ದೀಕ್ಷಾಗುರುವಾಗಿ ಬಂದು ಬ್ರಹ್ಮನ ಉತ್ಪತ್ಯವ ತೊಡೆದೆ,
ಶಿಕ್ಷಾಗುರುವಾಗಿ ಬಂದು ಆತ್ಮನ ಪ್ರಕೃತಿಯ ಕೆಡಿಸಿದೆ;
ಮೋಕ್ಷಗುರುವಾಗಿ ಬಂದು ತ್ರಿವಿಧ ಮಲದ ಕೆಡಿಸಿ ಮುಕ್ತನಮಾಡಿದೆ.
ಎನ್ನ ಲೀಲೆಗೆ ಗುರು ರೂಪಾಗಿ, ಸುಲೀಲೆಗೆ ಲಿಂಗರೂಪಾಗಿ,
ನಿಜಲೀಲೆಗೆ ಜಂಗಮರೂಪಾಗಿ,
ಇಂತೀ ತ್ರಿವಿಧ ರೂಪಾಗಿ ಬ್ಥಿನ್ನನಾದೆಯಲ್ಲಾ ಭಕ್ತಿ ಕಾರಣನಾಗಿ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ,
ಮಾತುಳಂಗ ಮಧುಕೇಶ್ವರನು.