ಅರಿದೆ ಮರೆದೆನೆಂಬನ್ನಕ್ಕ ಭಕ್ತಿವಿಶ್ವಾಸಭಾವಿಯಲ್ಲ. ಇನ್ನರಿಯಲಿಲ್ಲ, ಮುಂದೆ ಒಂದು ಕುರುಹಿಲ್ಲ ಎಂಬನ್ನಕ್ಕ ಪರವಸ್ತುಭಾವಿಯಲ್ಲ. ನಾನೆಂಬನ್ನಕ್ಕ ತಾನಿದ್ದು ಮುಂದೆ ಏನೂ ಇಲ್ಲವೆಂಬುದು ನಿಜವೆ ? ತಾನೆಂಬುದನಳಿದು ಮುಂದೆ ಏನೂ ಇಲ್ಲಾಯೆಂಬುದು ನಿಜವಾಗಿ ಅದು ನಿರ್ಭಾವವಾದುದು ಸಂಗನಬಸವಣ್ಣನ ಐಕ್ಯ. ಬ್ರಹ್ಮೇಶ್ವರಲಿಂಗದ ಕುರುಹು ನಾಮನಷ್ಟ.