ದೀಕ್ಷಿತನು ಯಜನಾರ್ಥಿಯಾಗಿ, ಭೂಶುದ್ಧಿಯಂ ಮಾಡಿ,
ಯೂಪಸ್ತಂಭವಂ ಪ್ರತಿಷೆ*ಯಂ ಮಾಡಿ, ಋತ್ವಿಜರಂ ಕೂಡಿ,
ಮಹಾಘೋರಾಟವಿಯಲ್ಲಿ ಕಳಪುಲ್ಲಂ ತಿಂದು ಕೊಳಕುನೀರಂ ಕುಡಿದು
ಅಧೋಮುಖಗಳಾಗಿ ಸಂಚರಿಸುವ ಪಶುಸಮೂಹಗಳೊಳೊಂದು
ಸಲಕ್ಷಣಮಾದ ಪಶುವಂ ಪಿಡಿದು,
ಯೂಪಸ್ತಂಭದಲ್ಲಿ ಹರಿಯದ ಹಗ್ಗದಲ್ಲಿ ಕಟ್ಟಿ,
ಅತಿಖಾತಮಪ್ಪ ಯಜ್ಞಕುಂಡವಂ ಚೆನ್ನಾಗಿ ಸಮೆದು,
ಒಣಗಿಯೊಣಗದ ಕಾಷ*ಂಗಳಿಂದಗ್ನಿಯ ಹೊತ್ತಿಸಿ,
ಅತಿಸುಗಂಧಮಾದ ಘೃತಮಂ ಮಂತ್ರಘೋಷದಿಂದಾಹುತಿಗೊಡುತ್ತಿರೆ,
ಅಗ್ನಿಯು ಪಟುವಾಗಿ, ನಿಜವಾಸನಾಧೂಪದಿಂ ಸಕಲದೇವತೆಗಳಂ ತೃಪ್ತಿಬಡಿಸಿ
ಋತ್ವಿಕ್ಕುಗಳನೊಳಕೊಂಡು ದೀಕ್ಷಿತನಂ ವಿೂರಿ,
ಪಾಶಮಂ ದಹಿಸಿ, ಕಂಭದಲ್ಲಿ ಬೆರೆದು ಪರಮಶಾಂತಿಯನೆಯ್ದಿದ ತಾನೇ
ಸೋಮಯಾಜಿಯಾಯಿತು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.