ಅಥವಾ
(4) (6) (8) (1) (0) (0) (0) (0) (0) (0) (0) (0) (1) (0) ಅಂ (1) ಅಃ (1) (4) (0) (4) (0) (0) (0) (0) (1) (0) (0) (0) (0) (0) (0) (0) (1) (0) (1) (0) (2) (1) (1) (2) (2) (3) (0) (0) (0) (1) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುಲಿಂಗಜಂಗಮವೆಂದು ನುಡಿವ ಬಹುವಾಕ್ಯರು ನೀವು ಕೇಳಿರೊ. ಗುರುವಾವುದು? ಲಿಂಗವಾವುದು? ಜಂಗಮವಾವುದು? ಲಿಂಗವೆಂದವರ ಕರಸ್ಥಲದಲ್ಲಿ ಜಂಗಮವೊಂದೆಂದರಿಯದಿರದೆ ಚರಿಸಿದ ಗುರುಸ್ಥಲದ ಹೊಲಬನರಿಯದೆ ಗುರುಭಕ್ತರೆನ್ನಿಸುವ ಗುರುದ್ರೋಹಿಗಳ ಮಾತ ಕೇಳಲಾಗದಯ್ಯ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಗುಹೇಶ್ವರ ಎಂಬ ಅಕ್ಷರದ ಭೇದವು : ವರಕಂಬವೆ ಕಾಲು, ತೊಡಿಯೇ ಬೋದಿಗೆ, ಸಾರಣ ಚರ್ಮ, ಕರಯೆರಡು ಮದನಧ್ವಜಯೆರಡು, ಸ್ತುತಿಬಾಯಿ ಬಾಗಿಲು, ಎರಡು ಶ್ರೋತ್ರವೇ ಬೆಳಕಂಡಿಯು, ಮೂಗೇ ಜಾಳಿಂದ್ರ, ಆಲಿಗಳೆ ಸೋಪಾನ, ಶಿರವೇ ಕಲಶ, ಭಸಿತವೆ ಪತಾಕೆ | ಇಂತೀ ಪಂಚಗುಹೇಶ್ವರನೆಂಬ ದೇಗುಲ. ಇನ್ನು ಅದಕ್ಕೆ ಸ್ವರವಾವುದೆಂದಡೆ : ಗುಹೇಶ್ವರನೆ ಸ್ವರ, ಆ ದೇಗುಲಕ್ಕೆ ಲಿಂಗವೇ ಪೀಠ. ಪಂಚವಿಷಯವೆಂಬ ಪೂಜೆ, ಜ್ಞಾನವೆಂಬುದ ಹಿಡಿದು ಅಜ್ಞಾನವ ದೂಡಿ, ತಾನೆ ತನ್ನೊಳು ತಿಳಿದುದೆ ಭಂಡಾರ. ಅದಕ್ಕೆ ಮನವೆ ಕಿವಿ, ನಿರ್ಮನವೆಂಬ ಕದವ ತೆರೆದು ಸುಖವೆಂಬುದೆ ನೈವೇದ್ಯ, ಜಿಹ್ವೆಯೇ ಪೂಜಾರಿ, ನಿತ್ಯವೇ ಪ್ರಸಾದ, ಮನದಿಚ್ಛೆಗೆ ಪೊಸಪಂಚಾಕ್ಷರಿಯ ಗಸಣೆ, ಷಡಾಕ್ಷರವೆ ಶ್ರೀಗಂಧ, ಜ್ವಾಲೆಯೇ ಧೂಪ, ಸ್ಥಳವೇ ಹರಿವಾಣ, ಬೋನವು ತಾನೆ, ಪೂಜಿಸುವಾತನು ತಾನೆ, ಪುಜೆಗೊಂಬಾತನು ತಾನೆ. ಇಂತೀ ಪರಮಾನಂದವೆಂಬ ಸಂಗಗಳ ಕೂಡಲಂದೆ ಚಿತ್ಸೂರ್ಯರ ಕೋಟಿಪ್ರಕಾಶವಾಗಿ ತೋರುತ್ತಿಹ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಗುರುಲಿಂಗ ಉಪದೇಶ ಲಿಂಗಧಾರಣವೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳು ನೀವು ಕೇಳಿರೊ. ಸರ್ವಾಂಗಭೇದವನು ಕಮಲಪ್ರಕಾಶವನರಿದು ನುಡಿವಿರಿ. ಪದ್ಮಸ್ಥಾನದಲ್ಲಿ ಕಮಲಕ್ಕೆ ನಾಲ್ಕು ಎಸಳು, ಅದಕ್ಕೆ ಶ್ವೇತ ಕಪೋತ ಹರಿತ ಮಾಂಜಿಷ್ಟ ನೀಲವರ್ಣವೆಂಬರಿ. ಈ ನಾಲ್ಕರ ಭೇದವ ಬಲ್ಲರೆ ಭಕ್ತನೆಂದೆನಿಸಬಹುದು. ಈ ನಾಲ್ಕು ಎಸಳನು ಒಂದುಮಾಡಿ ಅದರೊಳು ಕೂಡಬಲ್ಲರೆ ಮಾಹೇಶ್ವರನೆಂದೆನಿಸಬಹುದು. ಪೃಥ್ವಿ ಅಪ್ಪುವಿನ ಗುಣಂಗಳನಳಿದು ದಶಕಮಲದಲ್ಲಿ ಬೆರೆಸಬಲ್ಲರೆ ಪ್ರಸಾದಿಯೆಂದೆನಿಸಬಹುದು. ಈ ತ್ರಿವಿಧ ಗುಣಂಗಳ ಶಕ್ತಿಯ ನಿಲ್ಲಿಸಿ ಅಂತರಂಗದ ಹೃದಯಕಮಲದಿ ನಿಂತಿಹ ರಾಜನ ಸಂದರುಶನವ ಮಾಡಿ, ಮನ ಬುದ್ಧಿ ವಿತ್ತ ಅಹಂಕಾರವೆಂಬ ಚತುರ್ವಿಧ ಪ್ರಧಾನಿಗಳ ಬುದ್ಧಿಯ ಮೀರಿ ಹದಿನಾರು ಎಸಳಲ್ಲಿ ನಿಂದು, ಆಕಾಶ ತತ್ವವ ನಿರೀಕ್ಷಿಸಿ ಪಂಚತತ್ವದ ಪರಿಯ ನೋಡುತ್ತ ಬಂದು, ಆಮುಂದಿರ್ದ ಮುಪ್ಪುರದ ಹೆಬ್ಬಾಗಿಲ ಪೊಕ್ಕು ಶ್ರೀ ಗುರುವಿನ ಶ್ರೀಪಾದವೆಂಬ ಉಭಯಕಮಲವ ನಿರೀಕ್ಷಣವ ಮಾಡಿ, ಶ್ರೀಗುರುವಿನ ಶ್ರೀಪಾದಪದ್ಮಕಾರುಣ್ಯ ಜ್ಞಾನವ ಪಡದು, ಮುಂದೆ ನೋಡಲಾಗಿ ಸಹಸ್ರದಳದ ಕಮಲವ ಕಂಡೆನಯ್ಯ. ಆ ಕಮಲದ ಅಗ್ರದ ತುದಿಯಲ್ಲಿ ಇರುವ ಲಿಂಗವ ಕಂಡು ತನ್ನ ಸಂಬಂಧವಾಗಬೇಕೆಂದು ಮೇಲಕ್ಕೆ ನೋಡಲು ಏಕದಳದ ಪದ್ಮವ ಕಂಡೆನಯ್ಯ. ಆ ಪದ್ಮ ಸಿಂಹಾಸನದ ಮೇಲೆ ನಿರಂಜನನೆಂಬ ಜಂಗಮವ ಕಂಡೆ. ಆ ಜಂಗಮದ ಚರಣಾಂಬುಜಕ್ಕೆ ಎರಗಿದ ಕಾರಣ ಆ ಚಿತ್ಕಳೆಯೆಂಬ ಲಿಂಗ ಎನ್ನ ಸಂಬಂಧವಾಯಿತ್ತಲ್ಲಯ್ಯ. ಇಂತೆಸವಂಗಭೇದವನರಿಯದೆ ಉಪದೇಶವೆಂದು ನುಡಿವ ನರಗುರಿಗಳ ನೋಡಿ ನಗುವ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಗುರುಲಿಂಗಜಂಗಮದ ತ್ರಿವಿಧಭಕ್ತನೆನಿಸಿಕೊಂಬ ಅಣ್ಣಗಳು ನೀವು ಕೇಳಿರೋ. ಸ್ಥೂಲ ಸೂಕ್ಷ್ಮ ಕಾರಣವೆಂಬ ತ್ರಿವಿಧವ ತಿಳಿಯಬಲ್ಲರೆ ತ್ರಿವಿಧಭಕ್ತನೆಂದೆಸಬಹುದು. ಸ್ಥೂಲ ಸೂಕ್ಷ್ಮ ಕಾರಣದಲ್ಲಿ ದಶವಾಯುಗಳುಂಟು. ಅಲ್ಲಿದ್ದ ತ್ರಿವಿಧಪತಿಗಳಿಗೆ ನಾಲ್ಕು ಮುಖಗಳುಂಟು. ಉತ್ತರ ದಕ್ಷಿಣ ಪೂರ್ವ ಪಶ್ವಿಮವುಂಟು. ಪವನ ನಾಲ್ಕು ಮೂಲವುಂಟು. ಅಲ್ಲಿ ಸಕಲ ಆಚಾರ್ಯರ ಕ್ರೀಯ ಸಂಬಂಧವುಂಟುಶ್ರೀ ಇಂತೀ ಸ್ಥಳದಲ್ಲಿ ಸಂಬಂಧವನರಿಯಬಲ್ಲರೆ ಭಕ್ತನೆಂದೆಸಬಹುದು. ನಿಷೆ* ನಿಜ ಸತ್ಯ ಸದಾಚಾರ ಸದ್ಭಾವ ಜೀವನವಿದ್ದ ಬಿಡಾರವ ನೋಡಿ : ಅಲ್ಲಿದ್ದ ಅಧಿಪತಿಗೆ ಮುಖವುಂಟು. ಸಕಲ ವೈಪತಿಗಳ ಮರದು ಜಂಗಮಲಿಂಗವ ನಿರೀಕ್ಷಣವ ಮಾಡಬಲ್ಲರೆ ಸೂಕ್ಷ್ಮ ಶರಣನೆಂದೆನಿಸಬಹುದು. ಪುರದ ಜನರುಗಳೆಲ್ಲರನು ಮೈಮರೆಸಿ ನಿರ್ಭವಿಗಳಂ ಮಾಡಿ ಕೆಡಹಿ, ಚಿತ್ರಮಂಟಪದ ಬಾಗಿಲೊಳು ಹೊಕ್ಕು ಎರಡು ಮುಖದ ಅಧಿಪತಿಯ ನಿರೀಕ್ಷಣವಂ ಮಾಡಿ ಆದಿಪುರದ ಸುಖಂಗಳ ಹಿಂದುಗಳೆದು ಬಾರದ ಬಟ್ಟೆಯ ಮೆಟ್ಟಿ, ಸೋಸದ ಜಲವ ಕೊಳಬಲ್ಲಡೆ ಕಾರಣೈಕ್ಯನೆಂದೆನಿಸಬಹುದು. ಇದನರಿಯದೆ ಸ್ಥೂಲ ಸೂಕ್ಷ್ಮ ಕಾರಣವೆಂದು ನುಡಿವ ಮರವೀಯ ಮರಳುಗಳ ನೋಡಿ ನಗುತಿರ್ದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ