ಭಕ್ತಂಗೆ ವಿಶ್ವಾಸ, ಮಾಹೇಶ್ವರಂಗೆ ನೈಷ್ಢೆ, ಪ್ರಸಾದಿಗೆ ಅಯೋಚಿತ,
ಪ್ರಾಣಲಿಂಗಿಗೆ ಮುಟ್ಟಿದಲ್ಲಿ ಅರ್ಪಿತಭೇದ,
ಶರಣಂಗೆ ದೃಷ್ಟದಲ್ಲಿ ಮುನ್ನವೆ ಬಿಡುಗಡೆ,
ಐಕ್ಯಂಗೆ ಕುರುಹುಗೊಂಬುದಕ್ಕೆ ಮುನ್ನವೆ ನಿರಾಳ.
ಇಂತೀ ಷಟ್ಸ್ಥಲವಾದ ಭೇದ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು
ಎನಗೆ ಉಮಾಮಹೇಶ್ವರನಾದಹನೆಂದು.