ವೃಕ್ಷಕ್ಕೆ ಭೂಮಿ ಮುಖವೋ ? ಭೂಮಿಗೆ ವೃಕ್ಷ ಮುಖವೋ ?
ಶರಣಂಗೆ ಅಂಗ ಮುಖವೋ? ಲಿಂಗಕ್ಕೆ ಶರಣ ಮುಖವೋ ?
ಈ ಭೇದವ ಬಲ್ಲರೆ ಹೇಳಿರಿ.
ವೃಕ್ಷಕ್ಕೆ ನೀರು ಎರೆದರೆ ಭೂಮಿಯಲ್ಲಿ ಫಲವಹುದು,
ಭೂಮಿಯಲ್ಲಿ ನೀರೆರೆದರೆ ವೃಕ್ಷಕ್ಕೆ ಫಲವಹುದು.
ಶರಣನ ಮುಖದಲ್ಲಿ ಲಿಂಗ ತೃಪ್ತಿಯಹುದು,
ಲಿಂಗದ ಮುಖದಲ್ಲಿ ಶರಣನ ತೃಪ್ತಿಯಹುದು.
ಆ ಲಿಂಗಮುಖ ಶರಣನೆಂದು ಅರಿಯದ ಭಂಗಿತರಿಗೆ
ಶಿವಲಿಂಗ ಮುನ್ನವಿಲ್ಲವೆಂದಾತ ನಿಮ್ಮ ಶರಣ,
ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.