ಕಲ್ಲು ರತಿಯಿಂದ ರತ್ನವಾದಂತೆ,
ಉದಕ ಸಾರವರತು ಲವಣವಾದಂತೆ,
ವಾರಿ ವಾಯುವ ಸಂಗದಿಂದ ಬಲಿದಂತೆ,
ಪೂರ್ವವನಳಿದು ಪುನರ್ಜಾತನಾದ ಮತ್ತೆ,
ಎನ್ನವರೆಂದು ಬೆರಸಿದಲ್ಲಿ,
ಆ ಗುಣ ಆಚಾರಕ್ಕೆ ಹೊರಗಾಯಿತ್ತು.
ಮಾತೆ ಪಿತ ಸಹೋದರ ಬಂಧುಗಳೆಂದು
ಮನ ಕೂರ್ತು ಬೆರಸಿದಲ್ಲಿ,
ಆಚಾರಕ್ಕೆ ಭ್ರಷ್ಟ, ವಿಚಾರಕ್ಕೆ ದೂರ,
ಪರಮಾರ್ಥಕ್ಕೆ ಸಲ್ಲ.
ಇವನೆಲ್ಲವ ಕಳೆದುಳಿದು ನಿಂದಲ್ಲಿ,
ಮನಸಂದಿತ್ತು ಮಾರೇಶ್ವರಾ.