ಭಕ್ತಂಗೆ ಪೃಥ್ವಿಯಂಗವಾಗಿ, ಮಾಹೇಶ್ವರಂಗೆ ಅಪ್ಪುವಂಗವಾಗಿ,
ಪ್ರಸಾದಿಗೆ ಅಗ್ನಿಯಂಗವಾಗಿ, ಪ್ರಾಣಲಿಂಗಿಗೆ ಪವನನಂಗವಾಗಿ,
ಶರಣಂಗೆ ಆಕಾಶವಂಗವಾಗಿ, ಐಕ್ಯಂಗೆ ಮಹಾಬೆಳಗೆ ಅಂಗವಾದಲ್ಲಿ,
ಪಂಚತತ್ವ ಕೂಡಿ ಒಂದರಲ್ಲಿ ಎಯ್ದುವಲ್ಲಿ, ಷಡುಸ್ಥಲ ರೂಪಾಯಿತ್ತು.
ಆರುವರ್ಣಕ್ಕೆ ಅಪ್ಪು ಅರಸಾದಂತೆ,
ಏಕಛತ್ರ ಮಹಾರಾಜ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.