ಅಥವಾ
(4) (1) (3) (1) (0) (0) (0) (0) (1) (0) (0) (0) (1) (0) ಅಂ (2) ಅಃ (2) (1) (0) (5) (1) (0) (0) (0) (1) (0) (0) (0) (0) (0) (0) (0) (1) (0) (1) (1) (4) (2) (0) (1) (1) (0) (0) (0) (0) (5) (1) (2) (0) (2) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸಹಜ ಶಿವಭಕ್ತರಾದವರು ತಟ್ಟೆ ಬಟ್ಟಲೊಳಗುಂಡದ್ದು ಇಷ್ಟಲಿಂಗದ ಪ್ರಸಾದ. ಕರಕಮಲದೊಳಗುಂಡದ್ದು ಪ್ರಾಣಲಿಂಗದ ಪ್ರಸಾದ. ಪಾವಡ ಪರ್ಣದೊಳಗುಂಡದ್ದು ಭಾವಲಿಂಗದ ಪ್ರಸಾದ. ಲಿಂಗದಲ್ಲಿ ಮನ ನೋಟ ನಿಲಿಸಿಕೊಂಬುವುದು ಲಿಂಗಪ್ರಸಾದ. ಲಿಂಗದಲ್ಲಿ ಮನ ನೋಟವಿಲ್ಲದೆ ಕೊಂಬುದು ಅನರ್ಪಿತವು. ಅದು ಕಾರಣ, ಲಿಂಗ ನೆನಹಿನಿಂದಲೆ ಸ್ವೀಕರಿಸುವುದು ಎಂದರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಸತ್ತು ಚಿತ್ತು ಆನಂದ ನಿತ್ಯಪರಿಪೂರ್ಣ ಮಹಾಘನಲಿಂಗವು ಭಕ್ತಂಗೆ ಸಾಕಾರವಾಗಿ ತನುತ್ರಯಕ್ಕೆ ಇಷ್ಟ-ಪ್ರಾಣ-ಭಾವಲಿಂಗ ಸ್ವರೂಪವಾಗಿರ್ದ ಕಾರಣ, ನಡೆವುತ್ತ ನುಡಿವುತ್ತ ಸರ್ವಾವಸ್ಥೆಯಲ್ಲಿ ಲಿಂಗದೊಳಗಿಪ್ಪಾತನೆ ಭಕ್ತ. ಹೀಗಲ್ಲದೆ ನಿತ್ಯವಾದ ಲಿಂಗಕ್ಕೆ ಕೇಡ ಬಯಸುವ ತನ್ನ ಸಂಕಲ್ಪ ವಿಕಲ್ಪ ಸಂದೇಹದಿಂದ ನುಡಿದಡೆ ತನ್ನ ಭಾವಕ್ಕಲ್ಲದೆ ಆ ಮಹಾಘನಲಿಂಗವ ನಂಬಿದವರಿಗೆ ಇಂಬಾಗಿಪ್ಪನು ವಿಶ್ವಾಸದಿಂದ. ವಿಶ್ವಾಸದಿಂದ ಗೊಲ್ಲಾಳಯ್ಯಂಗೆ ಕುರಿಯ ಹಿಕ್ಕೆ ಲಿಂಗವಾದುದಿಲ್ಲವೆ ? ಸದ್ಭಾವದಿಂದ ಬಳ್ಳೇಶಮಲ್ಲಯ್ಯಂಗೆ ಬಳ್ಳ ಲಿಂಗವಾದುದಿಲ್ಲವೆ? ಭಾವದಿಂದ ನಂಬೆಣ್ಣಂಗೆ ಅಂಗನೆಯ ಕುಚ ಲಿಂಗವಾದುದಿಲ್ಲವೆ ? ವಿಶ್ವಾಸದಿಂದ ಕೆಂಬಾವಿ ಭೋಗಣ್ಣಂಗೆ ಲಿಂಗ ಒಡನೆ ಹೋದುದಿಲ್ಲವೆ? ಮತ್ತೆ ಇಷ್ಟಲಿಂಗದೊಳಗೆ ನೀಲಲೋಚನೆಯಮ್ಮನವರ ಶರೀರವೆ ಏಕಾಕಾರವಾಗಲಿಲ್ಲವೆ ? ಸಾಕ್ಷಿ: ''ಕರ್ಪೂರಮನಲಗ್ರಾಹ್ಯಂ ರೂಪಂ ನಾಸ್ತಿ ನಿರಂತರಂ | ತಥಾ ಲಿಂಗಾಂಗಸಂಯೋಗೇ ಅಂಗೋ ನಿರ್ವಯಲಂ ಗತಃ ||' ಎಂದುದಾಗಿ, ಇಂತಪ್ಪ ದೃಷ್ಟವ ಕಂಡು ನಂಬದಿರ್ದಡೆ ಕರ್ಮದ ಫಲವು. ಇಂತಪ್ಪ ಮಹಾಲಿಂಗದ ನಿಲವ ಅರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ದುರ್ಭಾವಕರು ಎತ್ತ ಬಲ್ಲರು ನೋಡಾ !
--------------
ಗಣದಾಸಿ ವೀರಣ್ಣ