ಉದಯದಲ್ಲಿ ಉತ್ಪತ್ತಿ, ಮಧ್ಯಾಹ್ನದಲ್ಲಿ ಸ್ಥಿತಿ,
ಅಸ್ತಮಾನದಲ್ಲಿ ಲಯವಪ್ಪುದು_
ಸರ್ವರಿಗೆಯೂ ಈ ವಿಧಿ ನೋಡಾ,
ಇನ್ನೇತಕ್ಕೆ ತೆರಹುಂಟು ?
ಮಧ್ಯಾಹ್ನದ ಸ್ಥಿತಿಯಲ್ಲಿ ಸಂಸಾರ ಪ್ರಪಂಚು ಕಾರಣ
ಹೊನ್ನು ಹೆಣ್ಣು ಮಣ್ಣು ಲಾಭನಿಮಿತ್ತ
ಆರಂಬ ವ್ಯವಹಾರ ಸೇವೆ
ಇಂತಿವರಲೂ ಅತಿಲಯವಪ್ಪುದು ತಪ್ಪದು.
ಉದಯೇ ಜನನಂ ನಿತ್ಯಂ ರಾvõ್ಞ್ರ ಚ ಮರಣಂ ತಥಾ
ಅಜ್ಞಾನಂ ಸರ್ವಜಂತೂನಾಂ ತದ್ವಿಧಿಶ್ಚ ಪುನಃ ಪುನಃ
ಎಂದುದಾಗಿ,
ಮರಳಿ ಮರಳಿ ಈ ವಿಧಿ ನೋಡಾ.
ಉತ್ಪತ್ತಿ ಸ್ಥಿತಿ ಲಯವ ಮೀರುವ
ನಿತ್ಯ ಸದ್ಗುರು ಲಿಂಗ ಜಂಗಮ ಪೂಜಾಕ್ರಿಯೆ
ನಿತ್ಯಂ ಲಿಂಗಾರ್ಚನಂ ಯಸ್ಯ ನಿತ್ಯಂ ಜಂಗಮಪೂಜನಂ
ನಿತ್ಯಂ ಗುರುಪದಧ್ಯಾನಂ ನಿತ್ಯಂ ನಿತ್ಯಂ ನ ಸಂಶಯಃ
ಇಂತೆಂದುದಾಗಿ,
ತ್ರಿವಿಧಲಿಂಗಾರ್ಚನೆಯಂ ಮಾಡಲು ನಿತ್ಯಪದವಪ್ಪುದು ಸತ್ಯ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.