ಶಿವನು ಗುರುಭಕ್ತರ ಮನವ ನೋಡುವುದಕ್ಕೆ
ಕಂಟಕವನೊಡ್ಡುವನು, ಅಪರಾಧಗೊಡುವನು,
ಭಾಗ್ಯವೆಲ್ಲ ಬಯಲುಮಾಡುವನು.
ಬಂಧುಗಳೆಲ್ಲರ ವೈರಿಗಳ ಮಾಡುವನು,
ದೇಶತ್ಯಾಗವÀ ಮಾಡಿಸುವನು,
ಭಯಬ್ಥೀತಿಯನೊಡ್ಡುವನು,
ಮನಕ್ಕೆ ಅಧೈರ್ಯವÀ ತೋರುವನು.
ಸಾಕ್ಷಿ:
'ಪುಣ್ಯಮೇಕೋ ಮಹಾಬಂಧುಃ ಪಾಪಮೇಕೋ ಮಹಾರಿಪುಃ |
ಅಸಂತೋಷೋ ಮಹಾವ್ಯಾದ್ಥಿಃ ಧೈರ್ಯಂ ಸರ್ವತ್ರಸಾಧನಂ || ''
ಎಂದುದಾಗಿ,
''ಅಪರಾಧ್ಯೋರ್ಥನಾಶಂ ಚ ವಿರೋಧೋ ಬಾಂಧವೇಷು ಚ |
ದೇಶತ್ಯಾಗೋ ಮಹಾವ್ಯಾದ್ಥಿಃ ಮದ್ಭಕ್ತಸ್ಯ ಸುಲಕ್ಷಣಂ || ''
ಇಂತೀ ದುಃಖವೆಲ್ಲವು
ಶಿವನ ಅನುಜ್ಞೆಯಿಂದ ಬಂದವೆಂದು ತಿಳಿದು,
ಗುರುಲಿಂಗಜಂಗಮಕ್ಕೆ ಬಲಗೊಂಡು
ನೀವೇ ಗತಿಯೆಂದು ನೀವೇ ಮತಿಯೆಂದು,
ನೀವು ಹಾಲಲದ್ದಿರಿ ನೀರಲದ್ದಿರಿ
ಎಂಬ ಭಾವದಲ್ಲಿದ್ದಡೆ
ಅವರ ಶಿವನು ತನ್ನ ಗರ್ಭದಲ್ಲಿ ಇಂಬಿಟ್ಟುಕೊಂಬನು.
ನಮ್ಮ ಶಾಂತಕೂಡಲಸಂಗಮದೇವ
ತನ್ನ ನಂಬಿದವರ ಹೃದಯದಲ್ಲಿಪ್ಪನು.