ಅಥವಾ

ಒಟ್ಟು 18 ಕಡೆಗಳಲ್ಲಿ , 16 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರುಹು ತಲೆದೋರಿದಲ್ಲಿ ವಿಷ ಬೆಲ್ಲವು ಇಕ್ಷುರಸವಾಯಿತ್ತು. ಅರುಹು ತಲೆದೋರಿದಲ್ಲಿ ಅಂಬರ ಅವಯವಕ್ಕೆ ಹೊಂದಿತ್ತಯ್ಯಾ. ಅರುಹು ತಲೆದೋರಿದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನ ಕುರುಹು ನಾನೆಂದು ತಿಳಿಯಬಂದಿತ್ತಯ್ಯಾ ಯೋಗಿನಾಥಾ.
--------------
ಸಿದ್ಧರಾಮೇಶ್ವರ
ಕಾಡಿ ಬೇಡಿ ಉಂಬರೆಲ್ಲರು ಜಗದ ರೋಡಗವಂತರು. ಬೇಡದೆ ಕಾಡದೆ ಚಿತ್ತದಲ್ಲಿ ಆಸೆಯ ಕಲೆದೋರದೆ, ಹೊತ್ತ ಘಟಕ್ಕೆ ತುತ್ತು, ಶೀತಕ್ಕೆ ಅಂಬರ ನಿರ್ಜಾತನ ಒಲುಮೆ ಎಲ್ಲಿದ್ದರೂ ತಪ್ಪದೆಂದು ವಿಶ್ವಾಸವುಳ್ಳ ಶರಣಂಗೆ ಅವ ತೊಟ್ಟಿದ್ದುದು ಅದೇತರ ಕಾಯ? ದಗ್ಧಪಟ ನ್ಯಾಯ! ನಾರಾಯಣಪ್ರಿಯ ರಾಮನಾಥನಲ್ಲಿ ಕಳೆದುಳಿದಶರಣಂಗೆ!
--------------
ಗುಪ್ತ ಮಂಚಣ್ಣ
ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮಗಳು ಇಲ್ಲದಂದು, ಅತ್ತತ್ತಲೆ ನಿರಾಮಯಲಿಂಗವು ತಾನೇ ನೋಡಾ. ಆ ಲಿಂಗವು ಮನೋತೀತ, ವಾಚಾತೀತ, ಭಾವಾತೀತ, ಉಪಮಾತೀತ, ನಿಃಕಲಾತೀತ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿಪುರುಷನ ಮನವು ಮಹವನಕ್ಕಾಡೆ, ಮತ್ತಲ್ಲಿಯೆ ಆನಂದದಿಂದ ಆ ನಿರವಯವು ಬೆಸಲಾಯಿತ್ತು. ಧರೆ, ಅಂಬರ, ವಾರುಧಿ ಸಹಿತ, ಜಾರೆಯೆಂದಡೆ ಜಗದಲ್ಲಿ ನಿಂದವು Zõ್ಞರಾಸಿಲಕ್ಷ ಜೀವಜಾಲಗಳು. ಹೋರೆಯೆಂದಡೆ ಆಕಾಶದಲ್ಲಿ ನಿಂದರು ಗರುಡಗಂಧರ್ವಸಿದ್ಧ ವಿದ್ಯಾಧರದೇವರ್ಕಳು- ಮೊದಲಾದ ದೇವಸಮೂಹಂಗಳೆಲ್ಲ ಕೂಡಲಸಂಗಮದೇವಾ, ನೀವು ಮನದಲ್ಲಿ ಸಂಕಲ್ಪಿಸಿ ಆಗೆಂದಡೆ ಆದವು.
--------------
ಬಸವಣ್ಣ
ಅಂಬರ ಹರಿದಡೂ ಸಂಭವಿಸದಡೂ ಕಲೆ ಬಿಡದು. ಇದರಂದವ ತಿಳಿ. ಹೀಂಗಲ್ಲದೆ ಮನವ ಲಿಂಗದಲ್ಲಿ ನಿಕ್ಷೇಪಿಸಿ, ಬಂಧವ ಹಿಂಗಿ, ಸುಸಂಗನಾಗು. ಮಹಾಲಿಂಗಿಗಳ ಸಂಭಾಷಣದಲ್ಲಿ ನಿಂದು ನಿರ್ವಾಣನಾಗು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನಾದದ ಉತ್ಪತ್ತಿ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು, ಎಲೆ ಮರುಳೆ ! ಬಿಂದು ದಳದ ಉತ್ಪತ್ತಿ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು ಎಲೆ ಮರುಳೆ ! ಮಧ್ಯದಳದ ಉತ್ಪತ್ತಿ ಸ್ಥಿತಿ ಲಯವನು ಹೇಳಿದಡೇನು ಕೇಳಿದಡೇನು ಎಲೆ ಮರುಳೆ ! ಮುಗಿಲಗಲದ ಅಂಬರ ವಾಯು ಅಗ್ನಿಜಲ ಧರೆಯ ಹೊತ್ತುಕೊಂಡು ಅವ, ಹೇಳಿದಡೇನು ಕೇಳಿದಡೇನು ಎಲೆ ಮರುಳೆ ! ಗುಹೇಶ್ವರಲಿಂಗದ ಬಾರಿಗೊಳಗಾಗಿ, ಇವೆಲ್ಲವನುಂಟುಮಾಡಲರಿಯೆನಾಗಿ_ಎನಗಿಲ್ಲವೆನುತಿರ್ದೆನಯ್ಯಾ.
--------------
ಅಲ್ಲಮಪ್ರಭುದೇವರು
ಅಂಬರದಲಾಡುವ ಪಕ್ಷಿ ಕೊಂಬಿನ ಮೇಲಣ ಕೋಡಗವ ನುಂಗಿ ತುಂಬಿಯ ಒಡಲೊಳಡಗಿತ್ತು. ತುಂಬಿ ಅಂಬರದಲಡಗಿ, ಅಂಬರ ತುಂಬಿಯಲಡಗಿ ಎರಡು ಒಂದಾಗಿ ತುಂಬಿಯಂಬರವಿಲ್ಲದೆ ಹೋಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮಲ್ಲಿ.
--------------
ಸ್ವತಂತ್ರ ಸಿದ್ಧಲಿಂಗ
ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮರೆಂಬ ಅಷ್ಟತನುವಿನ ಮೇಲೆ ದೃಷ್ಟಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ತನ್ನ ಮರೆದು ಮುಂದೆ ನಿಶ್ಚೈಸಬಲ್ಲಾತನೆ ನಿಮ್ಮ ಪ್ರಮಥನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಬರ ಸಂಭ್ರಮದ ಬಾಗಿಲಲ್ಲಿ, ನಾನಾ ಚೆಂದದ ಗುಡಿತೋರಣ, ಮಕರಪತಾಕೆ, ಧನುಚ್ಛಾಯ, ಸರ ತೋರಿ ಎತ್ತುತ್ತದೆ. ಕಂಡು ಎವೆ ಹಳಚೂದಕ್ಕೆ ಮುನ್ನವೆ ಅಳಿವುತ್ತದೆ. ಅರಿ ಅರಿವುದಕ್ಕೆ, ಹಿಂಚುಮುಂಚು ಬಂಕೇಶ್ವರಲಿಂಗವ.
--------------
ಸುಂಕದ ಬಂಕಣ್ಣ
ಇನ್ನು ಲಿಂಗಗರ್ಭದಲ್ಲಿ ಅನೇಕ ಕೋಟಿ ತತ್ವಂಗಳು, ಅನೇಕ ಕೋಟಿ ಸದಾಶಿವರು, ಅನೇಕ ಕೋಟಿ ಈಶ್ವರರು ಅಡಗಿಹರು ನೋಡಾ. ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಮಹೇಶ್ವರರು, ಅನೇಕ ಕೋಟಿ ರುದ್ರರು, ಅನೇಕ ಕೋಟಿ ವಿಷ್ಣಾ ್ವದಿಗಳಡಗಿಹರು ನೋಡಾ. ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಬ್ರಹ್ಮರು, ಅನೇಕ ಕೋಟಿ ಚಂದ್ರಾದಿತ್ಯರು, ಅನೇಕ ಕೋಟಿ ಋಷಿಗಳಡಗಿಹರು ನೋಡಾ. ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಇಂದ್ರರು, ಅನೇಕ ಕೋಟಿ ದೇವರ್ಕಳು, ಅನೇಕ ಕೋಟಿ ಬ್ರಹ್ಮಾಂಡಂಗಳಡಗಿ ಆದಿಮಧ್ಯಾವಸಾನಗಳಿಲ್ಲದೆ ಅಖಂಡ ಪರಿಪೂರ್ಣ ಗೋಳಕಾಕಾರ ಅಪ್ರಮಾಣ ಅಗೋಚರ ಅಪ್ರಮೇಯ ಅವ್ಯಕ್ತ ಅನಂತತೇಜ ಅತ್ಯಂತಪ್ರಚಯ ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶ ಅನಂತಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹರು ನೋಡಾ. ಇದಕ್ಕೆ ಶಿವಧರ್ಮ ಸೂತ್ರೇ: ``ತತ್ವ ಸಂಜ್ಞಾಃ ಅಸಂಖ್ಯಾತಾಃ ಅಸಂಖ್ಯಾತ ಅಂಬರಂ ತಥಾ | ಅಸಂಖ್ಯಾ ದೇವಮುನಯಃ ಲಿಂಗತತ್ವೇ ವಿಲೀಯಂತೇ || ಅಸಂಖ್ಯಾತ ಸೂರ್ಯಚಂದ್ರಾಗ್ನಿ ತಾರಾಖ್ಯ ದೈತ್ಯ ಮಾನವಾಃ | ಅಸಂಖ್ಯಾತ ಸುರೇಂದ್ರಾಣಾಂ ಲಿಂಗಗರ್ಭೇ ವಿಲೀಯತೇ || ಅಸಂಖ್ಯಾ ಮಹಾವಿಷ್ಣವಃ ಅಸಂಖ್ಯಾತ ಪಿತಾಮಹಾಃ | ಅಸಂಖ್ಯಾತ ಮಹದಾಕಾಶಂ ಲಂಗಗರ್ಭೇ ವಿಲೀಯತೇ ||'' ಇಂತೆಂದುದಾಗಿ, ಇದಕ್ಕೆ ಶಿವಧರ್ಮ ಪುರಾಣೇ : ``ಕಲ್ಪಾಂತೇ ತಸ್ಯ ದೇವಸ್ಯ ಲೀಯತೇ ಸರ್ವದೇವತಾ | ದಕ್ಷಿಣೇ ಲೀಯತೇ ಬ್ರಹ್ಮಾ ವಾಮಭಾಗೇ ಜನಾರ್ಧನಃ || ಹೃದಯೇ ಚೈವ ಗಾಯತ್ರೀ ಸರ್ವದೇವೋತ್ತಮೋತ್ತಮಃ | ಲೀಯತೇ ಮೂಧ್ರ್ನಿ ವೈವೇದಾ ಷಡಂಗಪದಕ್ರಮಾತ್ || ಜಠರೇ ಲೀಯತೇ ಸರ್ವಂ ಜಗತ್‍ಸ್ಥಾವರ ಜಂಗಮಂ || ಉತ್ಪಾದ್ಯತೇ ಘನಸ್ತಸ್ಮಾತ್ ಬ್ರಹ್ಮಾದ್ಯಂ ಸಚರಾಚರಂ ||'' ಇಂತೆಂದುದಾಗಿ. ಇದಕ್ಕೆ ಶಿವಲಿಂಗಾಗಮೇ : ``ಚಿದ್ವ್ಯೋಮ ಲಿಂಗಮಿತ್ಯಾಹುಃ ಚಿದ್ಭೂಮಿ ತಸ್ಯ ಪೀಠಿಕಾ | ಆಲಯಃ ಸರ್ವದೇವಾನಾಂ ಲಯಾನಾಂ ಲಿಂಗಮುಚ್ಯತೇ || ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ | ಉತ್ಪದ್ಯಂತೇ ಪುನಸ್ತಸ್ಮಾತ್ ಬ್ರಹ್ಮಾವಿಷ್ಣಾದಿ ದೇವತಾಃ ||'' ಇಂತೆಂದುದಾಗಿ, ಇದಕ್ಕೆ ಮಕುಟಾಗಮಸಾರೇ : ``ಆದಿಮಧ್ಯಾಂತ ಶೂನ್ಯಂ ಚ ಶೂನ್ಯ ಶೂನ್ಯಂ ದಶಾದಿಶಂ | ಸರ್ವಶೂನ್ಯಂ ನಿರಾಕಾರಂ ನಿದ್ರ್ವಂದ್ವಂ ಪರಮಂ ಪದಂ ||'' ಇಂತೆಂದುದಾಗಿ, ಇದಕ್ಕೆ ಉತ್ತರವಾತುಲಾಗಮೇ : ``ನ ಭೂಮಿರ್ನಜಲಂ ಚೈವ ನ ತೇಜೋ ನ ಚ ವಾಯುಚ | ನಚಾಕಾಶಂ ನ ಸೂರ್ಯಶ್ಚ ನಚ ಚಂದ್ರಮಇಂದ್ರಯೋ | ನ ಚ ಬ್ರಹ್ಮ ನ ವಿಶ್ವಂ ಚ ನಚೋ ನಕ್ಷತ್ರಕಾರಕಾ | ಏಕಮೇವ ಪರಂ ನಾಸ್ತಿ ಅಖಂಡಿತಮಹೋದಯಂ | ಸರ್ವಶೂನ್ಯಂ ನಿರಾಲಂಬಂ ಸ್ವಯಂ ಲಿಂಗಮಯಂ ಪರಂ ||'' ಇಂತೆಂದುದಾಗಿ, ಇದಕ್ಕೆ ರುದ್ರಕೋಟಿಸಂಹಿತಾಯಾಂ : ``ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ | ಸರ್ವಶೂನ್ಯಂ ನಿರಾಕಾರಂ ಸ್ವಯಂಭುರ್ಲಿಂಗಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಮಹಾಗಮಸಾರೇ : ``ಊಧ್ರ್ವಶೂನ್ಯಂ ಅಧಃ ಶೂನ್ಯಂ ಮಧ್ಯಶೂನ್ಯಂ ನಿರಾಮಯಂ | ಸರ್ವಶೂನ್ಯಂ ನಿರಾಕಾರಂ ಸ್ವಯಂಭುರ್ಲಿಂಗಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಆದಿ ನಾರಾಯಣ ಉವಾಚ : ``ನಮಸ್ತೇ ಜ್ಞಾನಲಿಂಗಾಯ ಶಿವಲಿಂಗಾಯ ಲಿಂಗಿನೇ | ನಮಸ್ತೇ ಗೂಢಲಿಂಗಾಯ ಪರಲಿಂಗಾಯ ಲಿಂಗಿನೇ || ಜಗತ್ಕಾರಣಲಿಂಗಾಯ ಜಗತಾಂ ಪತಯೇ ನಮಃ | ಆವಯೋಃ ಪತಯೇ ನಮಃ ನಿತ್ಯಂ ಪತೀನಾಂ ಪತಯೇ || ಅನಾದಿಮಲಸಂಸಾರೇ ರೋಗವೈದ್ಯಾಯ ಶಂಭವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಪ್ರಳಯಾಂಬುಧಿ ಸಂಸ್ಥಾಯ ಪ್ರಳಯೋತ್ಪತ್ಯಹೇತವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಆದಿಮಧ್ಯಾಂತಶೂನ್ಯಾಯ ಅಂಬರಸ್ಯಾಪಿ ಹೇತವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ನಿಷ್ಕಳಾಯ ವಿಶುದ್ಧಾಯ ನಿತ್ಯಾನಂದಸ್ಯ ಹೇತವೇ | ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ನಿರ್ವಿಕಾರಾಯ ನಿತ್ಯಾಯ ಸತ್ಯಾಯ ಪರಮಾತ್ಮನೇ | ನಮಃಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಓಂಕಾರಾಂತಾಯ ಸೂಕ್ಷ್ಮಾಯ ಸ್ತ್ರೀಪುಂಸಾಯಾತ್ಮ ರೂಪಣೇ | ನಮಃಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ || ಲೀಲಾತ್ಮಂಚ ದ್ವಯೋರ್ಮಧ್ಯೇ ಕಾಯಾತ್ಮರೂಪಣೇ | ನಮಃಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||'' ಇಂತೆಂದುದಾಗಿ, ಇದಕ್ಕೆ ಮಹಾದೇವ ಉವಾಚ : ``ವಾಚಾತೀತಂ ಮನೋತೀತಂ ವರ್ಣಾತೀತಂ ಪರಂ ಶಿವಂ | ಸರ್ವಶೂನ್ಯಂ ನಿರಾಕಾರಂ ನಿರಾಲಂಬಸ್ಯ ಲಿಂಗಯೋಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕಳಾಧರ ಧರೆ ವಾರಿಧಿಸಹಿತ ಆರೂ ಇಲ್ಲದಂದು, ಪ್ರಮಥನೊಬ್ಬನಿದ್ದನೊಂದನಂತ ಕಾಲ. ಧರೆ ಅಂಬರ ವಾರಿಧಿಸಹಿತ ಆರೂ ಇಲ್ಲದಂದು ನಿರವಯ ನಿರ್ಮಾಯನಾಗಿದ್ದನೊಂದು ಕೋಟ್ಯನುಕೋಟಿ ವರುಷ. ಅಲ್ಲಿ ಅನಾಗತವುಂಟು. (ಮನವು ಮಹವಕ್ಕಾಡಿ ತತ್ತಲೆಯಾಗಿ) ಮತ್ತಂತಲ್ಲಿಯೆ ನಿರಾಳವ ಬೆರಸಿ ಬಯಲು ಬೆಸಲಾಯಿತ್ತು. ನರರು ಸುರರು ಮೊದಲಾದ ಚೌರಾಸಿಲಕ್ಷ ಜೀವರಾಸಿಗಳುದಯಿಸಿದವಯ್ಯಾ, ಕೂಡಲಚೆನ್ನಸಂಗಯ್ಯಾ ನಮ್ಮ ಬಸವಣ್ಣ ನೆನೆದಡೆ!
--------------
ಚನ್ನಬಸವಣ್ಣ
ತೆರೆಯಡಗಿದ ಸಾಗರದೊಳಗೆ ಆಕಾಶ ಬಿಂಬಿಸಿ ಅಂಬರ ಜಲವನೊಳಕೊಂಡಂತೆ, ದಿನಮಣಿ ಮಣಿಮುಕುರದಲ್ಲಿ ಹೊಳೆಯಲು ಮುಕುರವೇ ರವಿಯಾಗಿಪ್ಪಂತೆ, ಗುರುಶಿಷ್ಯ ಸಂಬಂಧ ಅಭಿನ್ನಸೇವ್ಯವಾದ ಬಳಿಕ ಗುರವೆಂದನಲುಂಟೆ ಶಿಷ್ಯಂಗೆ? ಶಿಷ್ಯನೆನಲುಂಟೆ ಗುರುವಿಂಗೆ? ಇಂತು ಉಭಯನಾಸ್ತಿಯಾದ ಉಪದೇಶ ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ಸ್ವಯವಾಯಿತ್ತು.
--------------
ಆದಯ್ಯ
ಆತ್ಮಸ್ಥಿತಿ ಶಿವಯೋಗ ಸಂಬಂಧವ ಅರಿದೆನೆಂದಡೆ ಹೇಳಿರಣ್ಣ ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವದ ವಿವರಮಂ ಪೇಳ್ವೆ; ಅಸ್ಥಿ ಮಾಂಸ ಚರ್ಮ ರುಧಿರ ಶುಕ್ಲ ಮೇಧಸ್ಸು ಮಜ್ಜೆ ಎಂಬ ಸಪ್ತಧಾತುವಿನ ಇಹವು, ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಎಂಬ ಪಂಚಜ್ಞಾನೇಂದ್ರಿಯಂಗಳಿಂದ ಶರೀರವೆನಿಸಿಕೊಂಬುದು. ಶಬ್ದ ಸ್ಪರ್ಶ ರೂಪು ರಸ ಗಂಧವೆಂಬಿವು ಪಂಚೇಂದ್ರಿಯಗಳು, ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬ ಪಂಚಕರ್ಮೇಂದ್ರಿಯಂಗಳಿವರು ಪರಿಚಾರಕರು, ಇಡಾ ಪಿಂಗಲಾ ಸುಷುಮ್ನಾ ಗಾಂಧಾರಿ ಹಸ್ತಿಜಿಹ್ವಾ ಪೂಷಾ ಅಲಂಬು ಲಕುಹಾ ಪಯಸ್ವಿನಿ ಶಂಖಿನಿಯೆಂಬ ದಶನಾಡಿಗಳಂ ಭೇದಿಸುತ್ತಂ. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುವಿನ ಸ್ಥಾನಂಗಳನರಿದು, ಆಧ್ಯಾತ್ಮಿಕ ಆಧಿದೈವಿಕ ಆದಿ¨sõ್ಞತಿಕವೆಂಬ ತಾಪತ್ರಯಂಗಳನರಿದು, ರಾಜಸ ತಾಮಸ ಸಾತ್ವಿಕವೆಂಬ ಗುಣತ್ರಯಂಗಳನಳಿದು, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಂಗಳು ತಿಳಿದು, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಂಗಳ ಗೆಲಿದು, ಜಾಯತೆ ಅಸ್ತಿತೆ ವರ್ಧತೆ ಪರಿಣಮತೆ ಅಪಕ್ಷೀಯತೆ ವಿನಶ್ಯತೆ ಎಂಬ ಷಡ್ಬಾವ ವಿಕಾರಂಗಳಂ ಬಿಟ್ಟು, ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣವೆಂಬ ಷಡೂರ್ಮಿಗಳ ವರ್ಮವ ತಿಳಿದು, ಜಾತಿ ವರ್ಣ ಆಶ್ರಮ ಕುಲ ಗೋತ್ರ ನಾಮವೆಂಬ ಷಡ್‍ಭ್ರಮೆಗಳಂ ತಟ್ಟಲೀಯದೆ. ಅನ್ನಮಯ ಪ್ರಾಣಮಯ ಮನೋಮಯ ಆನಂದಮಯವೆಂಬ ಪಂಚಕೋಶಂಗಳ ಸಂಬಂಧವನರಿದು, ಕುಲ ಛಲ ದಾನ ಯೌವನ ರೂಪು ರಾಜ್ಯ ವಿದ್ಯೆ ತಪವೆಂಬ ಅಷ್ಟಮದಂಗಳಂ ಕೆಡಿಸಿ, ಧರ್ಮ ಅರ್ಥ ಕಾಮ ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಂಗಳಂ ಕೆಡಿಸಿ, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧ ಮುಕ್ತಿಯ ಬಯಸದೆ, ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರರೆಂಬ ನಾಲ್ಕು ಜಾತಿಯಲ್ಲಿ ಭೇದವೆಂತೆಂದರಿದು ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ ಎಂಬ ಷಡುಚಕ್ರಂಗಳಂ ಭೇದಿಸಿ, ಕೃತಯುಗ ದ್ವಾಪರಯುಗ ಕಲಿಯುಗಂಗ?ಡಗಿ, ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮವೆಂಬ ಅಷ್ಟತನು ಮದಂಗಳ ಭೇದಾಭೇದಂಗಳ ಭೇದಿಸಿ, ಸ್ಥೂಲತನು ಸೂಕ್ಷ್ಮತನು ಕಾರಣತನು ಚಿದ್ರೂಪತನು ಚಿನ್ಮಯತನು ಆನಂದತನು ಅದ್ಭುತತನು ಶುದ್ಧತನುವೆಂಬ ಅಷ್ಟತನುವ ಏಕಾರ್ಥವಂ ಮಾಡಿ, ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ ಪೀತವರ್ಣ ಕಪ್ಪುವರ್ಣ ಗೌರವರ್ಣ ಶ್ವೇತವರ್ಣವೆಂಬ ಸಪ್ತಧಾತುಗಳ ಸ್ವಸ್ಥಾನವಂ ಮಾಡಿ, ಜಾಗ್ರ ಸ್ವಪ್ನ ಸುಷುಪ್ತಿ ಎಂಬ ಅವಸ್ಥಾತ್ರಯಂಗಳಂ ಮೀರಿ, ಜೀವಾತ್ಮ ಅಂತರಾತ್ಮ ಪರಮಾತ್ಮನೆಂಬೀ ಆತ್ಮತ್ರಯಂಗಳನೊಂದು ಮಾಡಿ, ಅಣಿಮಾ ಮಹಿಮಾ ಗರಿಮಾ ಲಘಿಮಾ ಪ್ರಾಪ್ತಿ ಪ್ರಾಕಾಮ್ಯ ವಶಿತ್ವ ಈಶತ್ವವೆಂಬ ಅಷ್ಟಸಿದ್ಧಿಗಳಂ ಬಿಟ್ಟು, ಅಂಜನಸಿದ್ಧಿ ಘುಟಿಕಾಸಿದ್ಧಿ ರಸಸಿದ್ಧಿ ತ್ರಿಕಾಲಜ್ಞಾನಸಿದ್ಧಿ ಎಂಬ ಅಷ್ಟಮಹಾಸಿದ್ಧಿಗಳಂ ತೃಣೀಕೃತಮಂ ಮಾಡಿಕೊಂಬುದು. ತನುವ್ಯಸನ ಮನವ್ಯಸನ ಧನವ್ಯಸನ ರಾಜ್ಯವ್ಯಸನ ವಿಶ್ವವ್ಯಸನ ಉತ್ಸಾಹವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನಂಗಳಂ ಬಿಟ್ಟು, ವಡಬಾಗ್ನಿ ಮಂದಾಗ್ನಿ ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ ಪಂಚಾಗ್ನಿಯಂ ಕಳೆದು, ಶರೀರಾರ್ಥ ಪರಹಿತಾರ್ಥ ಯೋಗಾರ್ಥ ಪರಮಾರ್ಥ ತತ್ವಾರ್ಥಂಗಳಲ್ಲಿ ಅವಧಾನಿಯಾಗಿ, ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬ ಷಡುಸ್ಥಲಂಗ?ಂ ಭೇದಿಸಿ, ದಾಸ ವೀರದಾಸ ಭೃತ್ಯ ವೀರಭೃತ್ಯ ಸಜ್ಜನಸಮಯಾಚಾರ ಸಕಲಾವಸ್ತೀಯರ್ಚನೆಯೆಂಬ ಷಡ್ವಿಧ ದಾಸೋಹದಿಂದ ನಿರಂತರ ತದ್ಗತವಾಗಿ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಯೋಗ ಸಮಾಧಿ ಎಂಬ ಅಷ್ಟಾಂಗ ಯೋಗದಲ್ಲಿ ಮುಕ್ತವಾಗಿ, ಬಾಲ ಬೋಳ ಪಿಶಾಚ ರೂಪಿಗೆ ಬಾರದ ದೇಹಂಗಳನರಿದು ಅನಿತ್ಯವಂ ಬಿಡುವುದು. ಲಯಯೋಗವನರಿದು ಹಮ್ಮ ಬಿಡುವುದು. ಮಂತ್ರಯೋಗವನರಿದು ಆಸೆಯಂ ಬಿಡುವುದು. ಮರೀಚಿಕಾಜಲದಂತೆ ಬೆಳಗುವ ಶರಣ ಆತ ರಾಜಯೋಗಿ, ಆತಂಗೆ ನಮೋ ನಮೋ ಎಂಬೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ನಿಮ್ಮಿಂದೆ ನೀವಿಟ್ಟ ಮಾಯೆ ನಿಮ್ಮಿಂದ ಬಂದು ಆವರಿಸಿ ನುಂಗುತಿರಲು ಇನ್ನಾರು ಬಿಡಿಸುವರಯ್ಯಾ ? ಕಡಲುಕ್ಕಿ ಪ್ರಳಯವಾದರೆ, ಅಂಬರ ಕಳಚಿ ಧರೆಗೆ ಬಿದ್ದರೆ, ಭೂಜಲವೈದಿದರೆ ಇನ್ನಾರು ಹೇಳಿಕೇಳುವರಯ್ಯಾ ? ನಿರಂಜನ ಚನ್ನಬಸವಲಿಂಗಾ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಕ್ಷಿಯ ಮಧ್ಯದ ಕಾಳಿಕೆಯ ನಟ್ಟನಡುವಳ ಸೂತ್ರ[ದೋ]ರುವ ಚಿನ್ನ ಉಡುಗಿದ ಮತ್ತೆ ಅಕ್ಷಿಯ ತೆರಪು ಎಷ್ಟಾದಡೇನು? ಆ ತೆರದಂತೆ, ¯õ್ಞಕಿಕದಲ್ಲಿ ಮಾಡುವ ವರ್ತಕ ವಸ್ತುವನರಿಯದ ಜ್ಞಾನ ಧನಕನಕ ವಾಜಿವಾಹನಂಗಳಿಂದ ಲೇಪನ ಅಂಬರ ತಸ್ಯಾಂತರ ನಿಳಯಂಗಳಿಂದ ಕೀರ್ತಿಭೂಷಣಕ್ಕೆ ಮಾಡಿದಡೇನು? ಇದನಳಿದು ಅದನರಿತು ಉಭಯ ತನ್ಮಯ ನಷ್ಟವಾಗಿ ಅದರ ಮರೆಯಲ್ಲಿ ಬೆಳಗು ತೋರುತ್ತದೆ ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಇನ್ನಷ್ಟು ... -->