ಹರಿ ಬಂದ ವಿಧಿ, ಬ್ರಹ್ಮ ಬಂದ ಭವ, ಜಿನ ಬಂದ ಲಜ್ಜೆ. ದೃಷ್ಟವ ಕಂಡೇಕೆ ಮಿಥ್ಯದಿಂದ ಹೋರುವರು? ಆದಿ ವಸ್ತುವಿನ ಕಾಲುರಂಗು ವಿಷ್ಣು, ಅರೆರಂಗು ಬ್ರಹ್ಮ, ಸಂದೇಹ ಮಾತ್ರ ಜಿನ. ಇವರ ಭಂಗಿತವ ಹೇಳಲೇಕೆ? ಇವರ ಸಂದೇಹದ ಮಂದಮತಿಯ ದಿಂಡೆಯತನದಿಂದ ಹೋರುವ ಭಂಡರ ತಿಳಿ, ನಾರಾಯಣಪ್ರಿಯ ರಾಮನಾಥನಲ್ಲಿ ಗುಪ್ತಭಕ್ತರಪ್ಪ ಸತ್ಯವಂತರು.