ವೈಶೇಷಿಕವೇ ದ್ರವ್ಯ ಗುಣ, ಕರ್ಮ ಸಾಮಾನ್ಯ ವಿಶೇಷ ಸಮವಾಯವೆಂಬ
ಷಟ್ಪದಾರ್ಥ ಪ್ರತಿಪಾದಕತ್ವದಿಂ, ಪ್ರಪಂಚ ಸ್ವರೂಪಮಂ ವಿಭಾಗಿಸುತ್ತಿರ್ಕುಂ, ಬಳಿಕ
ಕಪಿಲ ಪತಂಜಲಿ ವ್ಯಾಸರೆಂಬ ಮುನಿಗಳಿಂ ಕ್ರಮದಿಂ ನಿರೂಪಿತಂಗಳಾದ ಸಾಂಖ್ಯ ಪಾತಂಜಲ
ವೇದಾಂತಗಳೆಂಬ ಆತ್ಮಜ್ಞಾನಫಲವಾಗುಳ್ಳವೆ ಆದ್ಯಾತ್ಮಿಕ ಶಾಸ್ತ್ರ
ತ್ರಯಂಗಳವರಲ್ಲಿ ಸಾಂಖ್ಯವೆ ನಿತ್ಯನಿರ್ಮಲರಾದಾತ್ಮರ ಸನ್ನಿಧಾನದಿಂ ಗುಣ
ತ್ರಯಾತ್ಮಿಕ ಪ್ರಕೃತಿಯೆ ಪಂಚವಿಂಶತಿತತ್ವಾತ್ಮಕ ಸನ್ನಿಧಾನದಿಂ ಗುಣ
ತ್ರಯಾತ್ಮಿಕ ಪ್ರಕೃತಿಯೆ ಪಂಚವಿಂಶತಿತತ್ವಾತ್ಮಕ ಜಗವಾಗಿ ವ್ಯವಹರಿಸೂದೆ
ಸಂಸಾರ ಬಂಧವೆಂಬುದಂ ಸತ್ವಾದಿ ಗುಣತ್ರಯಾನುಕ್ರಮದಿಂ ಶ್ಲೇಷ್ಮಪ್ರಕೃತಿ
ಪಿತ್ತಪ್ರಕೃತಿ ವಾತಪ್ರಕೃತಿ[ಗಳುಳ್ಳ] ಶಾಂತಿಕ್ರೋಧಮೂಢತ್ವಾದಿ ಗುಣಾದಿಗಳಾದ
ಉತ್ತಮ ಮಧ್ಯಮ ಅಧಮ....ತ್ರಯದ....ಮೊದಲಾದವಂ ವಿಭಾಗಿಸೂ
ದಯ್ಯಾ ಶಾಂತವೀರೇಶ್ವರಾ.