ಬೀಜ ಹುಟ್ಟುವ ತತ್ಕಾಲವೆಂತೆಂದಡೆ:
ಹೊಯ್ದಿದ್ದ ಹೊಯಿಗಿಲದಲ್ಲಿಯೆ ಬೇರು ಬಿಟ್ಟು, ಸಸಿ ಬೆಳೆದು
ಎಲೆ ನೀಡಿ ಫಲ ಬೆಳೆದುದುಂಟೆ ?
ಸಕಲ ಸ್ಥಲ ಕುಳವನರಿತ ಬ್ರಹ್ಮಿ ತಾನೆಂದಡೆ
ಅರ್ಚನೆ ಅರತು, ಪೂಜೆ ನಿಂದು, ಸತ್ಯ ಕೆಟ್ಟು
ಭಕ್ತಿ ಹಾರಿದಲ್ಲಿ, ಆತ ನಿಜತತ್ವಜ್ಞನಪ್ಪನೆ ?
ಇದು ವಿಶ್ವಾಸದ ಭಿತ್ತಿ, ವಿರಕ್ತಿಯ ನಿಳಯ.
ಸಂಗನಬಸವಣ್ಣ ಭಕ್ತಿ ವಿರಕ್ತಿಗಿಕ್ಕಿದ ಕಟ್ಟು.
ಬ್ರಹ್ಮೇಶ್ವರಲಿಂಗವ ಮುಟ್ಟುವ ಮುಟ್ಟು.