರಣ್ಯರೂಪದೇಹಸ್ತಂ ಹಿರಣ್ಯಪತಿಪ್ರಾಣಿನಾಂ ಆಶಾದನ್ಯಂ ಹಿರಣ್ಯಂ ಚ ತದ್ದೇಹಂ ಲಿಂಗವರ್ಜಯೇತ್ ಘೃಣಾಮೂರ್ತಿರ್ಮಹಾದೇವೋ ಹಿರಣ್ಯೋದ್ಭಾಹು ಶಂಕರಃ ವರದಾಭಯ ಮತ್ಸ್ವಾಮಿನ್ ಯೇ ಆಶಾದನ್ಯಂ ವಿವರ್ಜಯೇತ್ ಆಶಾ ಚ ನರಕಂ ಚೈವ ನಿರಾಶಾ ಮುಕ್ತಿರೇವ ಹಿ ಆಶಾನಿರಾಶಯೋರ್ನಾಸ್ತಿ ತತ್ಸುಖಸ್ಯ ಸಮಂ ಪರಂ ಶಿವರಹಸ್ಯೇ ಜಪಶ್ರಾಂತಃ ಪುನಧ್ರ್ಯಾಯೇತ್ ಧ್ಯಾನಶ್ರಾಂತಃ ಪುನರ್ಜಪೇತ್ ಜಪಧ್ಯಾನಾದಿಯೋಗೇನ ಶಿವಃ ಕ್ಷಿಪ್ರಂ ಪ್ರಸೀದತಿ ಗಚ್ಚನ್ ತಿಷ*ನ್ ಸ್ವಪನ್ ಜಾಗ್ರನ್ ಉನ್ಮಿಷನ್ ನಿಮಿಷನ್ನಪಿ ಶುಚಿರ್ವಾಪ್ಯಶುಚಿರ್ವಾಪಿ ಶಿವಂ ಸರ್ವತ್ರ ಚಿಂತಯೇತ್ ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ ಗತೋ[s]ಪಿ ವಾ ಯಸ್ಸ್ಮರೇತ್ ಸತತಂ ರುದ್ರಂ ಸ ಬಾಹ್ಯಾಭ್ಯಂತರಃ ಶುಚಿಃ ದುರ್ಲಭಂ ಮಾನುಷಂ ಜನ್ಮ ವಿವೇಕಸ್ತ್ವತಿದುರ್ಲಭಃ ದುರ್ಲಭಾ ಚ ಶಿವೇ ಭಕ್ತಿಃ ಶಿವಜ್ಞಾನಂ ತು ದುರ್ಲಭಂ ಇಂ್ರಯಪ್ರೀತಿದಾತಾರಃ ಪುಮಾಂಸೋ ಬಹವಃ ಕಿಲ ಶಿವಜ್ಞಾನಾರ್ಥದಾತಾರಃ ಪುಮಾಂಸೋ ಲೋಕದುರ್ಲಭಾಃ ಲಿಂಗಭಕ್ತ್ಯಾ ಮನಃ ಪೂತಂ ಅಂಗಂ ಪೂತಂ ತು ದೇಶಿಕಾತ್ ಭಾವಸ್ತು ಜಂಗಮಾತ್ ಪೂತಸ್ತ್ರಿವಿಧಾ ಭಕ್ತಿರುತ್ತಮಾ ಅಷ್ಟವಿಧಾರ್ಚನಂ ಲಿಂಗೇ ಅಷ್ಟಭೋಗಸ್ತು ಜಂಗಮೇ ಲಿಂಗೇ ಷೋಡಶೋಪಚಾರಾಃ ಸರ್ವೇ ತಾತ್ಪರ್ಯಜಂಗಮೇ ಮನೋ ಲೀನಂ ಮಹಾಲಿಂಗೇ ದ್ರವ್ಯಂ ಲೀನಂ ತು ಜಂಗಮೇ ತನುರ್ಲೀನೋ ಗುರೌ ಲಿಂಗೇ ಇತಿ ಭಕ್ತಸ್ಯ ವೈ ಧೃವಂ ಸಕಲಂ ಭಕ್ತರೂಪಂ ಚ ನಿಷ್ಕಲಂ ಶಿವರೂಪಕಂ ಸಕಲಂ ನಿಷ್ಕಲಂ ಮಿಶ್ರಂ ಚರರೂಪಂ ವಿಧೀಯತೇ ಸತ್ಕ್ರಿಯಾಂ ಪೂಜಯೇತ್ಪ್ರಾತರ್ಮಧ್ಯಾಹ್ನೇ ಭೋಜನಾವಧಿಂ ಸಾಯಂಕಾಲೇ ಮಹಾಪೂಜಾಂ ತತ್ಕ್ರಮಸ್ತು ವಿಶಿಷ್ಯತೇ ಮನಃಪೂತಾರ್ಚನಂ ಭಕ್ತ್ಯಾ ಪ್ರಾತಃಕಾಲವಿಧಿಕ್ರಮಃ ಸುಜಲಂ ಸುರಸಂ ಚೈವ ಯಥಾಸಂಭವದ್ರವ್ಯಕಂ ಅರ್ಪಯೇಚ್ಚರಲಿಂಗಾಯ ಮಧ್ಯಾಹ್ನೇ ಪೂಜನಕ್ರಮಃ ಗಂಧಂ ಪುಷ್ಪಂ ಚ ಕರ್ಪೂರಂ ಚಂದನಂ ಲೇಪನಂ ತಥಾ ಅರ್ಪಯೇತ್ ಫಲತಾಂಬೂಲಂ ಸಂಧ್ಯಾಪೂಜಾರ್ಚನಾವಿಧಿಕ್ರಮಃ ಧೂಪಮುಷ್ಣಾಧಿಕಂ ಸರ್ವಂ ಪ್ರಾತಃಕಾಲಾರ್ಚನಾವಿಧಿಃ ಪೂಜೋಪಚಾರಸ್ಸರ್ವೇಷಾಂ ಶೈತ್ಯಂ ಮಧ್ಯಾಹ್ನಸಂಧಿಷು ತ್ರಿಸಂಧ್ಯಾ ತ್ರಿಷು ಕಾಲೇಷು ಉಷ್ಣಂ ನೈವೇದ್ಯಮುತ್ತಮಂ ಯಥಾಸಂಭವಂ ಸಂಧ್ಯಾಯಾಂ ನಾದಾದೀನಿ ವಿಧಿಕ್ರಮಾತ್ ಶರಸಂಯುಕ್ತಪೂಜಾಯಾಂ ಕೇವಲಂ ನರಕಂ ಭವೇತ್ ನಿಶ್ಶಠಃ ಪೂಜಕಶ್ಚೈವ ಕೇವಲಂ ಮುಕ್ತಿಕಾರಣಂ ಅಷ್ಟಾದಶಾನಾಂ ಜಾತೀನಾಂ ಶಠಕರ್ಮಸ್ವಭಾವತಃ ನಿಶ್ಯಠಾಃ ಕುಲಮರ್ಯಾದಾಃ ಸದ್ಭಕ್ತಾಶ್ಚ ಶಿವಪ್ರಿಯಾಃ ಲಿಂಗಧಾರೀ ಮಹಾಲಿಂಗಂ ನ ಭೇದೋ ತತ್ರ ದೃಶ್ಯತೇ ಸದ್ವೈತ್ತೋ ಭೃತ್ಯರೂಪಶ್ಚ ಸತ್ಯಂ ಸತ್ಯಂ ಸಮೋ ನ ಚ ಕರ್ತೃಭೃತ್ಯಸ್ಯ ಸನ್ಮಾರ್ಗದುರ್ಮಾರ್ಗಸಮಭಾವತಃ ಅಹಂಕಾರೋ ಮಹಾಪಾಪಂ..... ಜನ್ಮಾಂತರಸಹಸ್ರೇಷು ತಪೋಧ್ಯಾನಪರಾಯಣೈಃ ನರಾಣಾಂ ಕ್ಷೀಣಪಾಪಾನಾಂ ಶಿವೇ ಭಕ್ತಿಃ ಪ್ರಜಾಯತೇ ತತೋ ವಿಷಯವೈರಾಗ್ಯಂ ವೈರಾಗ್ಯಾತ್ ಜ್ಞಾನಸಂಭವಃ ಜ್ಞಾನೇನ ತು ಪರಾ ಭಕ್ತಿಃ ಪ್ರಸಾದಸ್ತದನಂತರಂ ಪ್ರಸಾದಾನ್ಮುಚ್ಯತೇ ಜಂತುರ್ಮುಕ್ತಃ ಶಿವಸಮೋ ಭವೇತ್ ಅಸಾರೇ ದಗ್ಧಸಂಸಾರೇ ಸಾರಂ ದೇವಿ ಶಿವಾರ್ಚನಂ ಸತ್ಯಂ ವಚ್ಮಿ ಹಿತಂ ವಚ್ಮಿ ವಚ್ಮಿ ಪಥ್ಯಂ ಪುನಃ ಪುನಃ ಉಪಾಧಿಃ ಸ್ಯಾನ್ಮಹಾಭಕ್ತಿರುಪಾಧಿಸ್ಯಾತ್ಪ್ರಸಾದಕಃ ಉಪಾಧಿಃ ಸ್ಯಾತ್ಕ್ರಿಯಾಸ್ಸರ್ವಾಶ್ಯಿವಸ್ಯಾಸ್ಯಾ[s] ಪ್ರಸಾದತಃ ನಿುಪಾಧಿಕಮದ್ಭಕ್ತಿರ್ನಿರುಪಾಧಿಕಪ್ರಸಾದತಃ ನಿರೂಪಾಧಿಕ್ರಿಯಾಸ್ಸರ್ವಾಃ ಶಿವಃ ಶೀಘ್ರಂ ಪ್ರಸೀದತಿ ದಿನೇ ದಿನೇ ವಿಶೇಷಂ ಚ ಮಾಸೇ ಮಾಸೇ ಮಹಾದ್ಭುತಂ ವತ್ಸರೇ ವತ್ಸರೇ ಚೋದ್ಯಂ ಸದ್ಭಕ್ತಸ್ಯಾಭಿವರ್ಧನಂ ದಿನೇ ದಿನೇ ವಿಶೇಷಂ ಚ ಮಾಸೇ ಮಾಸೇ ಹಿ ದೃಶ್ಯತಾಂ ವತ್ಸರೇ ವತ್ಸರೇ ನಷ್ಟಾ ಮಹಾವಾಸಕ್ರಿಯಾಸ್ತಥಾ ದಾಸೋ[s]ಹಂ ಚ ಮಹಾಖ್ಯಾತಿರ್ದಾಸೋ[s]ಹಂ ಲಾಭ ಏವ ಚ ದಾಸೋ[s]ಹಂ ಚ ಮಹತ್ಪೂಜ್ಯಂ ದಾಸೋ[s]ಹಂ ಸತ್ಯಮುಕ್ತಿದಂ ಸದ್ಭಕ್ತಸಂಗಸಿದ್ಧಿಃ ಸ್ಯಾತ್ ಸರ್ವಸಿದ್ಧಿರ್ನ ಸಂಶಯಃ ಭಕ್ತಿಜ್ರ್ಞಾನಂ ಚ ವೈರಾಗ್ಯಂ ವರ್ಧತಾಂ ಚ ದಿನೇ ದಿನೇ ಮಹತ್ಸುಖಂ ಮಹಾತೋಷೋ ಲಿಂಗಭಕ್ತ್ಯಾ ಯಥಾ ಶಿವೇ ಪ್ರಾಣಲಿಂಗಪ್ರತೀಕಾರಂ ಕುರ್ವಂತೀಹ ದುರಾತ್ಮನಃ ಅತ್ಯುಗ್ರನರಕಂ ಯಾಂತಿ ಯುಗಾನಾಂ ಸಪ್ತವಿಂಶತಿ ಹುತಭುಗ್ಪತಿತಾಂಭೋಜಗತಿಃ ಪಾತಕಿನಾಂ ಭವೇತ್ ಸುಜ್ಞಾನ ಸದ್ಭಕ್ತಿ ಪರಮವೈರಾಗ್ಯಕ್ಕೆ ಶಿವನೊಲಿವನಲ್ಲದೆ ಸಾಮಾನ್ಯ ತಟ್ಟು ಮುಟ್ಟು ತಾಗು ನಿರೋಧದಲ್ಲಿ ಅನುಸರಿಸಿದಡೆ ಶಿವ ಮೆಚ್ಚುವನೆ ? ಸತ್ಯಶುದ್ಧ ನಿತ್ಯಮುಕ್ತ ಶರಣರು ಮೆಚ್ಚುವರೆ? ಶಿವನೊಲವು ಶರಣರೊಲವು ಸೂರೆಯೇ? ದೇವದಾನವ ಮಾನವರಂತೆ ಶಿವನಲ್ಲಿ ಭಕ್ತಿಯನು ಅನುಸರಿಸಿ ನಡೆವುದು ಭಕ್ತಿಯೇ ಅಲ್ಲ. ತಾಮಸ ರಾಜಸ ಉಳ್ಳುದು ಭಕ್ತಿಯ ಕುಳವಲ್ಲ, ಸದ್ಭಕ್ತಿಗೆ ಸಲ್ಲದು. ಗುರು ಲಿಂಗ ಜಂಗಮಕ್ಕೆ ಮರುಗಿ ತ್ರಿವಿಧಪದಾರ್ಥವ ಮನೋವಾಕ್ಕಾಯದಲ್ಲಿ ವಂಚನೆಯಿಲ್ಲದೆ ಮನ ಧನವನರ್ಪಿಸಿ ಮನ ಮುಟ್ಟಿದಡೆ ಗುರು ಲಿಂಗ ಜಂಗಮದ ಘನಮಹಿಮೆಯ ವೇದಪುರಾಣಾಗಮಂಗಳಿಂ ಗುರುವಾಕ್ಯದಿಂ ಪುರಾತನರ ಮತದಿಂದರಿದು ಮರೆವುದು ಜ್ಞಾನವಲ್ಲ. ಅರಿದು ಮರೆವುದು ಶ್ವಾನಜ್ಞಾನವಲ್ಲದೆ ಇಂತಪ್ಪ ಅಜ್ಞಾನಕ್ಕೆ ಒಲಿವನೇ ಶಿವನು? ಮೆಚ್ಚುವರೇ ಶರಣರು? ಶ್ರೀಗುರುಲಿಂಗಜಂಗಮವೊಂದೆಂಬರಿವು ಕರಿಗೊಂಡು ಸದ್ಭಾವದಿಂ ಭಾವಿಸಿ ಭಾವಶುದ್ಧಿಯಾದುದು ಸುಜ್ಞಾನ. ಗುರುಲಿಂಗಜಂಗಮದ ಅರ್ಚನೆ ಪೂಜನೆ ಅರ್ಪಿತ ದಾಸೋಹಕ್ರೀವಿಡಿದು ಸಂಸಾರಕ್ರೀ ಪರಧನ ಪರಸ್ತ್ರೀ ಅನ್ಯದೈವ ಭವಿಯನು ಅನುಸರಿಸಿ ಹಿಡಿದುದು ವೈರಾಗ್ಯವೇ ? ಅಲ್ಲ, ಅದು ಮರ್ಕಟ ವೈರಾಗ್ಯ. ಇವ ಬಿಟ್ಟು ಸದ್ಭಕ್ತಿ ಸಮ್ಯಗ್‍ಜ್ಞಾನ ಪರಮವೈರಾಗ್ಯಯುತನಾಗಿ ಗುರುಲಿಂಗಜಂಗಮಕ್ಕೊಲಿದು ಒಲಿಸುವುದು, ಸದ್ಭಕ್ತಿಪ್ರಸಾದಮುಕ್ತಿಯ ಹಡೆವುದು. ಈ ಸತ್ಕ್ರಿಯಾಭಕ್ತಿಯುಳ್ಳಡೆ ಲೇಸು, ಅಲ್ಲದಿದ್ದಡೆ ಸಾವುದೇ ಲೇಸಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಗುರುವರಿಯದವನೆಂದುದಾಸೀನವ ಮಾಡಿ ನೆರೆ ಬಲ್ಲವರನರಸಿ, ಭಕ್ತಿಯ ಮಾಡುವ ಪಾಪಿ ಮಾನವ ನೀ ಕೇಳು. ಸಾಕ್ಷಿ :``ಗುರೌ ಸನ್ನಿಹಿತೇ ಯಸ್ತು ಪೂಜಾಯಾಮನ್ಯಮಾನಸಃ | ಸ ಪಾಪೀ ನರಕಂ ಯಾತಿ ಕಾಲಸೂತ್ರಮಿವೋತ್ಸರೇತ್ ||'' ಎಂದುದಾಗಿ, ಗುರುವರಿಯದವನೂ ಅಲ್ಲ, ಬಲ್ಲವನೂ ಅಲ್ಲ. ಗುರು ನಿರಂಜನ, ಗುರು ಪರಶಿವ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಇನ್ನು ಇಷ್ಟ-ಪ್ರಾಣ-ಭಾವಲಿಂಗದ ಪೂಜೆಯ ವಿವರವೆಂತೆಂದಡೆ : ಇಷ್ಟಲಿಂಗದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳಂ ಮಾಡುವದು ಇಷ್ಟಲಿಂಗದ ಪೂಜೆ. ಆ ಲಿಂಗವನು ಮನಸ್ಸಿನಲ್ಲಿಯೇ ಧ್ಯಾನಿಸುವದು ಪ್ರಾಣಲಿಂಗದ ಪೂಜೆ. ಜೀವನೆಂಬ ಶಿವಾಲಯದೊಳು ಪ್ರಾಣಲಿಂಗವೇ ದೇವ ನೋಡಾ. ಅಜ್ಞಾನವೆಂಬ ನಿರ್ಮಾಲ್ಯವಂ ಕಳದು ಸೋಹಂ ಭಾವದಲ್ಲಿ ಪೂಜಿಸುತಿರ್ಪುದೆ ಪ್ರಾಣಲಿಂಗಪೂಜೆ ನೋಡಾ. ಇದಕ್ಕೆ ಈಶ್ವರೋýವಾಚ : ``ಅಷ್ಟವಿಧಾರ್ಚನಂ ಕುರ್ಯಾತ್ ಇಷ್ಟಲಿಂಗಸ್ಯ ಪೂಜನಂ | ತಲ್ಲಿಂಗಂ ಮನುತೇ ಯಸ್ತು ಪ್ರಾಣಲಿಂಗಸ್ಯ ಪೂಜನಂ || ಜೀವೋ ಶಿವಾಲಯಃ ಪ್ರೋಕ್ತಃ ಲಿಂಗದೇವಃ ಪರಃಶಿವಃ | ತೈಜೇದ್ಯಜ್ಞಾನನಿರ್ಮಾಲ್ಯಂ ಸೋýಹಂಭಾವೇನ ಪೂಜಯೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ವಶಿಷ*ಗೋತ್ರದಲ್ಲಿ ಹುಟ್ಟಿದವನು ವಶಿಷ*ಗೋತ್ರದವನೆಂಬಂತೆ, ಭಾರದ್ವಾಜಗೋತ್ರದಲ್ಲಿ ಹುಟ್ಟಿದವನು ಭಾರದ್ವಾಜಗೋತ್ರದವನೆಂಬಂತೆ, ಕಾಶ್ಯಪಗೋತ್ರದಲ್ಲಿ ಹುಟ್ಟಿದವನು ಕಾಶ್ಯಪಗೋತ್ರದವನೆಂಬಂತೆ, ವಿಶ್ವಾಮಿತ್ರಗೋತ್ರದಲ್ಲಿ ಹುಟ್ಟಿದವನು ವಿಶ್ವಾಮಿತ್ರಗೋತ್ರದವನೆಂಬಂತೆ ಆ ಪರಿ ಆವಾವ ಗೋತ್ರದಲ್ಲಿ ಆವಾವ ಋಷಿಗಳ ವಂಶದಲ್ಲಿ ಜನಿಸಿದವನು ಆ ಗೋತ್ರ, ಆ ಸಂತತಿ, ಆ ಸುತನು ಎಂಬುದು ಉಪಚರ್ಯವೆ ? ಅಸತ್ಯವೇ ಹೇಳಿರಣ್ಣಾ ? ಅದು ತಾತ್ಪರ್ಯ, ಅದು ಸತ್ಯ. ಆ ಪರಿ ಬ್ರಾಹ್ಮಣನ ಮಗ ಬ್ರಾಹ್ಮಣನು, ಕ್ಷತ್ರಿಯನ ಮಗ ಕ್ಷತ್ರಿಯನು, ವೈಶ್ಯನ ಮಗ ವೈಶ್ಯನು, ಶೂದ್ರನ ಶೂದ್ರನು, ಆ ಪರಿ ತಪ್ಪದು. ದಿಟ ದಿಟ ವಿಚಾರಿಸಿ ನೋಡಿರೆ. ಅದು ಹೇಗೆಂದಡೆ ಶ್ರುತಿ: `ಮಹಾಬ್ರಾಹ್ಮಣಮೀಶಾನಂ' ಎಂದುದಾಗಿ ಮತ್ತಂ `ವಿರೂಪಾಕ್ಷಂ ದ್ವಿಜೋತ್ತಮಂ' ಎಂದುದಾಗಿ ಮಹಾಬ್ರಾಹ್ಮಣನೇ ಮಹಾದೇವನು. ಇದಕ್ಕೆ ಮತ್ತೆ ಶಿವರಹಸ್ಯದಲ್ಲಿ ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೇವಃ ಪರಂ ತತ್ತ್ವಂ ತಸ್ಮೈ ಶ್ರೀಗುರುವೇ ನಮಃ ಎಂದುದಾಗಿ, ಮಹಾದೇವನೇ ಶ್ರೀಗುರು ಕಾಣಿರಣ್ಣಾ. ಆ ಶ್ರೀಗುರುವಿನ ಕರಕಮಲದಲ್ಲಿ ಉದ್ಭವಿಸಿದ ತಚ್ಛಿಷ್ಯನೇ ಮಹಾಬ್ರಾಹ್ಮಣನು, ಇಂತೆಂಬುದು ಹುಸಿಯಲ್ಲ. ಜಾತಿ ಅಜಾತಿ ಎಂದು ಅಷ್ಟಾದಶಜಾತಿಯೊಳಗೆ ಇಕ್ಕಲಾಗದು. ಅಷ್ಟಾದಶಜಾತಿಯೊಳಗೊಂದೂ ಭಾವಿಸಲಾಗದು. ಆ ಮಹಿಮನೇ ಸತ್ಕುಲಜನು. ಇದಕ್ಕೆ ಮತ್ತುಂ `ಬ್ರಹ್ಮಣಾ ಚರತೀ ಬ್ರಾಹ್ಮಣಃ' ಎಂದುದಾಗಿ ಆ ಮಹಾಮಹಿಮನು ಬ್ರಹ್ಮವ ಆಚರಿಸುವನಾಗಿ ಬ್ರಾಹ್ಮಣ ಮತ್ತಂ ಕೂರ್ಮಪುರಾಣದಲಿ `ಸ ಏವ ಭಸ್ಮಜ್ಯೋತಿಃ' ಎಂದುದಾಗಿ ವಿಭೂತಿಯ ಧರಿಸಿಪ್ಪವನಾಗಿ ಆ ಮಹಾತ್ಮನೇ ಜ್ಯೋತಿರ್ಲಿಂಗವು. ಮತ್ತಂ ಶಿವಧರ್ಮದಲ್ಲಿ `ರುದ್ರಾಕ್ಷಂ ಧಾರಯೇನ್ನಿತ್ಯಂ ರುದ್ರಸ್ಸಾಕ್ಷಾದಿವ ಸ್ಮøತಃ' ಎಂದುದಾಗಿ ರುದ್ರಾಕ್ಷಿಯಂ ಧರಿಸಿಪ್ಪª ತಾನಾಗಿ ಆ ಮಹಾಮಹಿಮನೇ ರುದ್ರನು. ಮತ್ತಂ ಕಾಳಿಕಾಗಮದಲ್ಲಿ `ತಸ್ಮಿನ್ವೇದಾಶ್ಚ ಶಾಸ್ತ್ರಾಣಿ ಮಂತ್ರಃ ಪಂಚಾಕ್ಷರೀ ತಥಾ ಎಂದುದಾಗಿ, ಶ್ರೀ ಪಂಚಾಕ್ಷರಿಯ ಜಪಿಸುವನಾಗಿ ಆ ಮಹಿಮನೇ ವೇದವಿತ ಶಾಸ್ತ್ರಜ್ಞನು. ಮತ್ತಂ ಲೈಂಗೇ ಮೂಢನಾಮಪ್ಯಯುಕ್ತಾನಾಂ ಪಾಪಿನಾಂ ಚಾಭಿಚಾರಿಣಾಂ ಯಮಲೋಕೋ ನ ವಿದ್ಯೇತ ಸದಾ ವೈ ಲಿಂಗಧಾರಣಾತ್ ಎಂದುದಾಗಿ ಲಿಂಗವ ಧರಿಸಿಪ್ಪನಾಗಿ ಆ ಮಹಾಮಹಿಮನೇ ಲಿಂಗದೇಹಿ, ಲಿಂಗಕಾಯನು, ಲಿಂಗಪ್ರಾಣನು ಶಿವಲಿಂಗಾರ್ಚನೆಯಂ ಮಾಡುವನಾಗಿ, ಆ ಮಹಾಮಹಿಮನೇ ಶಿವನು ಮತ್ತಂ ಆದಿತ್ಯಪುರಾಣೇ ಅಕೃತ್ವಾ ಪೂಜನಂ ಶಂಭೋರ್ಯೋ ಭುಂಕ್ತೇ ಪಾಪಕೃದ್ದ್ವಿಜಃ ಕುಣಪಂ ಚ ಮಲಂ ಚೈವ ಸಮಶ್ನಾತಿ ದಿನೇ ದಿನೇ ಎಂದುದಾಗಿ ಶಿವಲಿಂಗಕ್ಕೆ ಅರ್ಪಿಸದೇ ಕೊಳ್ಳನಾಗಿ ಆ ಮಹಾಮಹಿಮನೇ ರುದ್ರನು. ಮತ್ತಂ ಶಾಂಕರಸಂಹಿತೆಯಲ್ಲಿ ತಿಲಷೋಡಶಭಾಗಂ ತು ತೃಣಾಗ್ರಾಂಬುಕಣೋಪಮಂ ಪಾದೋದಕಪ್ರಸಾದಾನಾಂ ಸೇವನಾನ್ ಮೋಕ್ಷಮಾಪ್ನುಯಾತ್ ಎಂದುದಾಗಿ ಪಾದೋದಕ ಪ್ರಸಾದವಂ ಕೊಂಬನಾಗಿ ಆ ಮಹಾತ್ಮರು ತಾನೇ ಲಿಂಗೈಕ್ಯನು. ಇನ್ನು ನಾನಾವೇದಶಾಸ್ತ್ರಪುರಾಣಾಗಮಂಗಳ ಸಮ್ಮತ ದೃಷ್ಟವಾಕ್ಯಂಗಳನು ವಿಚಾರಿಸಿ ನೋಡಿದಡೆಯೂ ಶಿವಭಕ್ತನೇ ಕುಲಜನು, ಶಿವಭಕ್ತನೇ ಉತ್ತಮನು. ಇಂತಹ ಶಿವಭಕ್ತನನು ಜಾತಿವಿಜಾತಿ ಎಂದು ಭಾವಿಸಿದಡೆ, ಮತ್ರ್ಯನೆಂದು ಭಾವಿಸಿದಡೆ ನರಕ ತಪ್ಪದು. ವಶಿಷ* ಪುರಾಣದಲ್ಲಿ ಕೇಳಿರೆ: ಮತ್ರ್ಯವನ್ಮನುತೇ ಯಸ್ತು ಶಿವನಿಷ*ಂ ದ್ವಿಜಂ ನರಃ ಕುಂಭೀಪಾಕೇ ತು ಪತತಿ ನರಕೇ ಕಾಲಮಕ್ಷಯಂ ಎಂದುದಾಗಿ ಇದು ಕಾರಣ ಅಷ್ಟಾದಶವಿದ್ಯಂಗಳನು ವಿಚಾರಿಸಿ ತಿಳಿದು ನೋಡಿದಡೆ ಋಷಿಪುತ್ರನ ಋಷಿ ಎಂಬಂತೆ ಶ್ರೀಗುರುಪುತ್ರನನು ಶ್ರೀಗುರು ಎಂಬುದಯ್ಯಾ. ಆ ಮಹಾಮಹಿಮನ ದರ್ಶನವ ಮಾಡಿ ಪಾದೋದಕ ಪ್ರಸಾದವ ಕೊಂಡು ಮುಕ್ತರಪ್ಪುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಇನ್ನು ರುದ್ರಾಕ್ಷಿಸ್ಥಲವೆಂತೆಂದಡೆ : ಬ್ರಹ್ಮ ವಿಷ್ಮು ರುದ್ರ ಮೊದಲಾದ ಸಮಸ್ತ ದೇವರ್ಕಳು ತ್ರಿಪುರದ ರಾಕ್ಷಸರ ಉಪದ್ರಕ್ಕೆ ಭೀತರಾಗಿ ರುದ್ರಲೋಕದ ಮಹಾರುದ್ರಂಗೆ ಶಿವಧೋ ಶಿವಧೋ ಎಂದು ಮೊರೆಯಿಡುತ ಚಿಂತಾಕ್ರಾಂತರಾಗಿ ನಿಲಲು, ಆ ರುದ್ರಲೋಕದ ಮಹಾರುದ್ರನು ತ್ರಿಪುರವಧಾರ್ಥ ಸರ್ವದೇವಮಯ ದಿವ್ಯ ಅನಂತತೇಜ ಅನಂತಪ್ರಚಯ ಅನಂತಜ್ವಾಲಾಮಯವಾಗಿಹ ಅಘೋರರೂಪ ತಾಳಿ ಉತ್ತಮವಾದ ಅಘೋರಾಸ್ತ್ರಮಂ ಚಿಂತಿಸಿ, ತ್ರಿಪುರದ ಕೀಲ ದಿವ್ಯಸಹಸ್ರವರ್ಷ ನೋಡಲು ಆ ರುದ್ರನ ಅಕ್ಷಿಯಲ್ಲಿ ರಕ್ತಾಶ್ರುಜಲಬಿಂದುಗಳು ಜನಿಸಿ ಭೂಮಿಯ ಮೇಲೆ ಬೀಳಲು ಮಹಾರುದ್ರಾಕ್ಷ ವೃಕ್ಷವಾಗಿ ತ್ರೈಲೋಕ್ಯಾನುಗ್ರಹ ಕಾರಣವಾಯಿತ್ತು ನೋಡಾ. ಆ ರುದ್ರಾಕ್ಷಿಯ ದರುಶನದ ಫಲ ಲಿಂಗದರುಷನದ ಫಲ, ರುದ್ರಾಕ್ಷಿಯ ದರುಶನ ಸ್ಪರ್ಶನದಿಂದ ಸರ್ವಪಾಪಂಗಳು ಹೋಹವು ನೋಡಾ. ಇದಕ್ಕೆ ಈಶ್ವರೋsವಾಚ : ``ಶ್ರುಣು ಷಣ್ಮುಖ ಯತ್ನೇನ ಕಥಯಾಮಿ ಸಮಾಸತಃ | ತ್ರಿಪುರೋ ನಾಮ ದೈತ್ಯಸ್ತು ಪುರಶ್ಚಿತ್ತು ಸುರರ್ಜಯಃ || ಚಿತ್ತಾಪ್ತೇವ ಸುರಾಸ್ಸರ್ವೇ ಬ್ರಹ್ಮ ವಿಷ್ಣೇಂದ್ರದೇವತಾಃ ಚಿಂತಿತಂ ಚ ಮಯಾ ಪುತ್ರ ಅಘೋರಾಸ್ತ್ರಮನುತ್ತಮಂ|| ಸರ್ವದೇವಮಯಂ ದಿವ್ಯಂ ಜ್ವಲಿತಂ ಘೋರರೂಪಕಂ | ತ್ರಿಪುರಸ್ಯ ವಧಾರ್ಥಾಯ ದೇವಾನಾಂ ಪ್ರಾಣವಾಯು ಚ || ಸರ್ವವಿಘ್ನಪ್ರಶಮನಂ ಅಘೋರಾಸ್ತ್ರಂತು ಚಿಂತಿತಂ | ದಿವ್ಯವರ್ಷಸಹಸ್ರಾಣಿ ಚಕ್ಷುರುನ್ಮೀಲಿತಂ ಮಯಾ || ಘಟೇಭ್ಯಾಂ ಚ ಕುಲಾಕ್ಷಿಭ್ಯಾಂ ಪತಿತಾ ಜಲಬಿಂದವಃ | ರಕ್ತಾಶ್ರುಬಿಂದವೋ ಜಾತಾಃ ಮಹಾರುದ್ರಾಕ್ಷವೃಕ್ಷಕಾಃ || ಸ್ಥಾವರತ್ವಮನುಪ್ರಾಪ್ಯ ಮತ್ರ್ಯಾನುಗ್ರಹಕಾರಣಾತ್ | ರುದ್ರಾಕ್ಷಾಣಾಂ ಫಲಂ ಧೃತ್ವಾ ತ್ರಿಷು ಲೋಕೇಷು ವಿಶ್ರುತಂ || ಲಿಂಗಸ್ಯ ದರ್ಶನೇ ಪುಣ್ಯಂ ಭವೇತ್‍ರುದ್ರಾಕ್ಷದರ್ಶನಾತ್ | ಭಕ್ತ್ಯ ರಾತ್ರೋ ದಿವಾಪಾಪಂ ದಿವಾರಾತ್ರಿ ಕೃತಂ ಹರೇತ್ || ಲಕ್ಷಂತು ದರ್ಶನಾತ್ಪುಣ್ಯಂ ಕೋಟಿ ಸಂಸ್ಪರ್ಶನೇ ಭವೇತ್ | ತತ್ಕೋಟಿ ಶತಂ ಪುಣ್ಯಂ ಲಭತೇ ಧಾರಣಾನ್ನರಃ || ಲಕ್ಷಕೋಟಿ ಸಹಸ್ರಾಣಿ ಲಕ್ಷಕೋಟಿ ಶತಾನಿ ಚ | ತಜ್ಜಪಾಲ್ಲಭತೇ ಪುಣ್ಯಂ ನಾತ್ರ ಕಾರ್ಯಂ ವಿಚಾರಣಾತ್ ||'' ಇಂತೆಂದುದಾಗಿ, ಇದಕ್ಕೆ ಮಹಾದೇವೋoವಾಚ : ``ಶಿರೋಮಾಲಾ ಚ ಷಟ್ತ್ರಿಂಶದ್ವಾತ್ರಿಂಶತ್ಕಂಠಮಾಲಿಕಾ | ಕೂರ್ಪರೇ ಷೋಡಶ ಪ್ರೋಕ್ತಾ ದ್ವಾದಶಂ ಮಣಿಬಂಧಯೋಃ || ಉರೋಮೂಲಾಚ ಪಂಚಾಶತಷ್ಟೋತ್ತರಶತಂ ತಥಾ | ಶಿರಸಾ ಧಾರಯತ್ಕೋಟಿ ಕರ್ಣಾಭ್ಯಾಂ ದಶಕೋಟಿಯಃ || ಗಳೇ ಬಂಧಂ ಶತಂ ಕೋಟಿ ಮೂಧ್ರ್ನಿ ಕೋಟಿಸಹಸ್ರಕಂ | ಆಯುಕಂಠೋಪವಿತ್ತಂ ಚ ಲಕ್ಷಮಾವೇ ಮಣಿಬಂಧಯೋರ್ಣ ವಕ್ತ್ರಾಣಿ | ದ್ವಾದಶಾದಿತ್ಯಾದಿ ಪಾಯು ಶ್ರೀಮಹಾದೇವಾಯ ನಮಃ || ಅಷ್ಟೋತ್ತರಶತಂ ಸೋಪವಿ ತ್ತಂ ಚತುರ್ದಶ ವಕ್ತ್ರಾಣಿ | ಶತರುದ್ರಾತ್ಮಾಕಾಯ ಶ್ರೀ ವಿಶ್ವೇಶ್ವರಾಯ ನಮಃ ಇತಿ ||'' ಇಂತೆಂದುದಾಗಿ, ಇದಕ್ಕೆ ಬೋಧಾಯನಶಾಖಾಯಾಂ : ``ತಾನಿ ಹವಾಏತಾನಿ ರುದ್ರಾಕ್ಷಾಣಿ ಯತ್ರ ಯೋ ಯೇ ಧಾರಯಂತಿ ಕಸ್ಮಾದೇವ ಧಾರಯಂತಿ ಸ್ನಾತ್ತ್ವಾನಿ ಧಾರಯನ್ ಗರ್ಭೇ ತಿಷ್ಟನ್ ಸ್ವಪನ್ ಖಾದನ್ ಉನ್ಮಿಷನ್ ಅಪಿ ಸರ್ವಾಣೈವಾನಿ ಚರತಿ ಮದ್ರಿ ಭೂತ್ವಾ ರುದ್ರೋ ಭವತಿ ಯೋಯೇನ ವಿದ್ವಾನ್ ಬ್ರಹ್ಮಚಾರೀ ಗೃಹಸ್ಥೋ ವಾನಪ್ರಸ್ಥೋಯತಿರ್ವಾ ಧಾರಯೇತ್ ಪದೇ ಪದೇ ಯಶ್ವಮೇಧಫಲಂ ಪ್ರಾಪ್ನೋತಿ ||'' ಇಂತೆಂದುದು ಶ್ರುತಿ. ಇದಕ್ಕೆ ಲೈಂಗ್ಯಪುರಾಣೇ : ``ರುದ್ರಾಕ್ಷಂ ಧಾರಯೇದ್ವಿಪ್ರಃ ಸಂಧ್ಯಾದಿಷು ಚ ಕರ್ಮಸು | ತತ್ಸರ್ವಂ ಸಮವಾಪ್ನೋತಿ ಕೋಟಿ ಕೋಟಿ ಗುಣಂ ಸದಾ || ಸ್ನಾನೇ ದಾನೇ ಜಪೇ ಹೋಮೇ ವೈಶ್ಯದೇವೇಷುರರ್ಚನೆ | ಪ್ರಾಯಶ್ಚಿತ್ತೇ ಕಥಾ ಶ್ರಾದ್ಧೇ ದೀಕ್ಷಾಕಾಲೇ ವಿಶೇಷತಃ || ರುದ್ರಾಕ್ಷಧರೋ ಭೂತ್ವಾ ಯತ್ಕಿಂಚಿತ್ಕರ್ಮವೈದಿಕಂ | ಕುರ್ಯಾದ್ವಿಪ್ರಸ್ತು ಯೋ ಮೋಹ ವಂಶಾವಪ್ನೋತಿ ತತ್ಫಲಂ ||'' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ಲಕ್ಷಂತು ದರ್ಶನಾತ್ಪುಣ್ಯಂ ಕೋಟಿ ಸಂಸ್ಪರ್ಶನಾದಪಿ | ದಶಕೋಟಿ ಶತಂ ಪುಣ್ಯಂ ಧಾರಣಾಲ್ಲಭತೇ ವರಂ ||'' ಇಂತೆಂದುದಾಗಿ, ಇದಕ್ಕೆ ಕೂರ್ಮಪುರಾಣೇ : ``ಹಸ್ತೇಚೋರಸಿ ಕಂಠೇ ವಾ ಮಸ್ತಕೇ ವಾsಪಿ ಧಾರಯೇತ್ | ಮುಚ್ಯತೇ ಸರ್ವಪಾಪೇಭ್ಯಃ ಸ ರುದ್ರೋ ನಾತ್ರಸಂಶಯಃ || '' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ಶಿಖಾಯಾಂ ಧಾರಯೇದೇಕಂ ಷಟ್ತ್ರಿಂಶನ್ಮಸ್ತಕೇ ತಥಾ| ದ್ವಾತ್ರಿಂಶತ್ಕಂಠದೇಶೇಚ ಪಂಚಾಷಣ್ಮಾಲಿಕಾ ಹೃದಿ || ಷೋಡಶಂ ಬಾಹುಮೂಲಯೋಃ ದ್ವಾದಶಂ ಮಣಿಬಂಧಕೇ | ಕರ್ಣಯೇಕೀಕಮೇಶುಸ್ಯಾ ದುಪವಿತೇ ಶತಾಷ್ಟಕಂ || ಶತಾಷ್ಟಮಕ್ಷಮಾಲಾಂತು ನಿತ್ಯಂ ಧಾರಯೇತೇ ವರಃ | ಪದೇ ಪದೇsಶ್ವಮೇಧಸ್ಯ ಫಲಂ ಪ್ರಾಪ್ನೋತಿ ನ ಸಂಶಯಃ || ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ರುದ್ರಾಕ್ಷ ಶತಕಂಠೋ ಯಃ ಗೃಹೇ ತಿಷ*ತಿ ಯೋ ವರಃ | ಕುಲೈಕವಿಂಶಮುಕ್ತಾರ್ಯ ಶಿವಲೋಕೇ ಕೋಟಿಭುಜದ್ವಯಂ | ಅಪ್ರಮೇಯ ಫಲಂ ಹಸ್ತೇ ರುದ್ರಾಕ್ಷಂ ಮೋಕ್ಷಸಾಧನಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋsವಾಚ : ``ಅವದ್ಯಃ ಸರ್ವಭೂತಾನಾಂ ರುದ್ರವದ್ವಿಚರೇತ್ ಭುವಿ | ಸುರಾಣಾಮಸುರಾಣಾಂ ಚ ವಂದನೀಯೋ ಯಥಾ ಶಿವಃ || ರುದ್ರಾಕ್ಷರಧಾರಶೋ ನಿತ್ಯಂ ವಂದನೀಯೋ ನರೈರಿಹ | ಉಚ್ಛಿಷ್ಟೋ ವಾ ವಿಕರ್ಮಸ್ತೋ ಯುಕ್ತೋ ವಾ ಸರ್ವಪಾಪಕೈಃ | ಮುಚ್ಯತೇ ಸರ್ವಪಾಪೇಭ್ಯೋ ನರೋ ರುದ್ರಾಕ್ಷಧಾರಣಾತ್ ||'' ಇಂತೆಂದುದಾಗಿ ಇದಕ್ಕೆ ಕಾತ್ಯಾಯನಶಾಖಾಯಾಂ : ``ಅಥೈವ ಭಗವಂತಂ ರುದ್ರಕುಮಾರಃ ಪಪ್ರಚ್ಛಾರಣೇನ ದಶಶತ ಗೋದಾನಫಲಂ || ದರ್ಶನಸ್ಪರ್ಶನಾಭ್ಯಾಂ ದ್ವಿಗುಣಂ ತ್ರಿಗುಣಂ ಫಲಂ ಭವತಿ, ಅತ ಊಧ್ರ್ವಂ ವಕ್ತುಂ ನ ಶಕ್ನೋಮಿ ತತೋಂ ಜಪ ಸಮಂತ್ರಕಂ ಧಾರಣೇ ವಿಧಿಂ ಕಥಯಾಮಿ || ಸ್ನಾನ ವಿಧಿನಾ ಸ್ನಾತೇಷು ಖೇರಾಜ್ಞೇಯ ಸ್ನಾನಂ ತ್ರಿಪುಂಡ್ರಧಾರಣಂ ಕೃತ್ವಾ ಏಕಾಶ್ಯಾದಿರುದ್ರ ಶಾಂತಾನಾಂ || ಸೃಷ್ಟಿಕ್ರಮೇಣಂ ಮಂತ್ರಾಸ್ಯಂ `ಓಂ ಹೂಂ ಚಂ ಖಂ ಹೂಂ ಕ್ಲಿಂ ಮಾಂ ದ್ರಾಂ ದ್ರಿಂ ಹ್ರುಂ ಕ್ರೂಂ ಕ್ಷಾಂ ಕ್ಷಿಂ ಕ್ಷುಂ' ನವಮಿತೀಷುರುವೋಕ್ತ ಂ ಮಂತ್ರಾನನಂತಾ ಶೋಕ್ತ್ವಾನ್ವಾ ಜಪೇದಿಮಾನ್ ಪಾಣಾನಾಯಮ್ಯ ಸಮಸ್ತಪಾಪಕ್ಷಯಾರ್ಥಂ ಶಿವಜ್ಞಾನಾ ವಸ್ಯಾರ್ಥ ಸಮಸ್ತ ಮಂತ್ರಸ್ಸಹಧಾರಣಂ ಕರಿಷ್ಯಾಮಿತಿ ಸಂಕಲ್ಪ್ಯ ಶಿಖಾಯಾಮೇಕಮೇಕಸ್ಯಂ ಶ್ರೀ ಸದಾಶಿವಾಯ ನಮಃ ಇತಿ ||'' ``ದ್ವಿ ತ್ರಿ ದ್ವಾದಶವಕ್ತ್ರಾಣಿ ಶಿರಸಿ ತ್ರೀಣಿ ಧಾರಯೇತ್ | ವಹ್ನಿ ಸೂರ್ಯಸೋಮಾಧಿಪಾಯ ಶಿವಾಯ ನಮಃ ಇತಿ || ಏಕಾದಶ ವಕ್ತ್ರಂ ಷಟ್ತ್ರಿಂಶನ್ಮೂಧ್ರ್ನಿ ಷಟ್ತ್ರಿಂಶತ್ತತ್ವಾತ್ಮಕಾಯ | ನಮ ಇತಿ ಪಂಚದಶ ವಕ್ತ್ರಾಣಿ ಕರ್ಣಯೋರೇಕಮೇಕಂ || ಸೋಮಾಯ ನಮಃ ಇತಿ, ಯೇದಷ್ಟವಕ್ತ್ರಾಣಿ ಕಂಠೇ ದ್ವಾತ್ರಿಂಶತ್ | ತ್ರ್ಯಂಬಕಕಲಾತ್ಮನೇ ಶ್ರೀಕಂಠಾಯ ನಮಃ ಇತಿ || ಚತುರ್ವಕ್ತ್ರಂ ಪಂಚಷಣ್ಮಾಲಿಕಾಮುರಸಿ ಶ್ರೀಕಂಠಾದಿ | ಮೂತ್ರ್ಯಾಯಸ್ಥಿಕಾಯ ಶ್ರೀ ಸರ್ವಜ್ಞಾಯ ನಮಃ ಇತಿ || ಬಾಹೋ ತ್ರಯೋದಶವಕ್ತ್ರಾಣಿ ಷೋಡಶಸುಖಾಸನಾದಿ | ಷೋಡಶಮೂತ್ರ್ಯಾತ್ಮಕಾಯ ಶ್ರೀಕಂಠಾಯ ನಮಃ ಇತಿ || ದಕ್ಷೇರ್ಣವ ವಕ್ತ್ರಾಣಿ ಶ್ರೀ ವ್ಯೋಮಕಳಾತ್ಮಕಾಯ ಉಪಮಾಪತಯೇ ನಮಃ ಇತಿ ಉಪಾಯತೇ ||'' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ರುದ್ರಾಕ್ಷಮಾಲಯಾ ಶುಭ್ರೋ ಜಟಾಜೂಟವಿರಾಜಿತಃ | ಭಸ್ಮಾವಲಿಪ್ತಸರ್ವಾಂಗಃ ಕಮಂಡಲುಕರಾನ್ವಿತಃ || ಕೃಷ್ಮಾಜಿನೋ ಪವಿತ್ರಾಂಗಃ ಆಶಾಹೆ ಪುಣ್ಯಕೀರ್ತನಃ | ಶಿವಃ ತಸ್ಮೆ ೈಃ ಮಹಾದೇವಂ ಯೋಗಿನಾಂ ಹೃದಯಾಲಯಂ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ರುದ್ರಕ್ಷಧಾರಣಾಸ್ಸರ್ವೇ ಜಟಾಮಂಡಲಧಾರಣಾತ್ | ಅಕ್ಷಮಾಲಾರ್ಪಿತಕರಂ ತ್ರಿಪುಂಡ್ರಾಪಲಿಯುಕ್ತಾಂಗಂ | ಆಷೇಡೇವ ವಿರಾಜಿತಂ ಋಗ್ಯಜುಃಸಾಮರೂಪೇಣ | ಸೇವತೇಸ್ಮೈ ಮಹೇಶ್ವರಃ ಸಂಸ್ಥಾಯಮನೋದಿಷ್ಟಾಂಗೈ || ದೇವೈರ್ಮುನಿಗಣೈಸ್ತಥಾಮೃತ ತ್ರಿಪುಂಡ್ರಕೋ ದಿವ್ಯೇ | ರುದ್ರಾಕ್ಷೇಶ್ವ ವಿಭಾಷಿತಃ ಶುಭೇ ಸತತಂ ವಿಷ್ಟು| ಭಸ್ಮದಿಗ್ಧತಮೂಲತಃ ತ್ರಿಪುಂಡ್ರಾಂಕಿತ ಸರ್ವಾಂಗೋ | ಜಟಾಮಂಡಲಮಂಡನ ಭೂತಿ ತ್ರಿಪುಂಡ್ರರುದ್ರಾಕ್ಷಂ | ಅಕ್ಷರ ಮಾಲಾರ್ಪಿತಕರಃ ಕುರ್ವಕ್ತ್ರಃ ಪಿತಾಮಹಾ ||'' ಇಂತೆಂದುದಾಗಿ, ಇದಕ್ಕೆ ಮಹಾದೇವೋವಾಚ : ``ಭಾಲೇ ತ್ರಿಪುಂಡ್ರಕಂ ಚೈವ ಗಳೇ ರುದ್ರಾಕ್ಷಮಾಲಿಕಾ | ವಕ್ತ್ರೇ ಷಡಕ್ಷರೀ ಮಂತ್ರೋ ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ರುದ್ರಕ್ಷಮಾಲಿಕಾ ಕಂಠೇ ಧಾರಸ್ತದ್ಭಕ್ತಿವರ್ಜಿತಃ | ಪಾಪಕರ್ಮಾಪಿ ಯೋ ನಿತ್ಯಂ ರುದ್ರಲೋಕೇ ಮಹೀಯತೇ ||'' ಇಂತೆಂದುದಾಗಿ, ಇದಕ್ಕೆ ಸ್ಕಂದಪುರಾಣೇ : ``ರುದ್ರಾಕ್ಷಂ ಕಂಠಮಾಶ್ರಿತ್ಯ ಶ್ವಾನೋsಪಿ ಮಿೃಯತೇ ಯದಿ | ಸೋsಪಿ ರುದ್ರಂ ಸಮಾಪ್ನೋತಿ ಕಿಂ ಪುನರ್ಮಾನುಷಾದಯಃ || ಇಂತೆಂದುದಾಗಿ, ಇದಕ್ಕೆ ಲೈಂಗ್ಯಪುರಾಣೇ : ``ಖಾದನ್ ಮಾಂಸಂ ಪಿಬನ್ ಮದ್ಯಂ ಸಂಗಚ್ಛನ್ನಂತ್ಯಜೇಷ್ವಪಿ | ಸದ್ಯೋ ಭವತಿ ಪೂತಾತ್ಮಾ ರುದ್ರಾಕ್ಷೌ ಶಿರಸಿ ಸ್ಥಿತೇ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಶುಚಿರ್ವಾಪ್ಯಶುಚಿರ್ವಾಪಿ ಅಭಕ್ಷಸ್ಯ ಚ ಭಕ್ಷಣಾತ್ | ಅಗಮ್ಯಾಗಮನಂ ಚೈವ ಬ್ರಹ್ಮಹಾ ಗುರುತಲ್ಪಕಃ || ಮ್ಲೇಚ್ಛೋ ವಾಪ್ಯಥ ಚಾಂಡಾಲೋ ಯುಕ್ತೋ ವಾ ಪ್ಯಥ ಪಾತಕೈಃ | ರುದ್ರಾಕ್ಷಧಾರಣಾದ್ಯಸ್ತು ಸ ರುದ್ರೋ ನಾತ್ರ ಸಂಶಯಃ ||'' ಇಂತೆಂದುದಾಗಿ, ಇದಕ್ಕೆ ಮಹಾಲಿಂಗಪುರಾಣೇ : ``ಧ್ಯಾನಧಾರಣಹೀನೋsಪಿ ರುದ್ರಾಕ್ಷಂ ಯೋ ಹಿ ಧಾರಯೇತ್ | ಸರ್ವಪಾಪವಿನಿರ್ಮುಕ್ತಃ ಸಯಾತಿ ಪರಮಾಂ ಗತಿಂ||'' ಇಂತೆಂದುದಾಗಿ, ಇದಕ್ಕೆ ಮಾನವಪುರಾಣೇ : ``ಮೃಣ್ಮಯಂ ವಾಪಿ ರುದ್ರಾಕ್ಷಂ ಕೃತ್ವಾ ಯಸ್ತು ಧಾರಯೇತ್ | ಅಪಿ ದುಃಕೃತಕರ್ಮೋsಪಿ ಸ ಯಾತಿ ಪರಮಾಂ ಗತಿಂ ||'' ಇಂತೆಂದುದಾಗಿ, ಇದಕ್ಕೆ ಶಿವಲಿಂಗಾಗಮೇ : ``ರುದ್ರಾಕ್ಷಮಾಲಂ ಬ್ರಹ್ಮಾ ಚ ತನ್ನಾಳಂ ವಿಷ್ಣುರುಚ್ಯತೇ | ಮುಖಂ ಸದಾಶಿವಂ ಪ್ರೋಕ್ತಂ ಬಿಂದುಃ ಸರ್ವತ್ರ ದೇವತಾ ||'' ಇಂತೆಂದುದಾಗಿ, ``ರುದ್ರಾಕ್ಷಿಯ ಧರಿಸಿಪ್ಪಾತನೆ ರುದ್ರನು. ಆತನ ಭವರೋಗಂಗಳು ಹೊದ್ದಲಮ್ಮವು ನೋಡಾ. `ಏವಂ ರುದ್ರಾಕ್ಷಧಾರಣಾದ್ ರುದ್ರಾ' ಎಂದುದು ಶ್ರುತಿ. ರುದ್ರಾಕ್ಷಿಯ ಧರಿಸಿಪ್ಪ ಶರಣರಿಗೆ ಶರಣೆಂದು ಬದುಕಿದೆನು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶಿವಲಿಂಗದೇವರ ಪೂಜಿಸದೆ ಉಂಬವರೆಲ್ಲರೂ ಹೆಣನ ಮಲವನು ಒಂದಾಗಿಯೆ ತಿಂಬರಯ್ಯಾ, ಅಲ್ಲಿ ಏನೂ ಸಂದೇಹವಿಲ್ಲಾಗಿ. ಶಿವಧರ್ಮ: ಯಸ್ತು ಲಿಂಗಾರ್ಚನಂ ತ್ವಕ್ತ್ವಾಭುಙ್ಞ್ತೀ ಕ್ರಿಮಿಕೀಟಮಾಂಸಾನ್ | ನರೋ ನರಕಗಾಮೀ ಸ್ಯಾತ್ಸರ್ವಲೋಕಬಹಿಷ್ಕøತಃ || ಅಕೃತ್ವಾ ಪೂಜನಂ ಶಂಭೋ ಯೋ ಭುಙÂ್ತೀ ಪಾಪಕೃದ್ವಿಜಃ | ಕುಣಪಂ ಚ ಮಲಂ ಚೈವ ಸಮಶ್ನಾತಿ ದಿನೇ ದಿನೇ || ಎಂದುದಾಗಿ, ಇದು ಕಾರಣ, ನಿಮ್ಮ ನಂಬಲರಿಯದ ಪಾಪಿಗಳಿಗೆ ಎಂದೆಂದಿಗೂ ನರಕ ತಪ್ಪದು, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಗುರುವಿಂದನ್ಯ ದೈವವಿಲ್ಲೆಂಬುದಕ್ಕೆ ಆಗಮವಾಣಿಯೆ ಸಾಕ್ಷಿ. ಅದೆಂತೆಂದಡೆ: ``ಗುರುದೇವೋ ಮಹಾದೇವೋಗುರುದೇವಸ್ಸದಾಶಿವಃ| ಗುರುದೇವಾತ್ಪರಂ ನಾಸ್ತಿ ತಸ್ಮೆ ೈ ಶ್ರೀಗುರುವೆ ನಮಃ|| ಗುರುಃ ಶಂಭುರ್ಗುರುಜ್ರ್ಞಾನಂ ಗುರುರ್ಮಾತಾ ಗುರುಃ ಪಿತಾ| ಗುರುರ್ಬಂಧುರ್ಗುರುಃ ಸಾಕ್ಷಾದ್ದೇವತಾಗಣಪುಂಗವಃ|| ಅನುಷಾ*ನಾಕಾಂ ಪೂಜಾಂ ಯಃ ಕರೋತಿ ಗುರುಂ ವಿನಾ| ಯಾತಿ ನೀಚಾನಿ ಜನ್ಮಾನಿ ತಸ್ಮಾದ್ಗುರುವರಂ ಭಜೇತ್|| ಷಣ್ಮಾಸೇ ವ್ಯಾಪಿ ವರ್ಷೇ ವಾ ವರ್ಷೇ ವಾ ದ್ವಾದಶಾತ್ಮಕೇ| ಗುರೋರಾಲೋಕನಂ ಯಸ್ತು ನ ಕರೋತಿ ಸ ಪಾಪವಾನ್||' ಎಂಬುದೆ ಪ್ರಮಾಣವಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಹರಂಗೆ ಅಜ ಹರಿ ಮೊದಲಾದ ದೈವಂಗಳ ಸರಿಯೆಂಬ ನರಕಿಗಳ, ಗುರುವಿಂಗೆ ನರರ ಸರಿಯೆಂಬ ಕಡುಪಾಪಿಗಳ, ಪರಶಿವಧರ್ಮಕ್ಕೆ ವೇದಾಗಮಂಗಳ ಸರಿಯೆಂಬ ಪಾತಕರ, ಪರಶಕ್ತಿ ಜಗದಂಬೆ ಉಮಾದೇವಿಯರಿಗೆ ಉಳಿದಾದ ಶಕ್ತಿಗಳ ಸರಿಯೆಂಬ ಕರ್ಮಿಗಳ, ಇಂತಿವರ ಮುಖವ ನೋಡಿದವರಿಗೆ ನರಕವಲ್ಲದೆ ಮತ್ತೊಂದು ಗತಿಯಿಲ್ಲ. ಇಂತಿವರ ಹೊರೆಯಲ್ಲಿರಲಾಗದು, ಒಡನೆ ನುಡಿಯಲಾಗದು, ಒಂದಾಸನದಲ್ಲಿ ಕುಳ್ಳಿರಲಾಗದು. ಶಿವಂ ಬ್ರಹ್ಮಾದಿಭಿಃ ಸಾಮ್ಯಂ ಗುರುಃ ಪ್ರಾಕೃತೈಸ್ಸಮಂ | ಶಿವಂ ವಿದ್ಯಾ ಚ ವೇದಾದ್ಯೈರ್ಮನುತೇ ಯಸ್ತು ಮಾನವಃ || ಸ ಪಾಪೀ ದುರ್ಮತಿಃ ಕ್ರೂರಃ ಶ್ವಪಚಃ ಶ್ವಪಚಾಧಮಃ | ಶಿವಂ ಬ್ರಹ್ಮಾದಿಭಿಃ ಸಾಮ್ಯಂ ಶಿವಂ ಲಕ್ಷ್ಯಾದಿ ಶಕ್ತಿಭಿಃ || ಸ್ವಗುರುಂ ಪ್ರಾಕೃತೈಸ್ಸಾರ್ಧಂ ಯೇ ಸ್ಮರಂತಿ ವದಂತಿ ಚ | ತೇಷಾಂ ಪಾಪಾನಿ ನಶ್ಯಂತಿ ಶ್ರೀಮತ್ ಪಂಚನದಾಶ್ರಯಃ || ಇಂತೆಂದುದಾಗಿ, ಇದು ಕಾರಣ, ಇಂತೀ ಮರುಳು ದುರಾತ್ಮರನೆನಗೆ ತೋರಿಸದಿರಯ್ಯಾ. ಬಸವಪ್ರಿಯ ಕೂಡಲಚೆನ್ನಸಂಗಯ್ಯಾ, ಬೇಡುವೆ ನಿಮ್ಮದೊಂದೇ ವರವನು.
--------------
ಸಂಗಮೇಶ್ವರದ ಅಪ್ಪಣ್ಣ
ಬಸವ ನೀಲಲೋಚನೆ ಇಬ್ಬರ ನಾಮಾಕ್ಷರ ಕೂಡಲು ಎಂಟಕ್ಷರಗಳಾದವು. ಆ ಎಂಟಕ್ಷರಗಳೇ ಮಾಯಾಖ್ಯ ಪಂಚಾಕ್ಷರವಾದವು, ಮಾಯಾಖ್ಯ ಪಂಚಾಕ್ಷರ ಎಂತೆಂದಡೆ : ಓಂ ಹ್ರಾಂ ಹ್ರೀಂ ನಮಃಶಿವಾಯ. ಸಾಕ್ಷಿ: 'ಬಕಾರಂ ಗುರುರೂಪಂ ಚ ಸಕಾರಂ ಲಿಂಗಮೇವ ಚ | ವಕಾರಂ ಪರಮಾಖ್ಯಾತಂ ತ್ರಿವಿಧಂ ತತ್ತ್ವನಿರ್ಣಯಂ|| ನೀಲಲೋಚನೆ ಯಸ್ತು ನಾಮಾಕ್ಷರಂ ಪಂಚಕಂ | ಸ್ತೋತ್ರಂ ವೇತ್ತಿ ತ್ರಿಸಂಧ್ಯಾಂ ಚ ಭಕ್ತಸ್ಸರ್ವಂ ಕಾಮಮೋಕ್ಷದಂ||' ಎಂದುದಾಗಿ, ಈ ಎಂಟಕ್ಷರವೇ ಎನ್ನ ಅಷ್ಟದಳಕಮಲದೊಳಗೆ ಇಷ್ಟಲಿಂಗವಾಗಿ ನಿಂದ ನಿಲವ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಇನ್ನಷ್ಟು ... -->