ಮ ಪದದಿಂದ ಪ್ರಾರಂಭವಾಗುವ ವಚನಗಳು:
ಮರುಳನ ಊಟದಂತೆ, ಮಯೂರನ ನಿದ್ರೆಯಂತೆ,ಮಾರ್ತಾಂಡನ ಕಿರಣದಂತೆ, ಸ್ಫಟಿಕದ ಘಟದಂತೆ,ಕಟಕದಲ್ಲಿ ತೋರುವ ಅಸಿಯ ರಸೆಯಂತೆ,ಹೊದ್ದಿಯೂ ಹೊದ್ದದಂತೆ, ಇದ್ದೂ ಇಲ್ಲದಂತೆ,ಕಂಡೂ ಕಾಣದಂತೆ ಕೇಳಿಯೂ ಕೇಳದಂತೆ,ಇಪ್ಪ ಸುಳಿವ ಜಂಗಮಮೂರ್ತಿಯ ಕಂಡುನಮೋ ನಮೋ ಎಂಬೆನಾರಾಯಣಪ್ರಿಯ ರಾಮನಾಥಾ.
ಮತ್ರ್ಯಲೋಕವ ಪಾವನವ ಮಾಡುವೆನೆಂದುಸುಳಿವ ವಿರಕ್ತ ಜಂಗಮದಿರವು ಹೇಗಿರಬೇಕೆಂದಡೆ:ಕಲ್ಲಿನ ಮೇಲೆ ಹೊಯ್ದ ನೀರಿನಂತಿರಬೇಕು.ಪಥವಿಲ್ಲದ ಪಯಣವ ಹೋಗಿ ಗತಿಗೆಟ್ಟವನಂತಿರಬೇಕು.ಶ್ರುತಿಯಡಗಿದ ನಾದದ ಪರಿಯಂತಿರಬೇಕು.ಹುರಿದ ಬೀಜದ ಒಳಗಿನಂತಿರಬೇಕು.ಅದಾವಂಗೂ ಅಸಾಧ್ಯ ನೋಡಾ,ನಾರಾಯಣಪ್ರಿಯ ರಾಮನಾಥಾ.
ಮಾತಿನಲ್ಲಿ ಬಲ್ಲೋತ್ತರವಂತರೆಲ್ಲರೂ ಆತನನರಿದುದಿಲ್ಲಆತ ಏತರೊಳಗೂ ಸಿಕ್ಕದ ಅಜಾತ ಶಂಭು.ಆತನ ನೀತಿಯನರಿವುದಕ್ಕೆ ಅಸುರ ಕರ್ಮವ ಬಿಟ್ಟುವೇಷದಿಂದಾದ ಘಾತಕತನವನೊಲ್ಲದೆಭಕ್ತಿಯೆಂಬ ಆಶೆ ಕುರಿತು ಪೋಷಣವ ಹೊರೆಯದೆನಿಜ ತತ್ವದ ಆಶೆಯೇ ಸಾಕಾರವಾಗಿಅರಿದ ಆತ್ಮ ಕರಿಗೊಂಡಲ್ಲಿಹರಿಪ್ರಿಯ ಅಘೋರನಾಶನ ರಾಮನಾಥಾ.
ಮಣ್ಣ ಹೂಟೆ ಮಳೆಗೆ ಮುಚ್ಚುವುದಲ್ಲದೆಕಲ್ಲ ಹೂಟೆ ಮುಚ್ಚುವುದೆ?ಬಲ್ಲವನಲ್ಲಿ ಸೋಂಕು ಸುಳಿದಡೆಅಲ್ಲ ಅಹುದೆಂದು ತಿಳಿಯಬಲ್ಲವ ಎಲ್ಲವನು ಬಲ್ಲ,ಮಣ್ಣಿನ ಬಿರಯ ತೆರದಂತೆ.ಬಲ್ಲತನವಿಲ್ಲದವನ ಅನುಭಾವಕೂಟಕಲ್ಲಿನ ಹೋಟೆಯಂತೆ,ನಾರಾಯಣಪ್ರಿಯ ರಾಮನಾಥಾ.
ಮಾಧವನ ಮನೆಯ ಬಾಗಿಲಿನಲ್ಲಿಮಹಾಜನಂಗಳೆಲ್ಲರು ಕೂಡಿಹೋಮವನಿಕ್ಕಲಾಗಿ, ಎದ್ದಿತ್ತು ಉರಿ.ಮೂವರ ಮಸ್ತಕವ ಮುಟ್ಟಿ, ಆ ಹೋಮದ ಹೊಗೆ ತಾಗಿನಾಲ್ವರ ಕಣ್ಣು ಕೆಟ್ಟಿತ್ತು.ಆ ಹೋಮದ ದಿಕ್ಕಿನ ಕುಂಭ ಉರುಗಿಹೋಗಲಾಗಿತೊರೆ ಹರಿಯಿತ್ತು.ಕಾಲ ಕಡಹು ಆರಿಗೂ ಆಗದು.ಎಲ್ಲಾ ಠಾವಿನಲ್ಲಿ ಮಡುಮಯವಾಯಿತ್ತು.ಮಡುವಿನ ಮೊಸಳೆ ತಡಿಯಲ್ಲಿಆರನೂ ನಿಲಲೀಸದೆ ಕಡಿದು ನುಂಗಿಹುದಿನ್ನೇವೆ.ಮೊಸಳೆಯ ಹಿಡಿವರ ಕಾಣೆ,ಮಡುವ ಒಡೆವರ ಕಾಣೆ,ಹೋಮವ ಕೆಡಿಸುವರ ಕಾಣೆ,ಮಾಧವನ ಬಾಗಿಲಿನಲ್ಲಿ ನಿಂದು ಹೋದರು ಹೊಲಬುದಪ್ಪಿ,ನಾರಾಯಣಪ್ರಿಯ ರಾಮನಾಥಾ.