ಖೇಚರರಾಗಲಿ, ಭೂಚರರಾಗಿಲಿ,
ಪುರಹರರಾಗಲಿ, ಮಧ್ಯಸ್ಥರಾಗಲಿ,
ಪವನನುಂಡುಂಡು ದಣಿಯದವರಾಗಲಿ,
ಅಗ್ನಿ ಪರಿಹರರಾಗಲಿ,
ಖೇಚರರೊಳು ಬಸವಾಜ್ಞೆ, ಭೂಚರರೊಳು ಬಸವಾಜ್ಞೆ.
ಪುರಹರರೊಳು ಬಸವನ ಮಹಾರತಿ.
ಮಧ್ಯಸ್ಥರೊಳು ಬಸವನೇಕಾಂತವಾಸಿ.
ಪವನದೊಳು ಬಸವ ಹೇಳಿತ್ತ ಕೇಳುವೆ.
ಅಗ್ನಿಯೊಳು ಬಸವಂಗೆ ದಾಸೋಹವ ಮಾಡುವೆ.
ಎನ್ನನೀ ಪರಿಯಲ್ಲಿ ಸಲಹಿದಾತ ಬಸವಣ್ಣ ಕಾಣಾ
ಕಲಿದೇವರದೇವಯ್ಯಾ.