ಕೋಟಿ ಮಾತನಾಡಿದಡೂ ವಸ್ತುವಿನ ಕೂಟವೊಂದೆ ಭೇದ. ನಾನಾ ಕ್ರೀಯ ಭಾವಿಸಿದಡೂ ಸದ್ಭಾವವೊಂದೆಯಾಗಬೇಕು. ಊರ ಸುತ್ತಿದಡೂ ಬಾಗಿಲಲ್ಲಿ ಬರಬೇಕು. ಮರೆಯ ಮಾತು ಬೇಡ. ಅರ್ಕೇಶ್ವರಲಿಂಗವನರಿತಲ್ಲದಾಗದು.
ಕಂಗಳ ಮಧ್ಯದ ಮಲೆಯಲ್ಲಿ, ಒಂದು ನಿಸ್ಸಂಗಶೃಂಗಿ ಮೇವುತ್ತದೆ. ಅಂಬೊಂದು, ಹಿಳುಕು ಮೂರು, ಅಲಗಾರು, ಮೊನೆ ಅಯಿದು ಕೂಡಿದಲ್ಲಿ, ಧನು ನಾಲ್ಕು ಹಿಡಿದು, ನಾರಿಯೆಂಟ ಕೂಡಿ, ಶರಸಂಧಾನದಲೆಸೆಯೆ, ಶೃಂಗಿ ಬಿದ್ದಿತ್ತು, ಅಸು ಬದುಕಿತ್ತು, ಅರ್ಕೇಶ್ವರಲಿಂಗವನರಿದ ಕಾರಣ.