ಜ್ಯೋಗಿಯ ತರ್ಕದ ಪ್ರಸ್ತಾವದ ವಚನ :
ಬಿದಿರ ಲಳಿಗೆಯ ತಂದು, ಮೂಸೋರೆಯ ಕಾಯಂ ಕಟ್ಟಿ,
ಮೇಣದ ಮೆಟ್ಟನಿಕ್ಕಿ, ಕಭ್ಬಿಣದ ಸರಿಗಿಯ ತಂದು
ಕಟ್ಟಿಗೆಗೆ ಸುತ್ತಿ ಬಿಗಿದು ಶುದ್ಧೈಸಿ
ತ್ರಿವಿಧಗತಿಯಲ್ಲಿ ಹರಿತವಿಕ್ಕಿ, ರಾಜವೀಥಿಯೊಳು
ಆ ಕಿನ್ನರಿಯ ನುಡಿಸುತ್ತ ಬೆರೆದಾಡುವ ಜೋಗಿಯ ಕಂಡು
ಕೆಟ್ಟು ಹೋದರು ನೋಡಾ ಎಂದು ಬೆರಗಾದ
ಗೊಹೇಶ್ವರಪ್ರಿಯ ನಿರಾಳಲಿಂಗ.