ಆರು ವರ್ಣದ ಬೇರು ಮೂರು ವರ್ಣದ ಉದಕ,
ರವೆ ತೋರಬಾರದ ಕಲ್ಲು, ಇಂತಿವ ಮೀರಬಾರದ ಗುಂಡು.
ಇಂತಿವ ಭೇದಿಸಿ ಅರೆಯಲಾಗಿ ಸವೆಯಿತ್ತು ಮದ್ದು , ವಿಶ್ವಾಸವೆಂಬ ತಟ್ಟೆಯಲ್ಲಿ.
ಭಕ್ತಂಗೆ ಮೂರು, ಮಾಹೇಶ್ವರಂಗೆ ನಾಲ್ಕು,
ಪ್ರಸಾದಿಗೆ ಐದು, ಪ್ರಾಣಲಿಂಗಿಗೆ ಆರು,
ಶರಣಂಗೆ ಎಂಟು, ಐಕ್ಯಂಗೆ ಹತ್ತು ಇಂತೀ ಕ್ರಮದಲ್ಲಿ ಕೊಂಡ ಮತ್ತೆ ,
ಮೂರು ನಾಲ್ಕುಗೂಡಿ, ಆರು ಎಂಟುಗೂಡಿ,
ಎಂಟುಹತ್ತುಗೂಡಿ ನಷ್ಟವಾದ ಮತ್ತೆ ,
ರೋಗದ ಕಟ್ಟು ತೊಟ್ಟು ಬಿಟ್ಟಿತು.
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ.