ಗ ಪದದಿಂದ ಪ್ರಾರಂಭವಾಗುವ ವಚನಗಳು:
ಗಂಡ ಸತ್ತ ಮುಂಡೆಗೆ ಮೂವರು ಮಿಂಡರು.ಒಬ್ಬಂಗೆ ಅಂಡಿನ ಆಶೆ,ಒಬ್ಬಂಗೆ ಖಂಡಿಯಾಶೆ,ಒಬ್ಬಂಗೆ ಮಂಡೆಯಾಶೆ.ಇಂತೀ ಮೂವರಿಗಾದ ಸೂಳೆ ಸೂಳಕೊಡುವ ಪರಿಯಿನ್ನೆಂತೊ?ಅಂಡಿಗೆ ಖಂಡಿಗೆ ಮಂಡೆಗೆ ದಿಂಡೊಂದೆಮೂವರು ಕೊಂದಾಡುತ್ತಿದ್ದರು.ಅಭಿಸಂಧಿಯ ತಿಳಿ ನಾರಾಯಣಪ್ರಿಯ ರಾಮನಾಥಾ.
ಗಡಿಗೆ ಗುಡವನು ನುಂಗಿತ್ತುಅಡಿಯಲ್ಲಿದ್ದ ಕುಡಿಕೆ ಆ ಉಭಯವ ನುಂಗಿತ್ತು.ನುಂಗಿಹೆನೆಂದ ಚಿತ್ತವ ಸಂದೇಹ ನುಂಗಿತ್ತು.ಈ ಉಭಯದ ಸಂದೇಹದ ಸಂಚಹಿಂಗಿಯಲ್ಲದೆ ಲಿಂಗವಿಲ್ಲನಾರಾಯಣಪ್ರಿಯ ರಾಮನಾಥಾ.
ಗುರುವ ನುಡಿಯಬಾರದೆಂದು ಅಡಗಿಪ್ಪುದೆ ಗುರುದ್ರೋಹ.ಅಪ್ಪು ನಷ್ಟವಾದಲ್ಲಿ ತಪ್ಪದೆ ಬೆಳೆ?ಘಟವಳಿದಲ್ಲಿ ಆತ್ಮಂಗೆ ಮಠವಿಲ್ಲ.ಗುರುವಿನ ಮರವೆ ಶಿಷ್ಯನ ವಿಶ್ವಾಸದ ಕೇಡು.ಕೈಗೆ ಕಣ್ಣು ಮನ ಅಂಗಕ್ಕೆ ಬೇರೆ ನೋವುಂಟೆ?ಬಿತ್ತು ನಷ್ಟವಾದಲ್ಲಿ ಅಂಕುರವುಂಟೆ?ನೋವ ಗುರು ಇದಕ್ಕಂಜಿ ಹೇಳದ ಶಿಷ್ಯಕಿವಿಮೂಳ ಮೌಕ್ತಿಕದ ಜಾವಳಿಯ ಗಳಿಸಿದಂತೆನಾರಾಯಣಪ್ರಿಯ ರಾಮನಾಥಾ.
ಗೋವಿನ ಮರೆ ವಿಹಂಗನಂತಾಗಲಾಗದು.ತೋಹಿನ ಮರೆಯಲ್ಲಿದ್ದ ಶಬರನಂತಾಗಲಾಗದು.ಲಾಂಛನದ ಮರೆಯಲ್ಲಿದ್ದ ವೇಷಧಾರಿಯಂತಾಗಲಾಗದು.ಹೊರವೇಷಮಂ ತೊಟ್ಟು ವ್ಯಾಪ್ತಿಯ ಮನುಜರಂತೆ ನಡೆದು ಮತ್ತೆಅರಿವೇಕೆ ನಾರಾಯಣಪ್ರಿಯ ರಾಮನಾಥಾ.