ಕುಂಭದಲ್ಲಿ ಕುದಿವ ರೂಪು
ಮುಚ್ಚಳ ಅಂಗವ ತೆಗೆದಲ್ಲದೆ ಪಾತಕ ಸಂಗವನರಿಯಬಾರದು.
ಶರೀರದ ಕುಂಭದಲ್ಲಿ ಕುದಿವ ಜೀವನ ಇಂದ್ರಿಯಂಗಳ
ಹಿಂಗಿಯಲ್ಲದೆ
ಲಿಂಗಸಂಗಿಯಲ್ಲ, ಪ್ರಾಣಲಿಂಗಿಯಲ್ಲ,
ಆಸು ಭೇದವನರಿವುದಕ್ಕೆ ಸುಸಂಗಿಯಲ್ಲ,
ಇಂತಿವನರಿವುದಕ್ಕೆ ಪಶುಪತಿಯ ಶರಣರಲ್ಲಿ
ಒಸೆದು ಸಂಗವ ಮಾಡಿ ಅರಿ, ಅಸುವ ಅರಿ,
ತೂತ ತರಿ, ಸಂದೇಹದ ಭವವನರಿ,
ಘನಲಿಂಗದಲ್ಲಿ ಅರಿದೊರಗು, ಕರಿಗೊಂಡಿರು,
ಆತುರವೈರಿ ಮಾರೇಶ್ವರಾ.