ಆನರಿದ ಭಕ್ತಿತ್ರಯ ಎಂತುಟೆಂದಡೆ:
ತ್ರಿವಿಧ ಲಿಂಗ, ತ್ರಿವಿಧ ಗುರು, ತ್ರಿವಿಧ ಜಂಗಮ
ತ್ರಿವಿಧ ಪಾದೋದಕ, ತ್ರಿವಿಧ ಪ್ರಸಾದ, ತ್ರಿವಿಧ ಆತ್ಮ;
ತ್ರಿವಿಧ ಬುದ್ಧಿಯಲ್ಲಿ ತ್ರಿವಿಧ ಅರ್ಪಿತ ತ್ರಿವಿಧ ಅವಧಾನಂಗಳಿಂದ
ತ್ರಿವಿಧ ಭೇದೋಪಭೇದಗಳಲ್ಲಿ ಎಚ್ಚತ್ತು,
ತ್ರಿವಿಧ ಗುಣದಲ್ಲಿ ತ್ರಿವಿಧವನರಿತು,
ತ್ರಿವಿಧ ಗುಣದಲ್ಲಿ ತ್ರಿವಿಧವ ಮರೆದು,
ಅರಿದೆ ಮರೆದೆನೆಂಬ ಈ ಉಭಯ ನಷ್ಟವಾಗಿ ನಿಂದುದೆ
ಸಾತ್ವಿಕ ಭಕ್ತಿ, ಸಜ್ಜನ ಯುಕ್ತಿ,
ನಾರಾಯಣಪ್ರಿಯ ರಾಮನಾಥಾ.