ಅಥವಾ
(3) (2) (1) (0) (2) (0) (0) (0) (0) (1) (0) (0) (0) (0) ಅಂ (1) ಅಃ (1) (9) (0) (1) (0) (0) (0) (0) (2) (0) (0) (0) (0) (0) (0) (0) (10) (0) (2) (0) (3) (2) (0) (2) (1) (1) (0) (0) (0) (0) (1) (5) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶಾಸ್ತ್ರ ಪ್ರಮಾಣವೆಂಬ ಬೆಟ್ಟದಲ್ಲಿ ವಾಚಾರಚನೆಯೆಂಬ ಹುಲಿ ಹುಟ್ಟಿ, ಅರಿದೆನೆಂಬ ಹಿರಿದಪ್ಪ ಬೆಟ್ಟದಲ್ಲಿ ಗೆಲ್ಲ ಸೋಲವೆಂಬ ಮತ್ತಗಜ ಹುಟ್ಟಿ, ಮೊನೆ ಮುಂಬರಿದು ಹರಿದ ಬೆಟ್ಟದಲ್ಲಿ ಪರಿಭ್ರಮಣದ ತೋಳ ಹುಟ್ಟಿ, ಹುಲಿ ಹುಲ್ಲೆಯ ಕೋಡಿನಲ್ಲಿ ಸತ್ತು ಗಜ ಅಜದ ಮೆಲುಕಿನಲ್ಲಿ ಸಿಕ್ಕಿ, ತೋಳ ಉಡುವಿನ ಕಣ್ಣಿನೊಳಡಗಿತ್ತು. ತುರುವಿನ ಮುಂದೆ ಬರಿಕೆಯಿವುತ್ತಿದೆ ಗೋಪತಿನಾಥ ವಿಶ್ವೇಶ್ವರಲಿಂಗವನರಿತೆಹೆನೆಂದು.
--------------
ತುರುಗಾಹಿ ರಾಮಣ್ಣ
ಶ್ವೇತ ಪೀತ ಕಪೋತ ಕೃಷ್ಣ ಗೌರ ಮಾಂಜಿಷ್ಟ ಕಪಿಲಿ ಕರ್ಬುರ ಅಳಗು ಬೊಟ್ಟಳಗ ಇಂತೀ ದಶವರ್ಣದ ಪಶುನಾಮದ ಅಸುವನರಿತು ಸಂಜ್ಞೆ ಗರ್ಜನೆ ತಾಡನೆ ತ್ರಿವಿಧ ಭೇದಂಗಳಿಂದ ಕಾದೊಪ್ಪಿಸಬೇಕು ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ.
--------------
ತುರುಗಾಹಿ ರಾಮಣ್ಣ
ಶ್ರುತದಲ್ಲಿ ಕೇಳಿ ದೃಷ್ಟದಲ್ಲಿ ಕಂಡು ಅನುಮಾನದಲ್ಲಿ ಅರಿದು ಮತ್ತೆ ಉಪದೃಷ್ಟದಲ್ಲಿ ಅನ್ಯಭಿನ್ನವ ಮಾಡಿ ಕೇಳಲೇತಕ್ಕೆ? ತಾನರಿದ ಕಲೆಯ ಇದಿರಲ್ಲಿ ದೃಷ್ಟವ ಕೇಳಲೇತಕ್ಕೆ? ಇದು ಪರಿಪೂರ್ಣಭಾವ, ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿ ಉಭಯವಳಿದಕೂಟ.
--------------
ತುರುಗಾಹಿ ರಾಮಣ್ಣ
ಶಕ್ತಿ ಸಮೇತವಾಗಿ ಇಹನ್ನಕ್ಕ ಬಿಂದುವಿನ ಸತ್ವ ಕೂಟಸ್ಥಬಿಂದು ಜಾರಿದಲ್ಲಿ ನಿಂದಿತ್ತು ಸತ್ವ ಅರಿವು ಮುಖದಿಂದ ಕ್ರಿಯಾಶಕ್ತಿಯ ಕೂಟ ಆರಿವು ಜಾರಿದಲ್ಲಿ ಮರೆದು ಹೋಯಿತ್ತು ಕ್ರಿಯಾಭೇದ. ನಾನರಿವುದಕ್ಕೆ ಅರಿವ ತೋರು ನೋಡುವುದಕ್ಕೆ ಕುರುಹ ತೋರು ನಾನಡುಗುವುದಕ್ಕೆ ಗುಡಿಯ ತೋರು ಗೋಪತಿನಾಥ ವಿಶ್ವೇಶ್ವರಲಿಂಗಾ.
--------------
ತುರುಗಾಹಿ ರಾಮಣ್ಣ
ಶ್ರೀಗುರುವಿನ ಸಂದರ್ಶನಕ್ಕೆ ಹೋದಲ್ಲಿ ಮೂರ್ತಿಧ್ಯಾನದಿಂದ ಮಹಾಪ್ರಸಂಗವ ಮಹಾಪ್ರಸಾದವೆಂದು ಕೈಕೊಂಡು, ಆ ಗುಣ ಗುರುಭಕ್ತಿ ಸಾಧನ, ಶಿವಲಿಂಗ ಪೂಜೆಯ ಮಾಡುವಲ್ಲಿ ಪರಾಕು ಪರಿಭ್ರಮಣ ಪ್ರಕೃತಿಭಾವ ಪಗುಡಿ ಪರಿಹಾಸಕರ ವಾಗ್ವಾದಿಗಳ ಕೂಡದೆ ಕಂಗಳಲ್ಲಿ ಹೆರೆಹಿಂಗದೆ, ಭಾವದಲ್ಲಿ ಬೈಚಿಟ್ಟುಕೊಂಡು ಹೆರೆಹಿಂಗದಿರವು ಶಿವಲಿಂಗಪೂಜಕನ ಭಾವ ಜಂಗಮ ಸೇವೆಯ ಮಾಡುವಲ್ಲಿ ಇಷ್ಟ ಕಾಮ್ಯ ಮೋಕ್ಷಂಗಳನರಿತು ಆಶನ ವಿಷಯ ರೋಷ ಆಸಕರನರಿತು ವರ್ಮಕ್ಕೆ ವರ್ಮ, ಧರ್ಮಕ್ಕೆ ಮುಕ್ತಿ, ವೈಭವಕ್ಕೆ ಖ್ಯಾತಿ ಲಾಭಂಗಳನರಿತು ಮಾಡಿದ ದ್ರವ್ಯ ಕೇಡಿಲ್ಲದಂತೆ ಅಡಗಿಪ್ಪುದು ಜಂಗಮಭಕ್ತಿ; ಇಂತೀ ತ್ರಿವಿಧಭಕ್ತಿಯಲ್ಲಿ ನಿರತ ಸ್ವಯ ಸನ್ನದ್ಧನಾಗಿಪ್ಪ ಭಕ್ತನ ಪಾದದ್ವಯವೆ, ಗೋಪತಿನಾಥ ವಿಶ್ವೇಶ್ವರಲಿಂಗವಿಪ್ಪ ಸಜ್ಜಾಗೃಹ.
--------------
ತುರುಗಾಹಿ ರಾಮಣ್ಣ