ಹೊರನಾಳ ಎಂಟುಕೋಟಿ, ಒಳನಾಳ ನೂರೆಂಟು.
ಹೊರದ್ವಾರ ಒಂಬತ್ತು, ಒಳದ್ವಾರ ಸರ್ವಾಂಗಮಯ.
ಇಂತೀ ಪಂಚತತ್ವ, ಅಷ್ಟಗುಣಂಗಳು ಕೂಡಿ,
ಘಟ್ಟಿಗೊಂಡ ತನು ಶುಕ್ಲ ಶೋಣಿತ ಮಜ್ಜೆ ಮಾಂಸ
ಎಲುವು ಸರ ಚರ್ಮ ರೋಮ.
ಇಂತೀ ಅಷ್ಟಗುಣಂಗಳ ಕಷ್ಟೋತ್ತರದಲ್ಲಿ ಸಿಕ್ಕಿದ ಆತ್ಮಂಗೆ,
ಇಂದ್ರಿಯಂಗಳ ರೋಗವಿಡಿದು ಬಂಧ ಮೋಕ್ಷ ಕರ್ಮಂಗಳೆಂಬ
ಶೀತ ಜ್ವರ ತಾಪಂಗಳಲ್ಲಿ ವ್ಯವಹರಿಸುವ ಆತ್ಮಂಗೆ,
ನಾನೊಂದು ನಿಹಿತದ ಮದ್ದ ಕಂಡೆ.
ಅದು ಅರೆವಡೆ ಅಸಾದ್ಯ, ಸುಮ್ಮನೆ ಮೆಲುವಡೆ ಸವೆಯದು.
ದೃಷ್ಟಿ ನಟ್ಟು ಮುಚ್ಚಿರಲಿಕ್ಕಾಗಿ ರೋಗರುಜೆ ಬಚ್ಚಬಯಲು,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನರಿಯಲಾಗಿ.