ಬಸವ ನೀಲಲೋಚನೆ ಇಬ್ಬರ ನಾಮಾಕ್ಷರ ಕೂಡಲು
ಎಂಟಕ್ಷರಗಳಾದವು.
ಆ ಎಂಟಕ್ಷರಗಳೇ ಮಾಯಾಖ್ಯ ಪಂಚಾಕ್ಷರವಾದವು,
ಮಾಯಾಖ್ಯ ಪಂಚಾಕ್ಷರ ಎಂತೆಂದಡೆ :
ಓಂ ಹ್ರಾಂ ಹ್ರೀಂ ನಮಃಶಿವಾಯ.
ಸಾಕ್ಷಿ:
'ಬಕಾರಂ ಗುರುರೂಪಂ ಚ ಸಕಾರಂ ಲಿಂಗಮೇವ ಚ |
ವಕಾರಂ ಪರಮಾಖ್ಯಾತಂ ತ್ರಿವಿಧಂ ತತ್ತ್ವನಿರ್ಣಯಂ||
ನೀಲಲೋಚನೆ ಯಸ್ತು ನಾಮಾಕ್ಷರಂ ಪಂಚಕಂ |
ಸ್ತೋತ್ರಂ ವೇತ್ತಿ ತ್ರಿಸಂಧ್ಯಾಂ ಚ ಭಕ್ತಸ್ಸರ್ವಂ ಕಾಮಮೋಕ್ಷದಂ||'
ಎಂದುದಾಗಿ,
ಈ ಎಂಟಕ್ಷರವೇ ಎನ್ನ ಅಷ್ಟದಳಕಮಲದೊಳಗೆ
ಇಷ್ಟಲಿಂಗವಾಗಿ ನಿಂದ ನಿಲವ ತೋರಿದಾತ
ನಮ್ಮ ಶಾಂತಕೂಡಲಸಂಗಮದೇವ.