ನೀನು ಅಂಗದಲ್ಲಿ ಕಡಿದುದ ಬಿಟ್ಟು
ಬಿಟ್ಟು ನೋಡಿ ನಿನ್ನ ಕುರುಹ ಕಾಣೆ.
ನೀನು ಕರ್ಣದಲ್ಲಿ ಹೇಳಿದುದ ನೆನೆದು ನೆನೆದು ಮನದಲ್ಲಿ ನಿಲ್ಲೆ.
ನೀ ಬಿಡೆಂದುದ ಬಿಟ್ಟೆ, ನೀ ಹಿಡಿಯೆಂದುದ ಹಿಡಿದೆ.
ನೀ ಅರಿಯೆಂದುದ ಮುಖಗುರುಹ ಕಾಣೆ.
ನಿನ್ನರಿಕೆ ಇನ್ನೆಂದಿಗೆ?
ಈ ಘಟವ ಬಿಡುವುದಕ್ಕೆ ಮೊದಲೆ
ನಿನ್ನಡಿಯ ಗುಡಿಯ ತೋರು
ಗೋಪತಿನಾಥ ವಿಶ್ವೇಶ್ವರಲಿಂಗಾ.