ಅಂಗವನಳಿವನ್ನಕ್ಕ ಶಿವಲಿಂಗಪೂಜೆಯ ಮಾಡಬೇಕು. ಆತ್ಮನ ಕ್ಷುಧೆಯುಳ್ಳನ್ನಕ್ಕ ಬಂದ ಪದಾರ್ಥವ ಲಿಂಗಾರ್ಪಿತ ಮಾಡಬೇಕು. ಇದು ಅರಿವಿನ ಭಿತ್ತಿ , ಜ್ಞಾನದ ಗೊತ್ತು, ಸರ್ವಮಯದ ಯುಕ್ತಿ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವನರಿವ ಶಕ್ತಿ.
ಅಂಗ ಲಿಂಗವ ಪೂಜಿಸಿ, ಪ್ರಾಣ ಜ್ಞಾನವ ಕಂಡು, ಅಂಗ ಲಿಂಗ ಹಿಂಗಿ, ಪ್ರಾಣಲಿಂಗವಾಗಿ. ಆ ಪ್ರಾಣ ಲಿಂಗದಲ್ಲಿ ನಿಂದು, ಜ್ಞಾನಲಿಂಗವಾಯಿತ್ತು. ಲಿಂಗಭಾವವಳಿದು ಮಹದೊಡಗೂಡಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ
ಅರ್ಚನೆ ಪೂಜೆಯ ಕುರಿತು ಮಾಡಿದಲ್ಲಿ, ಚತುರ್ವಿಧಫಲಪದಂಗಳೆಂಬವು ತನ್ನ ಹಿತ್ತಿಲ ಬೆಳೆ. ಇಷ್ಟಾರ್ಥ ಮೋಕ್ಷ್ಯಾರ್ಥ ಕಾಮ್ಯಾರ್ಥವೆಂಬಿವು, ತನ್ನ ಬಾಗಿಲ ನೆಟ್ಟ ಸ್ಥಾಣು. ಇವು ಹೊರಗಾಗಿ ಮೀರಿ ಕಂಡ ತೆರ, ಉರಿ ಕೊಂಡ ಕರ್ಪುರದಂತೆ, ಇಂತೀ ಉಭಯ ನಿಶ್ಚಯ ಪೂಜೆ. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಎರವಿಲ್ಲದ ಭಾವ.