ಅಥವಾ

ಒಟ್ಟು 40 ಕಡೆಗಳಲ್ಲಿ , 21 ವಚನಕಾರರು , 38 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇರಿಲ್ಲದೆ ಭೂಮಿಗೆ ಹೊಂದದೆ ಒಂದು ಮಾವಿನ ವೃಕ್ಷವು ಪುಟ್ಟಿತ್ತು. ಆ ವೃಕ್ಷ ನೀರಿಲ್ಲದೆ ಗಾಳಿ ಸೋಂಕದೆ ಪಲ್ಲವಿಸಿತ್ತು. ಮೂರಾರು ಗಂಟಾಗಿರ್ಪವು. ತುದಿಗಂಟಿನಲ್ಲಿ ಮೊಳೆದೋರಿ ಎರಡು ಶಾಖೆ ಪುಟ್ಟಿದವು. ಎರಡು ಶಾಖೆಗೆ ಮೂರು ಕವಲು, ಮೂರು ಕವಲಿಗೆ ಆರು ಬಗಲು, ಆರು ಬಗಲಿಗೆ ಮೂವತ್ತಾರು ಪರ್ಣಂಗಳು, ಇನ್ನೂರಾಹದಿನಾರು ಕುಡಿಗಳು, ಅನೇಕ ಕುಸುಮಂಗಳು. ಅದರೊಳಗೆ ಅಗ್ನಿವರ್ಣದ ಕುಸುಮ ಮೂರುಗಂಟಿನ ಮೇಲೆ ಪುಟ್ಟಿ, ತುದಿಯಲ್ಲಿ ಅರಳಿ ಫಲವಾಗಿ, ಐದು ಗಂಟಿನ ಮೇಲೆ ಹಣ್ಣಾಗಿ, ಅಮೃತಜೇವಣಿಯೆಂಬ ಹಣ್ಣನು ಕಮಲದಲ್ಲಿ ಕಂಡು ಸೇವಿಸಿ ವ್ಯಾಧಿಯ ಪರಿಹರಿಸಬಲ್ಲಡೆ ಅಸುಲಿಂಗಸಂಬಂಧಿಯೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಸೀಮೆಗಳೆನಿಸಿ ಯತಿ ಸಿದ್ಧ ಸಾಧ್ಯರೆಲ್ಲ ವ್ರತಭ್ರಷ್ಟರಾದರು. ಅದು ಎಂತೆಂದೊಡೆ : ಕಾಮವೆಂಬ ಅಗ್ನಿ, ಕ್ರೋಧವೆಂಬ ಕಾಷ*, ಲೋಭವೆಂಬ ಗಾಳಿ ಪುಟಮಾಡಿ, ಮೋಹವೆಂಬರಣ್ಯ, ಮದವೆಂಬ ಕುಳ್ಳು, ಮತ್ಸರವೆಂಬ ಗಿರಿಗೆ ಬೆಂಕಿ ಹತ್ತಿ , ಸುಟ್ಟು ಸುಟ್ಟು ಬೆಂದರು ಹಲಬರು, ನೊಂದರು ಹಲಬರು. ಕಾಮವ ಕಳದು ನಿಃಕಾಮಿಯಾಗಿ, ಕ್ರೋಧವ ಕಳದು ನಿಃಕ್ರೋಧಿಯಾಗಿ, ಲೋಭವ ಕಳದು ನಿರ್ಲೋಭಿಯಾಗಿ, ಮೋಹವ ಕಳದು ನಿರ್ಮೋಹಿಯಾಗಿ, ಮದವ ಕಳದು ನಿರ್ಮದವಾಗಿ, ಮತ್ಸರವ ಕಳದು ನಿರ್ಮತ್ಸರರಾಗಿಪ್ಪ ಚೆನ್ನಬಸವೇಶ್ವರದೇವರು ಪ್ರಭುರಾಯ ಮುಗ್ಧಸಂಗಯ್ಯ ಘಟ್ಟಿವಾಳಯ್ಯ ಮರುಳಶಂಕರದೇವರು ಮುಖ್ಯವಾದ ಏಳ್ನೂರಯೆಪ್ಪತ್ತು ಅಮರಗಣಂಗಳ ಪಾದಕ್ಕೆ ನಮೋ ನಮೋ ಎಂಬೆನಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮನಬೀಸರವೆಂಬ ಗಾಳಿ ಬೀಸಿತ್ತು, ವಿದ್ಯಾಮುಖದ ಜ್ಯೋತಿ ನಂದಿತ್ತು. ಕತ್ತಲೆಯಲ್ಲಿ ಗತಿಯ ಕಾಣದೆ ದುಮ್ಮಾನ ನೆಲೆಗೊಂಡಿತ್ತು. ಸುಮ್ಮಾನ ಹೋಯಿತ್ತು. ಸಕಳಕಲಾವಿದ್ಯಾಗುರುವಲ್ಲಾ! ಮತಿತಾಳವೆಂಬ ಗುಹ್ಯತಾಗಿ, ಸುತಾಳವೆಂಬ ಶರಣಸಂಗದಲ್ಲಿ ಬಿದ್ದು, ಗುರುವಿಂಗೆ ಪ್ರಸಾದವಾದುದು, ಶಿಷ್ಯಂಗೆ ಓಗರವಾದುದು ನೋಡಾ! ¯õ್ಞಕಿಕಕಾಯಕ ನರಕ (¯õ್ಞಕಿಕ ನಾಯಕನರಕ?) ಅರ್ಪಿತಮುಖವನರಿಯದೆ, ಅನರ್ಪಿತಮುಖವಾಯಿತ್ತು ಗುಹೇಶ್ವರ
--------------
ಅಲ್ಲಮಪ್ರಭುದೇವರು
ಅತತತತತ ಮಹೀಂದ್ರಜಾಲಿ ಜ್ಯಾಜ್ಯಾಜ್ಯಾಜ್ಯಾಜ್ಯಾ ಮಲನಾಡಚವಡಿ, ಛೀ ಕುರುಬರ ಪಿಡ್ಡಿ, ಛೀ ಹಲಗಿಸಕಿ ನಾಗಿ, ಗುಲು ಗುಲು ಗುಲು ಗುಲುಪುತ್ತ ಬಾ ಮತ್ತ ಬಾ ಅಹಾ ಉಪ್ ಮಂತ್ರ ಗಾಳಿ ಚೀಲ್ದಾಗಿಂದ ಬಾ ಕಿವಿಯೊಳಗೆ ಹೋಗು ಬಾಯೊಳಗಿಂದ ಬಾ ಮೂಗಿನೊಳಗ ಹೋಗು ಕಣ್ಣೊಳಗಿಂದ ಬಾ ತಲೆಯೊಳಗೆ ಹೋಗು ಬೆನ್ನೊಳಗಿಂದ ಬಾ ಮೈಯೊಳಗೆ ಹೋಗು ಅಂಗಾಲೊಳಗಿಂದ ಬಾ ಅಂಗೈಯೊಳಗೆ ಹೋಗು ಗಾಳಿಗೆ ಗಾಳಿ ಧೂಳಿಗೆ ಧೂಳಿ ಬೈಲಿಗೆ ಬೈಲು ನಿರ್ಬೈಲು ಮಹಾಂತಯೋಗಿ ಗಾಳಿಪೂಜಿ ಸುಡುಗಾಡಲಿಂದ ಬಂದೆವಯ್ಯಾ ಶಂಕರಪ್ರಿಯ ಚನ್ನಕದಂಬಲಿಂಗ ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ನೊಣ ಲೋಕವ ನುಂಗಿ, ತ್ರಿಣಯನನ ಗುಂಗುರು ಕೊಂದು, ಗುಂಗುರು ಗಾಳಿಯಲ್ಲಿ ನೊಂದಿತ್ತು. ಗಾಳಿ ಘಟ ಹೇಳದೆ ಹೋಯಿತ್ತು, ಏಣಾಂಕಧರ ಸೋಮೇಶ್ವರಲಿಂಗವನರಿವುದಕ್ಕೆ.
--------------
ಬಿಬ್ಬಿ ಬಾಚಯ್ಯ
ಗಾಳಿ ಬೀಸುವನ್ನಕ್ಕರ ಮರನುಲಿಯದೆ ಮಾಣದಯ್ಯ. ಕಾಯುವುಳ್ಳನ್ನಕ್ಕರ ವಿಕಾರ ಸಾಯದು ನೋಡ. ಭಾವವುಳ್ಳನ್ನಕ್ಕರ ಭ್ರಮೆ ಅಡಗದಯ್ಯ. ಮನವುಳ್ಳನ್ನಕ್ಕರ ಮಾಯೆ ಮಾಣದಯ್ಯ. ಮಾಯವುಳ್ಳನ್ನಕ್ಕರ ಸಾವು ಮಾಣ್ಬುದೆ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಖಂಡವ ಮೆದ್ದು ಅರಗಿಸಿ ಹೆಂಡವ ಕುಡಿದು ಉನ್ಮತ್ತವಿಲ್ಲದೆ ಮಿಕ್ಕಾದ ಕಿರುಹಕ್ಕಿಯ ಕೊಂದು ಕುಕ್ಕೆಯೊಳಗಿಟ್ಟು ಹೆಬ್ಬದ್ದ ಹಿಡಿದು ಕಬ್ಬದ್ದ ಬಾಣಸವ ಮಾಡಿ ಹುಲಿಯ ಹಲ್ಲ ಕಿತ್ತು, ಎರಳೆಯ ಕಾಲ ಮುರಿದು ಲಂಘಿಸುವ ಸಿಂಹದ ಅಂಗವ ಸೀಳಿ ಉನ್ಮತ್ತದಿಂದ ಬಂದಪ್ಪ ಗಜವ ಕಂಗಳು ನುಂಗಿ ಮೊಲ ನಾಯ ಕಚ್ಚಿ ನರಿ ಬಲೆಯ ನುಂಗಿ ಸರ್ಪನ ಗಾಳಿ ತಾಗಿ ಗರುಡ ಸತ್ತು ಇಂತಿವು ಹಗೆ ಕೆಳೆಯಾಗಿರಬಲ್ಲಡೆ ಭಕ್ತ. ಇಂತಹ ಭಕ್ತ ಕೆಳೆಯಾಗಿರಬಲ್ಲಡೆ ಮಾಹೇಶ್ವರ. ಇಂತಹ ಮಾಹೇಶ್ವರ ಕೆಳೆಯಾಗಿರಬಲ್ಲಡೆ ಪ್ರಸಾದಿ. ಇಂತಹ ಪ್ರಸಾದಿ ಕೆಳೆಯಾಗಿರಬಲ್ಲಡೆ ಪ್ರಾಣಲಿಂಗಿ. ಇಂತಹ ಪ್ರಾಣಲಿಂಗಿ ಕೆಳೆಯಾಗಿರಬಲ್ಲಡೆ ಶರಣ. ಇಂತಹ ಶರಣ ಕೆಳೆಯಾಗಿರಬಲ್ಲಡೆ ಐಕ್ಯ. ಇಂತಹ ಐಕ್ಯಾನುಭಾವ ಕೆಳೆಯಾಗಿರ್ದಲ್ಲಿ ಮಹದೊಳಗಾಯಿತ್ತು. ಆ ಮಹದೊಳಗು ಸಯವಾದಲ್ಲಿ ಸರ್ವಮಯವೆಂಬುದು ಇಹಪರ ನಾಸ್ತಿ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಕ್ಕೆ ಇದಿರೆಡೆಯಿಲ್ಲ.
--------------
ಪ್ರಸಾದಿ ಭೋಗಣ್ಣ
ಕಾಯವೆಂಬ ಭೂಮಿಯ ಮೇಲೆ ಆರಂಬವ ಮಾಡಬಂದ ಗೌಡನ ಪರ್ಯಾಯವ ನೋಡಿರಣ್ಣ ? ಶಿವಜ್ಞಾನವೆಂಬ ಕೊಡಲಿಗೆ ನಿಶ್ಚಿತವೆಂಬ ಕಾವನಿಕ್ಕಿ ಅಷ್ಟದುಡಿಯೆಂಬ ಅಡವಿಯನೆ ಕಡಿದು ಕುಟಿಲ ಕುಹಕವೆಂಬ ಕಿಚ್ಚ ಹತ್ತಿಸಿ ಸುಟ್ಟು ಲೋಭತ್ವವೆಂಬ ಬಟ್ಟೆಯನೆ ಕಟ್ಟಿ ಶಿವಭಕ್ತರ ನುಡಿಯೆಂಬ ಹಿಂಗಲ್ಲನಿಕ್ಕಿ ವೈರಾಗ್ಯವೆಂಬ ಹಡಗಂ ಹತ್ತಿಸಿ ದೃಷ್ಟ ಮುಟ್ಟಿಯೆಂಬ ನೇಗಿಲಿಗೆ ಅವಧಾನವೆಂಬ ಮೀಣಿಯನಳವಡಿಸಿ ಜೀವಭಾವವೆಂಬ ಎರಡೆತ್ತುಗಳ ಹೂಡಿ ಅರುಹೆಂಬ ಹಗ್ಗವನೆ ಹಿಡಿದು ಎಚ್ಚರಿಕೆಯೆಂಬ ಬಾರುಕೋಲ ತಳೆದುಕೊಂಡು ಒತ್ತಿನೂಕಿ ಭೂಮಿಯ ಹಸನ ಮಾಡಬಂದ ಗೌಡನ ಪರ್ಯಾಯವ ನೋಡಿರಣ್ಣ ಅನೀತಿಯೆಂಬ ಗಾಳಿ ಬೀಸಿ ವಿಷಯವೆಂಬ ಮಳೆ ಸುರಿದು ಹದನಾರದ ಮುಂಚೆ ಅರುಹೆಂಬ ಬೀಜವನೆ ಬಿತ್ತಿ ಪ್ರಸಾದವೆಂಬ ಗೊಬ್ಬರವನೆ ತಳೆದು ಆಚಾರವೆಂಬ ಸಸಿಹುಟ್ಟಿ ಪ್ರಪಂಚೆಂಬ ಹಕ್ಕಿ ಬಂದು ಹಕ್ಕಲ ಮಾಡದ ಮುನ್ನ ನೆನಹೆಂಬ ಕವಣೆಯನೆ ತೆಕ್ಕೊಂಡು ನಾಲ್ಕು ದಿಕ್ಕಿನಲ್ಲಿ ನಿಂತು ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯಯೆಂದು ಅರ್ಭಟಿಸುತಿರ್ದನಯ್ಯ ಇಂತು ಈ ಬೆಳಸು ಸಾಧ್ಯವಾಯಿತ್ತು. ಉಳಿದವರಿಗಸಾಧ್ಯಕಾಣಾ, ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
-->