ಕಾಪಾಲಿಕವೆ ನರಕಪಾಲ ಬ್ಥಿಕ್ಷಾಟನಾದಿಗಳಂ ವಿವರಿಸೂದು. ಮಹಾವ್ರತವೆ
ಅಸ್ಥಿಧಾರಣಾದಿಗಳಂ ವಿವರಿಸುತ್ತಿರ್ಕುಂ. ಬಳಿಕ ಪರಶಿವಪ್ರಣೀತಮಾದ ಶಾಸ್ತ್ರ
ಮಂತ್ರವೆ ಮೋಕ್ಷಾಂಗಮಾದ ಕ್ರಿಯೆ ಚರ್ಯೆ ಯೋಗ ಜ್ಞಾನಾದಿಗಳಂ
ಪ್ರಮಾಣಿಸುತ್ತಿರ್ಕುಂ, ಮತ್ತಮಾ ಸಮಸ್ತಮತಾಂತರಂಗಳಲ್ಲಿ
ಪೇಳುವಾತ್ಮಸ್ವರೂಪವೆಂತೆನೆ:ದೇಹವೆ ಆತ್ಮನೆಂಬರು ಚಾರ್ವಾಕರು,
ಇಂದ್ರಿಯಂಗಳೆ ಆತ್ಮನೆಂಬರು ಚಾರ್ವಾಕೈಕ ದೇಶಿಗಳು, ಪ್ರಾಣವೆ ಆತ್ಮನೆಂಬರು
ಹಿರಣ್ಯಗರ್ಭರೆಂಬ ಚಾರ್ವಾಕೈಕ ದೇಶಿಗಳು. ಬಳಿಕ ದೇಹಾದಿ ವಿಲಕ್ಷಣನಾದೊರ್ವಾತ್ಮನು
ದೇಹಪರಿಮಿತವಾಗಿ ಮಧ್ಯಪರಿಮಾಣತ್ವದಿಂ ಸಂಕೋಚ ವಿಕಾಸ
ಧರ್ಮಯುಕ್ತನೆಂಬರು ಜೈನರು, ಬುದ್ಧಿಯೆ ಆತ್ಮನೆಂಬರು ಬೌದ್ಧರು,
ಆನಂದವೆ ಆತ್ಮನೆಂಬರು ಕೋಳಯಾಮಳ ಶಾಕ್ತೇಯರುಗಳು, ಆತ್ಮನು
ನಾಡಿಮಧ್ಯಗತನಾಗಿ ಅಣುಪರಿಮಾಣನೆಂಬರು ಪಾಂಚರಾತ್ರರು, ಆತ್ಮನು ದೇಹ
ಪುತ್ರಾದಿ ರೂಪನೆಂಬರು ಲೌಕಿಕರು, ಆತ್ಮನು ಸ್ವತಃ ಪ್ರಮಾಣಜ್ಞಾನ
ಸಮೇತನೆಂಬರು ವಿೂಮಾಂಸಕ ಭೇದಮಾದ ಭಾಟ್ಟ ಪ್ರಭಾಕರರುಗಳು,
ಆತ್ಮನು ಗಗನದಂತೆ ಮಹತ್ವರಿಮಾಣನಾಗಿ ಪಾಷಾಣದಂತೆ ಜಡಸ್ವರೂಪನಾದೊಡಂ
ಮನಃಸಂಯೋಗದಿಂ ಚಿದ್ಧರ್ಮಯುಕ್ತನೆಂಬರು ನೈಯಾಯಿಕ
ವೈಶೇಷಿಕರುಗಳು, ಆತ್ಮನು ಅಸಚ್ಚಿನ್ಮಾತ್ರನೆಂಬರು ಸಾಂಖ್ಯ ಪಾತಂಜಲರುಗಳು,
ಆತ್ಮನು ಜ್ಞಾಪ್ತಿಮಾತ್ರನೆಂಬರು ವೇದಾಂತಿಗಳು, ಆತ್ಮನು ನಿತ್ಯವ್ಯಾಪಕನೆಂಬರು
ಪಾಶುಪತ ಕಾಪಾಲಿಕ ಮಹಾವ್ರತರುಗಳು, ಆತ್ಮನು ನಿತ್ಯವಾಪಕ
ಜ್ಞಾನಕ್ರಿಯಾರೂಪನೆಂಬರು ಮಾಂತ್ರ ಸಂಜ್ಞಿತ ಸಿದ್ಧಾಂತಿಗಳೆಂದು
ಪೃಥಕ್ಕರಿಸಲ್ವೇಳ್ಕುಂ ಶಾಂತವೀರೇಶ್ವರಾ. ಇಂತೀ ಮತಾಂತರಂಗಳ
ಬ್ಥಿನ್ನಾಚರಣೆವಿಡಿವನಲ್ಲಯ್ಯ ಶರಣ ಶಿವಾದ್ವೈ [ತಿ] ಯಾಗಿ, ಮಹಾಗುರುಶಾಂತ
ವೀರಪ್ರಭುವೆ.