ಭಕ್ತಿಸೂತ್ರ ಬಸವಣ್ಣಂಗೆ, ಭಾವಸೂತ್ರ ಚೆನ್ನಬಸವಣ್ಣಂಗೆ,
ಜ್ಞಾನಸೂತ್ರ ಪ್ರಭುದೇವಂಗೆ.
ಇಂತೀ ಸ್ಥೂಲತನು ಬಸವಣ್ಣಂಗೆ, ಸೂಕ್ಷ್ಮತನು ಚೆನ್ನಬಸವಣ್ಣಂಗೆ,
ಕಾರಣತನು ಪ್ರಭುದೇವಂಗೆ.
ಕಾಯ ಬಸವಣ್ಣನಾಗಿ, ಜೀವ ಚೆನ್ನಬಸವಣ್ಣನಾಗಿ,
ಉಭಯದರಿವು ಪ್ರಭುದೇವರಾಗಿ.
ಇಂತೀ ತ್ರಿವಿಧ ಪ್ರಸಾದ ಎನಗೆ ನಿಂದು,
ಎನ್ನ ಜನ್ಮವಾಸನೆ ಬಿಡದಿದೆ ನೋಡಾ.
ಈ ವಾಸನೆ ನಿಃಕಳಂಕ ಮಲ್ಲಿಕಾರ್ಜುನ ನಷ್ಟವಾಗಿಯಲ್ಲದೆ,
ಎನ್ನ ಭಾವ ನಷ್ಟವಿಲ್ಲ.