ಅಂಗದೊಳಗಿರ್ಪ ಶಕ್ತಿಯಾತ್ಮಸಂಗದಿಂ ಪ್ರಕಾಶಮಾಗಿ,
ಆ ಶರೀರಕ್ಕೂ ತನಗೂ ಭೇದಮೆನಿಸಿಕೊಳ್ಳಲು,
ಅಲ್ಲಿ ಕರ್ಮವು ಉತ್ಪನ್ನಮಾಗಿ,
ಆ ಕರ್ಮಮುಖದಿಂ ಪ್ರಪಂಚವನವಗ್ರಹಿಸಲೋಸುಗ
ಸೃಷ್ಟಿಸ್ಥಿತಿಸಂಹಾರಂಗಳೆಸಗೆ,
ಆ ಶರೀರವು ವ್ಯಯವನೆಯ್ದಿ, ಪೃಥ್ವಿಯ ಚರಿಸುವಂದದಲಿ
ಲಿಂಗದಲ್ಲಿರ್ಪ ಶಿವನಿಂದ ತತ್ವಪ್ರಕಾಶಮಾಗಿ,
ಮನಸ್ಸಿನಲ್ಲಿ ಭೇದತೋರದೆ ಕೂಡಿದಲ್ಲಿ, ಜ್ಞಾನಮುತ್ಪನ್ನಮಾಯಿತ್ತು.
ಜ್ಞಾನಮುಖದಿಂ ಮನ ಮಹವನವಗ್ರಹಿಸಿ,
ಸತ್ತುಚಿತ್ತಾನಂದದಿಂ ಸಾಧಿಸುತ್ತಿರಲು, ಮನವಳಿದು ಲಿಂಗಮಪ್ಪುದು ಕಾಣಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.