ವೀರಶೈವಾಚಾರಗುರುಮಾರ್ಗವಿಡಿದು ಬಂದ ಭಕ್ತಗಣಾಧೀಶ್ವರರು
ಕ್ರಿಯಾಜಂಗಮಲಿಂಗದ ಪಾದಪೂಜೆಯ ಮಾಡುವ ವಿವರವದೆಂತೆಂದೊಡೆ :
ಜಂಗಮಲಿಂಗಮೂರ್ತಿಗಳು ತಮ್ಮ ಗೃಹಕ್ಕೆ ಬಂದು,
ಶಿವಲಿಂಗಾರ್ಪಣಕ್ಕೆ ಭಿಕ್ಷಾಯೆಂದಾಕ್ಷಣವೆ,
ಶರಣುಶರಣಾರ್ಥಿ, ಮಹಾಲಿಂಗಾರ್ಪಣಕ್ಕೆ ನಮಸ್ಕಾರವೆಂದು ಅಭಿವಂದಿಸಿ,
ಆಸನವ ರಚಿಸಿದ ಮೇಲೆ ಮೂರ್ತಿಗೊಂಡ ತದನಂತರದೊಳು
ಅವರ ಜಂಘೆಯಾಗೊಪ್ಪುವ ವೃತ್ತಸ್ಥಾನಪರಿಯಂತರವು,
ಬಹುಗುಣದಲ್ಲಿ ತೊಳೆದಂಥ ನಿರ್ಮಾಲ್ಯವ ಧೂಳೋದಕದಿಂದ
ಹೊಸದಾಗಿ ಕಟ್ಟಿದ ಆಲಯ ಬಾವಿ ಧನ ಧಾನ್ಯ ಕಾಯಿಪಲ್ಲೆ ಕಾಷ* ಮೊದಲಾದ
ಜನನಿಜಠರದಿಂದುದಯವಾದ ಶಿಶುವಿಗೆ,
ಲಿಂಗಾಂಗ ಮುಂತಾದ ಹೊಸ ಅರುವೆ ಆಭರಣ,
ದಗ್ಧದ್ರವ್ಯ ಕಡೆಯಾದವಕ್ಕೆ ಸಂಪ್ರೋಕ್ಷಿಸಿ, ಪವಿತ್ರವೆನಿಸಿ,
ಆಸೆ ಆಮಿಷ ರೋಷಾದಿಗಳಿಲ್ಲದಾಚರಿಸುವುದೆ
ನಿರವಯಪ್ರಭು ಮಹಾಂತನಾಚಾರ ಕಾಣಾ
ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.