ನಿವಾರಕ ಕರ್ಮದೋಪಾದಿಯಲ್ಲಿ ಸೂಕ್ಷ್ಮವಾಗಿ ಶೀತವರ್ಣವಾಗಿ ಪ್ರಕಾಶಿಸುತ್ತಿರ್ದು
ಅಣುವಿನನೋಪಾದಿಯ ಶಿಖಿಯುಂಟು. ಅಂಥಾ ಶಿಖಿಯ ಮಧ್ಯದಲ್ಲಿ
ಪರಮಾತ್ಮಲಿಂಗವು ವಿಶೇಷ ವಾಗಿರುತ್ತಿದ್ರ್ದಿತು. ಧಾಣವೇ ಬಿಲ್ಲು, ಮನಸ್ಸೇ
ಬಾಣವು. ಪರಬ್ರಹ್ಮವೇ ಆ ಬಾಣಕ್ಕೆ ಗುರಿಯೆಂದು ಹೇಳಲ್ಪಡು ತ್ತಿದ್ದಿತು.
ಮರೆವೆಯಿಲ್ಲದುದರಿಂದ ಭೇದಿಸಲ್ತಕ್ಕುದು ಆ ಬಾಣದೋಪಾದಿಯಲ್ಲಿ
ಪರಬ್ರಹ್ಮಸ್ವರೂಪವಾದವನೇ ಶಿವಯೋಗೀಶ್ವರನಯ್ಯ, ಶಾಂತವೀರೇಶ್ವರಾ.