ಪಶು ಪಾಷಂಡಿ ಚಾರ್ವಾಕ ಮಾತುಗಂಟಿ
ಎಷ್ಟನಾಡಿದಡÀೂ ಶಿವಯೋಗಸಂಬಂಧ ಸಂಪನ್ನನೊಪ್ಪುವನೆ ?
ರಾಜ್ಯಭ್ರಷ್ಟಂಗೆ ತ್ಯಾಗಭೋಗವುಂಟೆ ?
ನಪುಂಸಕಂಗೆ ಜಿತೇಂದ್ರಿಯತ್ವವುಂಟೆ ?
ದರಿದ್ರಂಗೆ ನಿಸ್ಪೃಹತ್ವವುಂಟೆ ?
ನಿಶ್ಚೈಸಿ ನಿಜವಸ್ತುವನರಿಯದವನು
ಕರ್ತೃಭೃತ್ಯಸಂಬಂಧವನೆತ್ತ ಬಲ್ಲನೊ ?
ಮೃತಘಟದ ವೈಭವದಂತೆ, ವಿಧವೆಯ ಗರ್ಭದಂತೆ
ನಿನ್ನಲ್ಲಿಯೆ ನೀನರಿ ದ್ವೈತಾದ್ವೈತಂಗಳೆಂಬವ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.