ತನುತ್ರಯಂಗಳಲ್ಲಿ
ಕ್ರಿಯಾಗುರು-ಜ್ಞಾನಗುರು-ಮಹಾಜ್ಞಾನಗುರುವ
ಸಂಬಂಧವ ಮಾಡಿಕೊಂಡು,
ಮನತ್ರಯಂಗಳಲ್ಲಿ
ಕ್ರಿಯಾಲಿಂಗ-ಜ್ಞಾನಲಿಂಗ-ಮಹಾಜ್ಞಾನಲಿಂಗವ
ಸಂಬಂಧವ ಮಾಡಿಕೊಂಡು,
ಭಾವತ್ರಯಂಗಳಲ್ಲಿ
ಕ್ರಿಯಾಜಂಗಮ-ಜ್ಞಾನಜಂಗಮ-ಮಹಾಜ್ಞಾನಜಂಗಮವ
ಸಂಬಂಧವ ಮಾಡಿಕೊಂಡು
ಆತ್ಮತ್ರಯಂಗಳಲ್ಲಿ
ಕ್ರಿಯಾಪಾದೋದಕ-ಜ್ಞಾನಪಾದೋದಕ-ಮಹಾಜ್ಞಾನಪಾದೋದಕವ
ಸಂಬಂಧವ ಮಾಡಿಕೊಂಡು,
ಅವಸ್ಥಾತ್ರಯಂಗಳಲ್ಲಿ
ಕ್ರಿಯಾಪ್ರಸಾದ-ಜ್ಞಾನಪ್ರಸಾದ-ಮಹಾಜ್ಞಾನಪ್ರಸಾದವ
ಸಂಬಂಧವ ಮಾಡಿಕೊಂಡು,
ಕರಣತ್ರಯಂಗಳಲ್ಲಿ
ಕ್ರಿಯಾಭಸಿತ-ಜ್ಞಾನಭಸಿತ-ಮಹಾಜ್ಞಾನಭಸಿತವ
ಸಂಬಂಧವ ಮಾಡಿಕೊಂಡು,
ಜೀವತ್ರಯಂಗಳಲ್ಲಿ
ಕ್ರಿಯಾರುದ್ರಾಕ್ಷಿ-ಜ್ಞಾನರುದ್ರಾಕ್ಷಿ-ಮಹಾಜ್ಞಾನರುದ್ರಾಕ್ಷಿಗಳ
ಸಂಬಂಧವ ಮಾಡಿಕೊಂಡು,
ಗುಣತ್ರಯಂಗಳಲ್ಲಿ
ಕ್ರಿಯಾಮಂತ್ರ-ಜ್ಞಾನಮಂತ್ರ-ಮಹಾಜ್ಞಾನಮಂತ್ರವ
ಸಂಬಂಧವ ಮಾಡಿಕೊಂಡರು ನೋಡ.
ಕಾರಣ ಕಂಥೆಯ ಧರಿಸಿ ತ್ರಿವಿಧವಿಚಾರವಿಡಿದು ಆಚರಿಸುವರೆ
ಅನಾದಿಸದ್ಭಕ್ತ ಶಿವಶರಣಗಣಂಗಳು ನೋಡ
ಸಂಗನಬಸವೇಶ್ವರ.