ಅಂಡಜ ಪೃಥ್ವಿ ಉದಯಿಸದಂದು
ಭೂಮಂಡಲವಾಗದಂದು
ಪಿಂಡಜ ಬೀಜವ ನವಬ್ರಹ್ಮರು ತಾರದಂದು
ನವಖಂಡವ ರಚಿಸದಂದು
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ
ಪಂಚಭೂತಾದಿ [ಸ್ಥ]ಳವಿಡದಂದು
ಅನುಕರಿಸದಂದು, ರೂಹಿಸದಂದು
ಅತಿಮಥನ ಒಡ್ಡದಂದು
ಇಪ್ಪತ್ತೈದರ ಸ್ಥಳವ ಹೆಸರುಗೊಂಡು ಕರೆಯದಂದು
ಎನಗೆ ತನಗೆಂಬಿಚ್ಫೆ ತನ್ನ ತಲೆದೋರದಂದು
ಋಷಿಗಳಾಶ್ರಯ ಲೋಕದಲ್ಲಿ ಹರಿಯದಂದು
ಅಂದು ಬಸವನಿದ್ದ ಕಾಣಾ, ರೇಕಣ್ಣಪ್ರಿಯ ನಾಗಿನಾಥಾ.