ಎನ್ನ ಕ್ರಿಯಾಜ್ಞಾನದ ಕೂಟ
ಮಡಕೆ ಮಣ್ಣಿನಂತಾಯಿತ್ತಯ್ಯಾ,
ಭ್ರಮರ ಗಂಧದಂತಾಯಿತ್ತು ತಂದೆ.
ಮಧುರ ವಾಣಿಯಂತೆ ಸರ ಶರಧಿಯಂತಾಯಿತ್ತಯ್ಯಾ.
ಅಮೃತ ಅಮೃತದಂತಾಯಿತ್ತು.
ಬೆಳಗಿನಂತೆ ಬಯಲು ಬೆಳಗಿನಂತಾಯಿತ್ತು.
ಎಡೆ ಬಿಡುವಿಲ್ಲದೆ ಕಡೆನಡು ಮೊದಲೆನ್ನದೆ
ಸಕ್ಕರೆಯ ದಂಡದಂತೆ ಆ ಗುಣವೆತ್ತಲೂ ಸರಿ,
ಎಲೆ ಅಚ್ಯುತಪ್ರಿಯ, ರಾಮನಾಥಾ ನಿಮ್ಮಲ್ಲಿ ಎನಗೆ.