ಜಿಹ್ವೆಂದ್ರಿಯವೆಂಬ ರೋಗ ಬಾಯಲ್ಲಿ ಹುಟ್ಟಿ,
ಗುಹ್ಯೇಂದ್ರಿಯವೆಂಬ ರೋಗ ಚಿತ್ತದಲ್ಲಿ ತತ್ತರಿಸುತ್ತಿದೆ ನೋಡಾ.
ಆಸೆಯೆಂಬ ರೋಗ ಸರ್ವಾಂಗದಲ್ಲಿ ಹೊಕ್ಕು,
ಸರ್ವರಿಗೆಲ್ಲಕ್ಕೂ ಪಾಷಂಡಿ ವೇಷಧಾರಿಗಳೆನಿಸುತ್ತಿದೆ ನೋಡಾ.
ಈ ರೋಗ ನಿರೋಗವಹುದಕ್ಕೊಂದು ಮದ್ದುಂಟು.
ಅದು ಬೇರು ಮೂರು, ಶಾಖೆ ಐದು, ಎಲೆ ಆರು, ಕೊನೆ ಇಪ್ಪತ್ತೈದು.
ಇಂತೀ ಗಿಡುವ ಸಹ ಮೂಲಸಹಿತ ತಂದು, ಕಂಗಳ ಕಲ್ಲಿನಲ್ಲಿ ಇಂಗಿಸಿ,
ಆನಂದಾಶ್ರುವೆಂಬ ಜಲವನೆರೆದು,
ಚಿತ್ತಶುದ್ಧವೆಂಬ ಗುಂಡಿನಲ್ಲಿ ಲಕ್ಷಿಸಿ ಅರೆಯಲಾಗಿ, ಮದ್ದು ನೀರೊಳಡಗಿತ್ತು .
ಕಲ್ಲು ಗುಂಡಿನಲ್ಲಿಗೆ ಸಾಧ್ಯವಲ್ಲದೆ ಹೋಯಿತ್ತು,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗದಲ್ಲಿಗೆ.