ಅಥವಾ
(4) (1) (3) (1) (0) (0) (0) (0) (1) (0) (0) (0) (1) (0) ಅಂ (2) ಅಃ (2) (1) (0) (5) (1) (0) (0) (0) (1) (0) (0) (0) (0) (0) (0) (0) (1) (0) (1) (1) (4) (2) (0) (1) (1) (0) (0) (0) (0) (5) (1) (2) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಿವನು ಗುರುಭಕ್ತರ ಮನವ ನೋಡುವುದಕ್ಕೆ ಕಂಟಕವನೊಡ್ಡುವನು, ಅಪರಾಧಗೊಡುವನು, ಭಾಗ್ಯವೆಲ್ಲ ಬಯಲುಮಾಡುವನು. ಬಂಧುಗಳೆಲ್ಲರ ವೈರಿಗಳ ಮಾಡುವನು, ದೇಶತ್ಯಾಗವÀ ಮಾಡಿಸುವನು, ಭಯಬ್ಥೀತಿಯನೊಡ್ಡುವನು, ಮನಕ್ಕೆ ಅಧೈರ್ಯವÀ ತೋರುವನು. ಸಾಕ್ಷಿ: 'ಪುಣ್ಯಮೇಕೋ ಮಹಾಬಂಧುಃ ಪಾಪಮೇಕೋ ಮಹಾರಿಪುಃ | ಅಸಂತೋಷೋ ಮಹಾವ್ಯಾದ್ಥಿಃ ಧೈರ್ಯಂ ಸರ್ವತ್ರಸಾಧನಂ || '' ಎಂದುದಾಗಿ, ''ಅಪರಾಧ್ಯೋರ್ಥನಾಶಂ ಚ ವಿರೋಧೋ ಬಾಂಧವೇಷು ಚ | ದೇಶತ್ಯಾಗೋ ಮಹಾವ್ಯಾದ್ಥಿಃ ಮದ್ಭಕ್ತಸ್ಯ ಸುಲಕ್ಷಣಂ || '' ಇಂತೀ ದುಃಖವೆಲ್ಲವು ಶಿವನ ಅನುಜ್ಞೆಯಿಂದ ಬಂದವೆಂದು ತಿಳಿದು, ಗುರುಲಿಂಗಜಂಗಮಕ್ಕೆ ಬಲಗೊಂಡು ನೀವೇ ಗತಿಯೆಂದು ನೀವೇ ಮತಿಯೆಂದು, ನೀವು ಹಾಲಲದ್ದಿರಿ ನೀರಲದ್ದಿರಿ ಎಂಬ ಭಾವದಲ್ಲಿದ್ದಡೆ ಅವರ ಶಿವನು ತನ್ನ ಗರ್ಭದಲ್ಲಿ ಇಂಬಿಟ್ಟುಕೊಂಬನು. ನಮ್ಮ ಶಾಂತಕೂಡಲಸಂಗಮದೇವ ತನ್ನ ನಂಬಿದವರ ಹೃದಯದಲ್ಲಿಪ್ಪನು.
--------------
ಗಣದಾಸಿ ವೀರಣ್ಣ
ಶಿವಭಕ್ತ ಆವ ಊರೊಳಗಿದ್ದರೇನು ? ಆವ ಕೇರಿಯಲಿದ್ದರೇನು ? ಹೊಲಗೇರಿಯೊಳಗಿದ್ದರೇನು ? ಶಿವಭಕ್ತನಿದ್ದುದೇ ಕೈಲಾಸ ! ಆತನ ಮನೆಯೇ ಶಿವನ ಅರಮನೆ ! ಆತನ ಮನೆಯ ಸುತ್ತಮುತ್ತಲಿದ್ದ ಲೋಕವೆಲ್ಲ ಶಿವಲೋಕ ! ಸಾಕ್ಷಿ : 'ಚಾಂಡಾಲವಾಟಿಕಾಯಾಂ ಚ ಶಿವಭಕ್ತಃ ಸ್ಥಿತೋ ಯದಿ | ಅತ್ಯ್ರಾಪಿ ಶಿವಲೋಕಃ ಸ್ಯಾತ್ ತದ್ಗøಹಂ ಶಿವಮಂದಿರಂ ||' ಎಂದುದಾಗಿ, ಇಂತಪ್ಪ ಶಿವಭಕ್ತನ ಅಂಗಳವ ಕಂಡಡೆ ಕೋಟಿ ಬ್ರಹ್ಮಹತ್ಯ ಕೋಟಿ ಶಿಶುಹತ್ಯ ಇವೆಲ್ಲ ಅಳಿದುಹೋಗುವವು. ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದವರಿಗೆ ಅಷ್ಟೈಶ್ವರ್ಯ ಅಷ್ಟಮಹಾಸಿದ್ಧಿ ಫಲವು ತಪ್ಪದು. ಅವರ ಒಕ್ಕುಮಿಕ್ಕ ಪ್ರಸಾದವ ಕೊಂಡಡೆ ಸದ್ಯೋನ್ಮುಕ್ತರಪ್ಪುದು ತಪ್ಪದು. ಇಂತಪ್ಪ ಶಿವಭಕ್ತರಿಗೆ ಏನೆಂದು ಉಪಮಿಸುವೆನಯ್ಯ ಆತನು ಮಹಾದೇವನಲ್ಲದೆ ಬೇರುಂಟೆ ? ಆತ ಅಗಮ್ಯ ಅಗೋಚರ ಅಪ್ರಮಾಣ ಆನಂದಮಹಿಮನು. ಅಂತಪ್ಪ ಸದ್ಭಕ್ತನ ಶ್ರೀಚರಣವ ಎನ್ನೊಳಗೆ ತೋರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ