ಉಳ್ಳೆ ಹೇರಂಡ ಮಹಿಷಿ ಇವೆಲ್ಲವ ನಿಷೇಧವೆಂದು ಬಿಟ್ಟಲ್ಲಿ
ಕೊಲ್ಲದ ಕೊಲೆಯ ಕೊಲಲೇತಕ್ಕೆ ?
ವ್ರತಿಗಳಲ್ಲಿ ಗೆಲ್ಲ ಸೋಲಕ್ಕೆ ಹೋರಲೇತಕ್ಕೆ ?
ಪ್ರಮಥರೆಲ್ಲರು ಅಲ್ಲಿ ಇಲ್ಲಿಯವರೆಂದು ಪ್ರಮಾಣಿಸಬಹುದೆ ?
ಸರ್ಪನೆತ್ತ ಮುಟ್ಟಿದಲ್ಲಿಯೂ ಪ್ರಾಣಕ್ಕೆ ಹೆಚ್ಚು ಕುಂದಿಲ್ಲ.
ಶರಣರತ್ತ ಇತ್ತಣವರೆಂದಡೆ ಭಕ್ತಿಗೆ ಹಾನಿ, ಸತ್ಯಕ್ಕೆ ದೂರ ;
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಮುನ್ನವೆ ದೂರ.