ಹುಲ್ಲಾದಡೂ ತಳ್ಳಿ ಹೋಹ ಜಲವೆ ತಡೆವುದು.
ಹುಳ್ಳಿಯಾದಡೂ ಪ್ರಸ್ತಾವಕ್ಕೊದಗುವದು.
ಎನ್ನಲ್ಲಿದ್ದ ಮಾತು ಭಕ್ತಿಯುಳ್ಳವರಿಗೆಲ್ಲಕ್ಕೂ ಬೇಕು.
ಎನ್ನೊಡೆಯ ಸಂಗನ ಬಸವಣ್ಣ ಪಣ್ಣೆಯದಂದವನಿಕ್ಕಿ ಕೊಟ್ಟ
ಆ ದಂದುಗದಲ್ಲಿದ್ದೇನೆ,
ಆ ಮಾತಿಂಗೆ ದಂದಾಣಾ ದತ್ತಣಾ ಎನ್ನದೆ.
ಇದರಂದವ ತಪ್ಪದಾಡಿ ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಪಣ್ಣೆಯದ ಚಿಣ್ಣ ಹೇಳಿದ ಮಾತ ಕೇಳಿರಣ್ಣಾ.