ಭಕ್ತಂಗೆ ತನು ಮನ ಧನ
ಮಾಡುವ ಭಕ್ತಿಯಲ್ಲಿ, ಪೂಜಿಸುವ
ಶಿವಲಿಂಗದಲ್ಲಿ ಭೃತ್ಯಭಾವ,
ಗುರುವಿನಲ್ಲಿ ನಿಶ್ಚಯಭಾವ,
ಜಂಗಮದಲ್ಲಿ ಇವೆಲ್ಲವೂ ತನ್ನೊದಗಲ್ಲದೆ
ಇದಿರಿಗೆ ಭಿನ್ನಭಾವವಿಲ್ಲವಾಗಿ
ತಾ ಬಿತ್ತಿದ ಬೆಳೆಯ ತಾ ಸಲಿಸುವಂತೆ
ತನಗೆ ಲಾಭವಲ್ಲದೆ ಇದಿರಿಗೆ ಲಾಭವಿಲ್ಲ.
ಅರ್ಚಿಸಿ ಪೂಜಿಸಿ ಮಾಡಿ ನೀಡಿ ಮನ ಹೊಲ್ಲದಿರಬೇಕು.
ಇದು ಪ್ರಸಿದ್ಧ, ನಾರಾಯಣಪ್ರಿಯ ರಾಮನಾಥನಲ್ಲಿ
ಭಕ್ತನ ವಿಶ್ವಾಸಸ್ಥಲ.